Thursday, June 19, 2025

ಸತ್ಯ | ನ್ಯಾಯ |ಧರ್ಮ

ಗುಂಡು ತಗುಲಿದರೂ ಗಾಡಿ ನಿಲ್ಲಿಸದೆ ಪ್ರಯಾಣಿಕರನ್ನು ರಕ್ಷಿಸಿದ ಚಾಲಕ

ಬಿಹಾರ: ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ಜೀಪ್ ಚಾಲಕ ಸಂತೋಷ್ ಸಿಂಗ್ ತಮ್ಮ ಹೊಟ್ಟೆಗೆ ಗುಂಡು ತಗುಲಿದರೂ ಕೆಲವು ಕಿಲೋಮೀಟರ್‌ಗಳವರೆಗೆ ಜೀಪನ್ನು ಚಲಾಯಿಸುವ ಮೂಲಕ ತನ್ನ ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸಿಂಗ್ ತನ್ನ ಜೀಪಿನಲ್ಲಿ 14-15 ಜನರೊಂದಿಗೆ ‘ತಿಲಕ್’ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜೌನ್ ಗ್ರಾಮದ ಬಳಿ ವಾಹನವನ್ನು ಹಿಂಬಾಲಿಸಿದರು ಮತ್ತು ಸಿಂಗ್ ಅವರ ಹೊಟ್ಟೆಗೆ ಗುಂಡು ಹಾರಿಸಿದರು. ಗಾಯ ಮತ್ತು ಅಸಹನೀಯ ನೋವಿನ ಹೊರತಾಗಿಯೂ, ಜೀಪನ್ನು ನಿಲ್ಲಿಸದೆ ಪ್ರಯಾಣಿಕರ ಜೀವವನ್ನು ಕಾಪಾಡಿದ್ದಾರೆ.

ಜೀಪಿನಲ್ಲಿದ್ದ ಇತರೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಸಿಂಗ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page