ನಿಮ್ಮ ಕರ್ತವ್ಯ ವೈಫಲ್ಯವನ್ನು ನಾವು ಸುಮ್ಮನೆ ನೋಡುತ್ತಾ ಕೂರಬೇಕೆ?: ರಾಜ್ಯಪಾಲರಿಗೆ ಸುಪ್ರೀಂ ಪ್ರಶ್ನೆ

ದೆಹಲಿ: ಪ್ರಜಾಪ್ರಭುತ್ವದ ಒಂದು ಭಾಗವು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾದರೆ, ಸಂವಿಧಾನದ ರಕ್ಷಕನಾದ ಸುಪ್ರೀಂ ಕೋರ್ಟ್ ನಿಸ್ಸಹಾಯಕವಾಗಿ ಹೇಗೆ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ನ್ಯಾಯಾಲಯವು ಕಾಲಮಿತಿ ವಿಧಿಸಬಹುದೇ ಎಂಬ ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತಿರುವ ರಾಷ್ಟ್ರಪತಿಯವರ ಮನವಿಯ ಕುರಿತು ವಿಚಾರಣೆ ನಡೆಸಿದ ಪೀಠವು ತನ್ನ ತೀರ್ಪನ್ನು ಮುಂದೂಡಿದೆ.

“ಪ್ರಜಾಪ್ರಭುತ್ವದ ವಿಭಾಗಗಳಲ್ಲಿ ಒಂದು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾದರೆ, ಸಂವಿಧಾನದ ರಕ್ಷಕನಾಗಿ ನ್ಯಾಯಾಲಯವು ಕೈಕಟ್ಟಿ ಕುಳಿತು ನೋಡಬೇಕೇ?” ಎಂದು ಮುಖ್ಯ ನ್ಯಾಯಮೂರ್ತಿಗಳು ಸಾಲಿಸಿಟರ್ ಜನರಲ್ ಅವರನ್ನು ಪ್ರಶ್ನಿಸಿದರು.

Related Articles

ಇತ್ತೀಚಿನ ಸುದ್ದಿಗಳು