ಕುಂದಾಪುರದ ತಲ್ಲೂರಿನಲ್ಲೂ ದುರಂತ, ಈ ಸರಣಿ ಪ್ರಕರಣಗಳಿಗೆ ಕೊನೆಯೆಂದು?
ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಈ ರೀತಿಯ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇತ್ತ ಸರ್ಕಾರವಾಗಲೀ, ಸಂಬಂಧಪಟ್ಟ ಸಂಸ್ಥೆಗಳಾಗಲೀ ಇದಕ್ಕೆ ಪರಿಹಾರ ಹೋಗಲಿ, ಕನಿಷ್ಟ ಕಾರಣವನ್ನೂ ಕಂಡು ಹಿಡಿಯುವ ಕುರಿತು ಯೋಚಿಸುತ್ತಿರುವಂತೆ ಕಾಣುತ್ತಿಲ್ಲ.
ಜನಸಾಮಾನ್ಯರ ಸಾವು ಎಷ್ಟು ಅಗ್ಗವಾಗಿದೆಯೆಂದರೆ ಜನರು ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾಯುತ್ತಿದ್ದಾರೆ. ಜಿಮ್ಗಳಲ್ಲಿ, ಮನೆಗಳಲ್ಲಿ, ಗರ್ಭಾ ನೃತ್ಯ ಪ್ರದರ್ಶನಗಳಲ್ಲಿ ಹೀಗೆ ಸುಳಿವೇ ಇಲ್ಲದೆ ಜನರು ಸಾವಿನ ಬಲೆಯಲ್ಲಿ ಬೀಳುತ್ತಿದ್ದಾರೆ.
ಕುಂದಾಪುರದ ತಲ್ಲೂರು ಎನ್ನುವಲ್ಲಿ ನಿನ್ನೆಯಷ್ಟೇ ಕೇವಲ 12 ವರ್ಷದ ಪ್ರಥ್ವಿರಾಜ್ ಎನ್ನುವ ಬಾಲಕ ಶಾಲೆಯ ಬಸ್ಸಿಗಾಗಿ ಮನೆ ಮುಂದೆ ಕಾಯುತ್ತಿದ್ದವನು ಅಲ್ಲೇ ಕುಸಿದು ಬಿದ್ದಿದ್ದಾನೆ. ಹಿಂದಿನ ದಿನವಷ್ಟೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಕ ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮರಣಿಸಿದ್ದು ಆತನ ಪೋಷಕರಿಗೆ ಈಗಲೂ ನಂಬಲಾಗುತ್ತಿಲ್ಲ.
ಕಳೆದ ವರ್ಷವಷ್ಟೇ ಈ ಬಾಲಕನ ಅಕ್ಕನೂ ಹೃದಯಾಘಾತದಿಂದ ಮರಣ ಹೊಂದಿದ್ದಳು. ಅದಾಗಿ ಸರಿಯಾಗಿ ಒಂದು ವರ್ಷಕ್ಕೆ ಈಗ ಅವಳ ತಮ್ಮ ಕೂಡಾ ಹೃದಯಾಘಾತದಿಂದ ಮರಣ ಹೊಂದಿದ್ದಾನೆ. ಈ ಮಕ್ಕಳ ಪೋಷಕರು ಈಗ ದಿಕ್ಕು ಕಾಣದಂತಾಗಿದ್ದಾರೆ. ಹೀಗೆ ಆರೋಗ್ಯವಾಗಿದ್ದವರೇ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು, ಮರಣ ಹೊಂದುವುದನ್ನು ಅರಗಿಸಿಕೊಳ್ಳಲಾಗದೆ ಜನರು ಸಂಪೂರ್ಣ ಆಘಾತದಲ್ಲಿದ್ದಾರೆ.
ಗುಜಾರಾತಿನಲ್ಲೂ ಸಾವಿನ ಸರಣಿ
ಕಳೆದ 24 ಗಂಟೆಗಳಲ್ಲಿ ಗುಜರಾತ್ನಲ್ಲಿ ನವರಾತ್ರಿ ಆಚರಣೆ ವೇಳೆ 10 ಮಂದಿ ಸಾವನ್ನಪ್ಪಿದ್ದಾರೆ. ಬಲಿಪಶುಗಳು ಹದಿಹರೆಯದವರಿಂದ ಮಧ್ಯವಯಸ್ಸಿನವರೆಗೆ ಇದ್ದರು, ಅವರಲ್ಲಿ ಕಿರಿಯವನೆಂದರೆ ಬರೋಡಾದ ದಾಭೋಯ್ನ 13 ವರ್ಷದ ಹುಡುಗ.
ಶುಕ್ರವಾರ ಅಹಮದಾಬಾದ್ನ 24 ವರ್ಷದ ಯುವಕ ಗರ್ಬಾ ಡ್ಯಾನ್ಸ್ ಮಾಡುತ್ತಿದ್ದಾಗ ಹಠಾತ್ ಕುಸಿದು ಸಾವನ್ನಪ್ಪಿದ್ದಾನೆ. ಅದೇ ರೀತಿ ಕಪದ್ವಾಂಜ್ನ 17 ವರ್ಷದ ಬಾಲಕ ಕೂಡ ಗರ್ಬಾ ನೃತ್ಯದ ವೇಳೆ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಇದೇ ರೀತಿಯ ಪ್ರಕರಣಗಳು ಸತತವಾಗಿ ವರದಿಯಾಗುತ್ತಿವೆ. ಜನರು ಕೇವಲ ಸಂಖ್ಯೆಗಳಾಗಿ, ಸಾವಿನ ಸುದ್ದಿಗಳಾಗಿ ಮುಗಿದುಹೋಗುತ್ತಿದ್ದಾರೆ.
ಇಷ್ಟು ಸಾಲದೆನ್ನುವಂತೆ, 108 ತುರ್ತು ಆಂಬ್ಯುಲೆನ್ಸ್ ಸೇವೆಗಳು ನವರಾತ್ರಿಯ ಮೊದಲ ಆರು ದಿನಗಳಲ್ಲಿ ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ 521 ಕರೆಗಳನ್ನು ಮತ್ತು ಉಸಿರಾಟದ ತೊಂದರೆಗೆ ಸಂಬಂಧಿಸಿದಂತೆ ಹೆಚ್ಚುವರಿ 609 ಕರೆಗಳನ್ನು ಸ್ವೀಕರಿಸಿವೆ. ಗರ್ಬಾ ಆಚರಣೆಗಳು ನಡೆಯುವಾಗ ಎಂದರೆ ಈ ಕರೆಗಳು ಸಾಮಾನ್ಯವಾಗಿ ಸಂಜೆ 6ರಿಂದ 2 ಗಂಟೆಯವರೆಗೆ ಬರುತ್ತವೆ.
ಈ ಆತಂಕಕಾರಿ ಪ್ರವೃತ್ತಿಯು ಸರ್ಕಾರ ಮತ್ತು ಕಾರ್ಯಕ್ರಮ ಸಂಘಟಕರನ್ನು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿದೆ. ಗರ್ಬಾ ಸ್ಥಳಗಳ ಸಮೀಪವಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಎಚ್ಸಿ) ರಾಜ್ಯ ಸರ್ಕಾರವು ಎಚ್ಚರಿಕೆಯನ್ನು ನೀಡಿದ್ದು, ಹೆಚ್ಚಿನ ಜಾಗರೂಕರಾಗಿರಲು ಕೇಳಿದೆ. ತುರ್ತು ಸಂದರ್ಭದಲ್ಲಿ ಈವೆಂಟ್ಗಳಿಗೆ ತ್ವರಿತವಾಗಿ ಪ್ರವೇಶಿಸಲು ಆಂಬ್ಯುಲೆನ್ಸ್ಗಳಿಗೆ ಕಾರಿಡಾರ್ಗಳನ್ನು ರಚಿಸಲು ಗರ್ಬಾ ಸಂಘಟಕರಿಗೆ ನಿರ್ದೇಶನ ನೀಡಲಾಗಿದೆ.
ಅಲ್ಲದೆ, ಗರ್ಬಾ ಸಂಘಟಕರು ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್ಗಳನ್ನು ಇರಿಸುವ ಮೂಲಕ ಭಾಗವಹಿಸುವವರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರು ತಮ್ಮ ಸಿಬ್ಬಂದಿಗೆ ಸಿಪಿಆರ್ ತರಬೇತಿಯನ್ನು ನೀಡಲು ಮತ್ತು ಭಾಗವಹಿಸುವವರಿಗೆ ಸಾಕಷ್ಟು ನೀರನ್ನು ಒದಗಿಸುವಂತೆ ಸಲಹೆ ನೀಡುತ್ತಾರೆ. ಈ ವರ್ಷದ ನವರಾತ್ರಿ ಆಚರಣೆಗೆ ಮುನ್ನ, ಗುಜರಾತ್ನಲ್ಲಿ ಮೂರು ಜನರು ಗರ್ಬಾ ಅಭ್ಯಾಸ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.