Tuesday, June 24, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಸರಣಿ ಕಳ್ಳತನ ಹುಂಡಿ ಹೊಡೆದು ಲಕ್ಷಾಂತರ ರೂ ದೋಚಿದ ಕಳ್ಳರು

ಹಾಸನ : ನಗರದ ಸಮೀಪ ಅರಸೀಕೆರೆ ರಸ್ತೆ, ಬಿ. ಕಾಟಿಹಳ್ಳಿ ಬಳಿ ಇರುವ ದೂರವಾಣಿ ನಗರದ ಪಂಚಮುಖಿ ಗಣಪತಿ ಸುಬ್ರಮಣ್ಯ ಮತ್ತು ನವಗ್ರಹ ದೇವಾಲಯದಲ್ಲಿ ತಡರಾತ್ರಿ ದೇವಸ್ಥಾನದ ಬಾಗಿಲು ಮುರಿದು ಕಾಣಿಕೆ ಹುಂಡಿ ಹೊಡೆದು ಅಂದಾಜು ಒಂದು ಲಕ್ಷಕ್ಕೂ ಹೆಚ್ಚಿನ ಕಳವು ಮಾಡಲಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.


ಇದೆ ವೇಳೆ ಇಲ್ಲಿನ ನಿವಾಸಿಗಳು ಹಾಗೂ ದೇವಾಲಯದ ಜವಬ್ದಾರಿ ಹೊತ್ತಿರುವ ಸಂಪತ್ತು ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ದೂರವಾಣಿ ನಗರದಲ್ಲಿರುವ ಪಂಚಮುಖಿ ಗಣಪತಿ ಸುಬ್ರಮಣ್ಯ ಮತ್ತು ನವಗ್ರಹದ ದೇವಾಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಗರ್ಭಗುಡಿಯ ಬಾಗಿಲು ತೆರೆದು ಒಳ ಇದ್ದ ಬೀರುವಿನ ಬಾಗಿಲು ತೆಗೆದು ಹಾಗೂ ಕಾಣಿಕೆ ಹುಂಡಿ ಬೀಗ ಹೊಡೆದು ಜಾಲಾಡಿ ಕೈಗೆ ಸಿಕ್ಕಿದ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಕಳೆದ ವರ್ಷಕೂಡ ಇದೆ ದೇವಸ್ಥಾನದ ಬಾಗಿಲು ಮುರಿದು ಒಳಗಿದ್ದ ಎರಡು ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣ ಮತ್ತು ಹಣವನ್ನೆಲ್ಲಾ ದೋಚಿಕೊಂಡು ಹೋಗಿದ್ದರು.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡಲಾಗಿತ್ತು ಎಂದರು. ಭಕ್ತರ ದೇವಾಲಯದಲ್ಲಿ ಇಂತಹ ಘಟನೆ ನಡೆದರೂ ಇದುವರೆಗೂ ಪೊಲೀಸ್ ಠಾಣೆಯಿಂದ ಯಾವ ಮಾಹಿತಿ ಸಿಕ್ಕಿರುವುದಿಲ್ಲ ಎಂದು ದೂರಿದರು. ಈಗ ಮೂರನೇ ಬಾರಿಗೆ ಒಂದೆ ದೇವಾಲಯದಲ್ಲಿ ಕಳ್ಳತನ ನಡೆದಿರುವುದು. ದೇವಾಲಯದಲ್ಲಿ ಆಗಿರುವ ಅನ್ಯಾಯ ಏನಾಗಿದೆ ಒಡವೆ ಹಾಗೂ ಹಣವನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು. ದೇವಾಲಯ ಒಂದೆ ಕಳ್ಳತನವಲ್ಲ. ದೂರಾವಣಿ ಸುತ್ತ ಏಳೆಂಟು ಬಾರಿ ಮನೆಕಳ್ಳತನವಾಗಿದೆ. ದೂರು ಕೂಡ ದಾಖಲಾಗಿದ್ದರೂ ಕಳ್ಳತನ ಪತ್ತೆ ಆಗಿರುವುದಿಲ್ಲ. ಇದರಿಂದ ಜನರು ಭಯಭೀತರಾಗಿದ್ದಾರೆ. ಪೊಲೀಸ್ ಇಲಾಖೆಯು ವಿಶೇಷವಾದ ತನಿಖೆ ನಡೆಸಿ ನಮಗೆ ನ್ಯಾಯಾದೊರಕಿಸಿಕೊಡಬೇಕೆಂದು ಮನವಿ ಮಾಡಿದರು. ಇಲ್ಲಿನ ಮನೆಗಳಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಇಷ್ಟೊಂದು ಕಳ್ಳತನವಾಗಿರುವುದರಿಂದ ಮಹಿಳೆಯರು ಓಡಾಡುವುದಕ್ಕೆ ಮತ್ತು ಮನೆಯಿಂದ ಹೊರ ಬರುವುದಕ್ಕೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page