Sunday, August 3, 2025

ಸತ್ಯ | ನ್ಯಾಯ |ಧರ್ಮ

ಉಪ ರಾಷ್ಟ್ರಪತಿ ರೇಸಿನಲ್ಲಿ ಶಶಿ ತರೂರ್‌ ಮತ್ತು ನಿತೀಶ್ ಹೆಸರು!

ಹೊಸ ದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಧನಕರ್ ರಾಜೀನಾಮೆ; ಮುಂದಿನ ಉಪರಾಷ್ಟ್ರಪತಿ ಯಾರು?

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಇನ್ನೂ ಎರಡು ವರ್ಷಗಳ ಅಧಿಕಾರಾವಧಿ ಇದ್ದರೂ, ಅವರ ರಾಜೀನಾಮೆಯಿಂದ ದೇಶದ ಎರಡನೇ ಅತ್ಯುನ್ನತ ಸ್ಥಾನ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಉಪರಾಷ್ಟ್ರಪತಿ ಯಾರು ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಅಧಿಕಾರದಲ್ಲಿರುವ ಪಕ್ಷವು ಹಲವು ಹೆಸರುಗಳನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಅವುಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಇವರ ಜೊತೆಗೆ ಜೆಡಿಯು ಸಂಸದ ಮತ್ತು ರಾಜ್ಯಸಭಾ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಕೂಡ ಉಪರಾಷ್ಟ್ರಪತಿ ರೇಸ್‌ನಲ್ಲಿದ್ದಾರೆ.

ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಹೆಸರುಗಳೂ ಈ ಸ್ಪರ್ಧೆಯಲ್ಲಿ ಕೇಳಿಬರುತ್ತಿವೆ. ಇಷ್ಟೇ ಅಲ್ಲದೆ, ಅನಿರೀಕ್ಷಿತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೆಸರೂ ಈ ರೇಸ್ ಸೇರಿಕೊಂಡಿದೆ. ಇದರಿಂದ ಈ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಮತದಾರರು ಇವರು

ಉಪರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ‘ಎಲೆಕ್ಟೋರಲ್ ಕಾಲೇಜ್’ ಎಂದು ಕರೆಯಲ್ಪಡುವ ಮತದಾರರ ಪಟ್ಟಿಯಲ್ಲಿರುವ ಸದಸ್ಯರು ಮಾತ್ರ ಮತ ಚಲಾಯಿಸಲು ಅರ್ಹರು. ಸಂವಿಧಾನದ ಆರ್ಟಿಕಲ್ 66ರ ಪ್ರಕಾರ, ಒಟ್ಟು 233 ರಾಜ್ಯಸಭಾ ಸದಸ್ಯರು (ಪ್ರಸ್ತುತ ಐದು ಸ್ಥಾನಗಳು ಖಾಲಿ ಇವೆ), 12 ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು, ಮತ್ತು 543 ಲೋಕಸಭಾ ಸದಸ್ಯರು (ಪ್ರಸ್ತುತ ಒಂದು ಸ್ಥಾನ ಖಾಲಿ ಇದೆ) ಮತ ಚಲಾಯಿಸುತ್ತಾರೆ.

ಸಾಮಾನ್ಯವಾಗಿ ಒಟ್ಟು 788 ಸದಸ್ಯರು ಮತದಾನ ಮಾಡಬೇಕಾಗುತ್ತದೆ. ಆದರೆ, ಆರು ಸ್ಥಾನಗಳು ಖಾಲಿ ಇರುವುದರಿಂದ ಪ್ರಸ್ತುತ 782 ಸದಸ್ಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page