Home ಬ್ರೇಕಿಂಗ್ ಸುದ್ದಿ ಹಾಸನ ಬೇಲೂರು ಗೋವಿನಹಳ್ಳಿಯಲ್ಲಿ ಗೌತಮಬುದ್ಧ, ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಅನಾವರಣ

ಬೇಲೂರು ಗೋವಿನಹಳ್ಳಿಯಲ್ಲಿ ಗೌತಮಬುದ್ಧ, ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಅನಾವರಣ

ಬೇಲೂರು : ತಾಲೂಕಿನ ಗೋವಿನಹಳ್ಳಿ ಯಲ್ಲಿ ಗೌತಮಬುದ್ಧ, ಜಗಜ್ಯೋತಿ ಬಸವಣ್ಣ ನವರ ಪ್ರತಿಮೆ ಅನಾ ವರಣ.ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಗೋವಿನಹಳ್ಳಿ ಮಾಜಿ ಗ್ರಾಪಂ ಸದಸ್ಯ ರವಿ ತಾಲೂಕಿನ ಗೋವಿನಹಳ್ಳಿ ಗ್ರಾಮದಲ್ಲಿ ಭಗವಾನ್ ಗೌತಮ ಬುದ್ಧ ಹಾಗೂ ಜಗಜ್ಯೋತಿ ಬಸವಣ್ಣ ನವರ ಪ್ರತಿಮೆ ಅನಾ ವರಣ ಕಾರ್ಯಕ್ರಮವನ್ನು ದಿನಾಂಕ ೭-೫-೨೫ ನೇ ಬುಧವಾರ ಮದ್ಯಾಹ್ನ ೩ ಗಂಟೆಗೆ ಗೋವಿನಹಳ್ಳಿ ಗ್ರಾಮದಲ್ಲಿ ಏರ್ಪಡಿಸ ಲಾಗಿದೆ.ಈ ಕಾರ್ಯ ಕ್ರಮಕ್ಕೆ ಶ್ರೀ ನಿಜಗುಣಾ ನಂದ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ ಹಾಗು ಕರ್ನಾಟಕ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ,ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಹದೇವಪ್ಪನವರು ಉಸ್ತುವಾರಿ ಸಚಿವ ರಾಜಣ್ಣ,ಸಂಸದ ಶ್ರೇಯಸ್ ಪಟೇಲ್, ಶಾಸಕ ಹೆಚ್ ಕೆ ಸುರೇಶ್ ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಸೇರಿದಂತೆ ಸರಿ ಸುಮಾರು ೫ ಸಾವಿರ ಜನ ಸೇರಲಿದ್ದು ಈ ಕಾರ್ಯ ಕ್ರಮಕ್ಕೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಮದ್ಯಾಹ್ನ ೩ ಗಂಟೆಗೆ ಶುರುವಾಗುವ ಕಾರ್ಯಕ್ರಮಕ್ಕೆ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸವೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶಶಿಧರ್ ಮೌರ್ಯ ,ಬೊಮ್ಮಡಿಹಳ್ಳಿ ಮಂಜಪ್ಪ,ಗೋವಿನಹಳ್ಳಿ ಮಹೇಶ್,ಸುಪ್ರೀತ್ ಹಾಜರಿದ್ದರು.

You cannot copy content of this page

Exit mobile version