Tuesday, June 25, 2024

ಸತ್ಯ | ನ್ಯಾಯ |ಧರ್ಮ

ಹಿರಿಯ ಹೋರಾಟಗಾರ, ದಲಿತ ಮುಖಂಡ ಜಿಗಣಿ ಶಂಕರ್ ನಿಧನ

ಹಿರಿಯ ಹೋರಾಟಗಾರ, ದಲಿತ ಮುಖಂಡ ಜಿಗಣಿ ಶಂಕರ್ ನಿಧನ

ಬೆಂಗಳೂರು, ಆ. 25: ದಲಿತಪರ ಚಳವಳಿಗಳನ್ನು ಕಟ್ಟಿದ ಹಿರಿಯ ಮುಖಂಡ ಜಿಗಣಿ ಶಂಕರ್ (67) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಶೋಷಿತ ಸಮಾಜದ ಪರ ಸದಾ ದನಿಯಾಗುತ್ತಿದ್ದ ಶಂಕರ್‌ ಅನೇಕ ವರ್ಷಗಳಿಂದ ಚಳವಳಿಗಳನ್ನು ರೂಪಿಸಿಕೊಂಡು ಬಂದವರು.

ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಓರ್ವರಾದ ಶಂಕರ್‌ ಮೂಲತ ಬೆಂಗಳೂರು ಹೊರವಲಯದ ಚಿಗಣಿಯವರು.

ಮೃತರು ಪತ್ನಿ, ಮೂವರು ಮಕ್ಕಳು, ಮಿತ್ರರು ಸಹಿತ ಅಪಾರ ಸಂಖ್ಯೆಯ ಅಭಿಮಾನಿ ವರ್ಗವನ್ನು, ಚಳವಳಿಯ ಒಡನಾಡಿಗಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಚಿಗಣಿಯಲ್ಲಿರುವ ಅವರ ತೋಟದಲ್ಲಿ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು