Thursday, June 20, 2024

ಸತ್ಯ | ನ್ಯಾಯ |ಧರ್ಮ

ಸನಾತನ ಧರ್ಮವು ಜಾತಿಯ ಆಧಾರದ ಮೇಲೆ ದೇಶವನ್ನು ಒಡೆದಿದೆ: ತಮಿಳುನಾಡು ಸ್ಪೀಕರ್

ತಮಿಳುನಾಡು ಅಸೆಂಬ್ಲಿ ಸ್ಪೀಕರ್ ಅಪ್ಪಾವು ಅವರು ಭಾನುವಾರದಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತದಲ್ಲಿ ಜಾತಿ ಮತ್ತು ಬ್ರಿಟಿಷ್ ವಸಾಹತುಶಾಹಿ ಇತಿಹಾಸದ ಪಾತ್ರದ ಬಗ್ಗೆ ಗಮನಾರ್ಹವಾದ ಟೀಕೆಗಳನ್ನು ಮಾಡಿದ್ದು, ದೇಶದಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಲನಶೀಲತೆಯ ಬಗ್ಗೆ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

ಸನಾತನ ಧರ್ಮದ ಪ್ರತಿಪಾದಕರಾದ ತಮಿಳುನಾಡು ರಾಜ್ಯಪಾಲ ಎನ್‌ ರವಿ ಬ್ರಿಟಿಷ್ ವಸಾಹತುಶಾಹಿ ಭಾರತೀಯ ಸಂಸ್ಕೃತಿಯನ್ನು ನಾಶ ಮಾಡಿದೆ ಎಂದು ಹೇಳಿರುವುದನ್ನು ಅಪ್ಪಾವು ಖಂಡಿಸಿದರು.

ರಾಜ್ಯಪಾಲ ಆರ್.ಎನ್.ರವಿ ಅವರ ನಿಲುವನ್ನು ವಿರೋಧಿಸಿದ ಸ್ಪೀಕರ್ ಅಪ್ಪಾವು, ಬ್ರಿಟಿಷರು 1795ರಲ್ಲಿ, ಐತಿಹಾಸಿಕ ನಿರ್ಬಂಧಗಳನ್ನು ಮುರಿದು ಶೂದ್ರ ಜಾತಿಗಳಿಗೂ ಭೂಮಿಯನ್ನು ಹೊಂದಲು ಅವಕಾಶ ಮಾಡಿಕೊಟ್ಟರು ಎಂದು ಪ್ರತಿಪಾದಿಸಿದರು.

“ಸನಾತನ ಧರ್ಮವು ಈ ದೇಶವನ್ನು ಶ್ರೀಮಂತಗೊಳಿಸಿದೆ ಎಂದು ಅವರು (ಭಾರತೀಯ ಜನತಾ ಪಕ್ಷ) ಹೇಳಿಕೊಳ್ಳುತ್ತಾರೆ, ಆದರೆ ಅವರು ಜಾತಿಯ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರಬೇಕು” ಎಂದು ಅಪ್ಪಾವು ಹೇಳಿದರು.

“ಅಂದು ನಮ್ಮನ್ನು ಮುಖ್ಯವಾಹಿನಿಯಿಂದ ದೂರವಿಡಲಾಗಿತ್ತು, ಮತ್ತು ನಮಗೆ ಯಾವುದೇ ಹಕ್ಕುಗಳನ್ನು ನೀಡದೆ ಗುಲಾಮರಂತೆ ಬದುಕಬೇಕಾದ ಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ದೇಶದ 7%ರಷ್ಟು ಜನರಿಗೆ ಮಾತ್ರವೇ ಓದಲು ಅವಕಾಶವಿತ್ತು. ಅವರು ಈ ರಾಷ್ಟ್ರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿ ಉಳಿದವರನ್ನು ಗುಲಾಮಗಿರಿಗೆ ದೂಡಿದ್ದರು,” ಎಂದು ಅವರು ಅವರು ಮುಂದುವರೆದು ಹೇಳಿದರು.

ಪೆರಿಯಾರ್, ಅಣ್ಣಾ ಕರುಣಾನಿಧಿ ಮತ್ತು ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ದ್ರಾವಿಡ ಮಾದರಿ ಸರ್ಕಾರವು ರಾಜ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ವಿಧಾನಸಭೆ ಸ್ಪೀಕರ್ ಹೇಳಿದ್ದಾರೆ.

ಅಪ್ಪಾವು ಅವರು ಭಾರತದ ಪ್ರಮಾಣೀಕೃತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ವಿರುದ್ಧವೂ ನಿಲುವು ತಳೆದರು.

‘‘ನಮ್ಮ ಶಿಕ್ಷಣ ವ್ಯವಸ್ಥೆಗೆ ನೀಟ್ ಅನಗತ್ಯ’’ ಎಂದು ಅವರು ಘೋಷಿಸಿದರು. “ಮುಖ್ಯಮಂತ್ರಿ ಸ್ಟಾಲಿನ್ ಅವರು ದೆಹಲಿಗೆ ಯಾರನ್ನು ಪರಿಗಣಿಸುತ್ತಾರೋ ಅಂತಹ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ NEET ವ್ಯವಸ್ಥೆಯನ್ನು ನಾವು ತೊಡೆದುಹಾಕಬಹುದು ಎನ್ನುವ ನಂಬಿಕೆ ನನಗೆ ಈಗಲೂ ಇದೆ. ಇದು ಪರಿಣಾಮಕಾರಿ ಬದಲಾವಣೆಯನ್ನು ದೇಶದಲ್ಲಿ ತರಬಲ್ಲದು, NEET ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು CM MK ಸ್ಟಾಲಿನ್ ಅವರಿಗೆ ಅವಕಾಶ ನೀಡುತ್ತದೆ” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು