Monday, June 17, 2024

ಸತ್ಯ | ನ್ಯಾಯ |ಧರ್ಮ

ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್‌ ಅವರದ್ದು : ಕಾಂಗ್ರೆಸ್‌ ಕಿಡಿ

ಬೆಂಗಳೂರು : ತುಮಕೂರಿನ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದ್ದು ಪ್ರಕರಣಕ್ಕೆ ಸಂಭಂದಿಸಿದಂತೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿರುವ ರಾಜ್ಯ ಕಾಂಗ್ರೆಸ್‌ ʼಸರ್ಕಾರ ಜೀವ ಉಳಿಸುವ ಬದಲು ಜೀವ ತೆಗೆಯುವ ಕೆಲಸ ಮಾಡುತ್ತಿದೆʼ ಎಂದು ಕಿಡಿಕಾರಿದೆ.

ಶುಕ್ರವಾರದಂದು ಆಕಸ್ಮಿಕವಾಗು ಐದು ವರ್ಷದ ಮಗುವೊಂದು ಸೊಂಪ್‌ನಲ್ಲಿ ಬಿದ್ದಿದ್ದು, ಮಗುವನ್ನು ಚಿಕಿತ್ಸೆಗೆಂದು ಕರೆತಂದ  ವೇಳೆ ವೈದ್ಯರ ಕರ್ತವ್ಯಲೋಪ ಮತ್ತು ಉದಾಸೀನತೆಯ ತೋರಿಸಿರುವ  ಹಿನ್ನೆಲೆಗೆ ಸಂಬಂಧಿಸಿದಂತೆ ಆರೋಗ್ರ ಇಲಾಖೆ ಅಯುಕ್ತರು, ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ರೋಹಿತ್‌ ಡಿ. ಅವರನ್ನು ಶನಿವಾರದಂದು ಅಮಾನತುಗೊಳಿಸಲಾಗಿದೆ.

ಈ ಘಟನೆಗೆ ಕುರಿತು ಇಂದು ಆಕ್ರೋಶ ವ್ಯಕ್ತ ಪಡಿಸಿರುವ ರಾಜ್ಯ ಕಾಂಗ್ರೆಸ್‌, ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಅವರ ವಿರುದ್ದ ಕಿಡಿಕಾರಿದೆ. ʼಬೆಳಗಾವಿಯಲ್ಲಿ ವೆಂಟಿಲೇಟರ್‌ ಸಿಗದೆ ಸಾವನ್ನಪ್ಪಿದ್ದ ಘಟನೆ, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಸಾವು, ಇದೀಗ ತುಮಕೂರಿನ ಮಧುಗಿರಿಯಲ್ಲಿ ವೈದ್ಯರ ಕರ್ತವ್ಯ ಲೋಪದಿಂದ ಮಗು ಬಲಿಯಾಗಿದೆ. ಈ ಎಲ್ಲಾ ಜವಬ್ದಾರಿಗಳಿಗೂ ಸಚಿವ ಕೆ. ಸುಧಾಕರ್‌ ಅವರೇ ನೇರ ಹೊಣೆ ಮಾಡಿದ್ದು, ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್‌ ಅವರದ್ದೇʼ ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ಹೇಳಿದೆ.

ಈಗಿನ ಸರ್ಕಾರ ಜೀವ ಉಳಿಸುವ ಬದಲು ಜನರ ಜೀವಗಳನ್ನು ತೆಗೆಯುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು