Sunday, June 16, 2024

ಸತ್ಯ | ನ್ಯಾಯ |ಧರ್ಮ

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಮಾಲೂರಿನಲ್ಲಿ ಪ್ರತಿಭಟನೆ

ಮಾಲೂರು: ಮಳೆಯಿಂದಾಗಿ ಹಾನಿಗೊಳಗಿ ಸಾರ್ವಜನಿಕ ಆಸ್ತಿ, ಬೆಳೆ ನಷ್ಟವನ್ನು ವೀಕ್ಷಿಸಿ ಸಂಕಷ್ಟದಲ್ಲಿರುವ ಮಡಿಕೇರಿ ಜನರ ನೋವಿಗೆ ಸ್ಪಂದಿಸಲು ಹೋಗಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಪ್ರತಿಭಟನೆ ಸೋಗಿನಲ್ಲಿ ಪೋಲಿಸ್ ರ ಮುಂದೆಯೆ ಅವರ ಮೇಲೆ ಮೊಟ್ಟೆ ಎಸೆದ ಕೃತ್ಯವನ್ನು ಖಂಡಿಸಿ, ಇಂದು ಮಾಲೂರಿನಲ್ಲಿ ಶಾಸಕ ಕೆ.ವೈ. ನಂಜೇಗೌಡ ರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡರು:
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗು ಜಿಲ್ಲೆಯ ಜನರ, ರೈತರ ಸಂಕಷ್ಟ ಆಲಿಸಲು ಹೋಗಿದ್ದ ಸಿದ್ದರಾಮಯ್ಯ ರವರ ಮೇಲೆ‌ ಮೊಟ್ಟೆ ಎಸೆದಿರುವಂತದ್ದು ಖಂಡನೀಯ ಇದೊಂದು ಹೇಡಿತನಕ ಕೃತ್ಯ. ಮಾಜಿ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರ ಮೇಲೆ ಈ ರೀತಿಯ ಕೃತ್ಯ ಎಸಗುವುದು ದೌರ್ಜನ್ಯದ ಪರಮಾವಧಿಯಾಗಿದ್ದು. ಬಿಜೆಪಿ ಮತ್ತು ಆರ್‌.ಎಸ್.ಎಸ್ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಒಂದೆಡೆ ಭ್ರಷ್ಟ ತನದ ಕಮೀಷನ್ ಆಡಳಿತ, ಇನ್ನೊಂದೆಡೆ ಕೋಮುದ್ವೇಷದಿಂದ ರಾಜ್ಯವನ್ನು ಗೂಂಡಾ ಸಂಸ್ಕೃತಿಯತ್ತಾ ಕೊಂಡೊಯವ ಪರಿಸ್ಥಿತಿ ರಾಜ್ಯ ಸರ್ಕಾರದ ಆಡಳಿತ ವೈಕರಿಯಾಗಿದೆ ಎಂದು ಕಟುವಾಗಿ ಟೀಕಿಸಿದರು.

ಇದಕ್ಕೂ ಮೊದಲು ಪಟ್ಟಣದ ಮಾರಿಕಾಂಬಾ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗೃಹ ಮಂತ್ರಿಯಾದ ಅರಗ ಜ್ಙಾನೇಂದ್ರ ರವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಜಿದರು. ನಂತರ ತಹಸೀಲ್ದಾರ್ ಕಛೇರಿ ವರೆಗೆ ಪ್ರತಿಭಟನೆ ಜಾತ ನಡೆಸಿ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸರಿಪಡಿಸಲು, ತಪ್ಪಿತಸ್ಥ ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನೀಲ್ ಕುಮಾರ್, ಮಾಜಿ ಶಾಸಕ ಎ.ನಾಗರಾಜ್, ಮಾಲೂರು,ಮಾಸ್ತಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಎಂ.ಜಿ.ಮಧುಸೂದನ್, ಹೆಚ್.ಎಂ.ವಿಜಯನರಸಿಂಹ, ಮುಖಂಡರಾದ ಸಿ.ಲಕ್ಷ್ಮೀನಾರಾಯಣ್, ಎಂ.ವಿ.ಸೋಮಶೇಖರ್, ಎಟ್ಟಕೋಡಿ ವೀರಭದ್ರಪ್ಪ, ಎ.ಅಶ್ವತ್ಥರೆಡ್ಡಿ, ಬಿ.ಆರ್.ಶ್ರೀನಿವಾಸ್, ಪ್ರದೀಪ್ ರೆಡ್ಡಿ, ಪಿಚ್ಚಳ್ಳಿ ಶ್ರೀನಿವಾಸ್, ನಾಗಾಪುರ ನವೀನ್, ಸಂತ್ತೆಹಳ್ಳಿ ನಾರಾಯಣಸ್ವಾಮಿ, ನಹೀಮ್ ಉಲ್ಲಾ, ಆನೆಪುರ ದೇವರಾಜ್ ಪುರಸಭಾ ಸದಸ್ಯರಾದ ಭಾರತಮ್ಮ ಶಂಕರಪ್ಪ, ಕೊಮಲ ನಾರಾಯಣ್, ವಿಜಯಲಕ್ಷ್ಮಿ ಲಕ್ಮೀನಾರಾಯಣ್, ಎನ್. ವಿ.ಮುರಳೀಧರ್, ಆರ್.ವೆಂಕಟೇಶ್, ಮಂಜುನಾಥ್, ಜಾಕೀರ್ ಖಾನ್ ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ನ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು