Saturday, June 21, 2025

ಸತ್ಯ | ನ್ಯಾಯ |ಧರ್ಮ

ಸುಧಾಕರ್‌ ಕಾಂಗ್ರೆಸ್‌ ಬಳಿ ಲೋಕಸಭೆ ಟಿಕೆಟ್‌ ಕೇಳುತ್ತಿದ್ದಾರೆ: ಪ್ರದೀಪ್‌ ಈಶ್ವರ್‌ ಬಾಂಬ್‌

ಚಿಕ್ಕಬಳ್ಳಾಪುರ: ಮಾಜಿ ಸಚಿವ ಸುಧಾಕರ್‌ ಅವರು ಕಾಂಗ್ರೆಸ್‌ ಬಾಗಿಲು ತಟ್ಟಿದ್ದು ಲೋಕಸಭೆ ಟಿಕೆಟ್‌ ಕೇಳುತ್ತಿದ್ದಾರೆ ಎಂದು ಇಂದು ಶಾಸಕ ಪ್ರದೀಪ್‌ ಈಶ್ವರ್‌ ಬಾಂಬ್‌ ಎಸೆದಿದ್ದಾರೆ.

ಇಂದು ಸುಧಾಕರ್‌ ಅವರು “ಪ್ರದೀಪ್‌ ಈಶ್ವರ್‌ ಮುಖಕ್ಕೆ ಐದು ಸಾವಿರ ವೋಟ್‌ ಕೂಡಾ ಹುಟ್ಟಲ್ಲ” ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು “ಸುಧಾಕರ್‌ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತು ಮಾತನಾಡುತ್ತಿದ್ದಾರೆ, ಯಾಕೆ ಅವರಿಗೆ ಬಿಜೆಪಿ ಟಿಕೆಟ್‌ ಕೊಡುವುದಿಲ್ಲವೆ?” ಎಂದು ಕುಟುಕಿದರು.

ಅವರು ಈಗಾಗಲೇ ಲೋಕಸಭೆಗೆ ಟಿಕೆಟ್‌ ಕೇಳಿ ಕಾಂಗ್ರೆಸ್‌ ಬಾಗಿಲು ತಟ್ಟಿದ್ದಾರೆ ಆದರೆ ಕಾಂಗ್ರೆಸ್ಸಿಗೆ ಮೋಸ ಮಾಡಿ ಹೋದ ಅವರಿಗೆ ಇನ್ನು ಕಾಂಗ್ರೆಸ್‌ ಬಾಗಿಲು ತೆರಯುವುದಿಲ್ಲ ಎಂದರು. ಅವರು ಲೋಕಸಭೆಗೆ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದನ್ನು ನಿರಾಕರಿಸಲಿ ನೋಡೋಣ ಎಂದು ಸವಾಲು ಎಸೆದರು.

ಅಧಿಕಾರ ಇದ್ದಾಗ ತಗ್ಗಿ ಬಗ್ಗಿ ನಡೆಯಬೇಕು. ನಾನೊಬ್ಬ ಶಾಸಕ ಆದರೆ ಇದುವರೆಗೂ ಗನ್‌ ಮೆನ್‌ ಇಟ್ಟುಕೊಂಡಿಲ್ಲ. ಅವರು ಶಾಸಕರಿದ್ದಾಗ ಪೊಲೀಸ್‌ ಎಸ್ಕಾರ್ಟ್‌ ಬಳಸುತ್ತಿದ್ದರು. ನಾನು ಬುಲೆಟ್‌ ಇದ್ದ ಹಾಗೆ. ಬುಲೆಟ್ಟಿಗೆ ಗನ್‌ ಅಗತ್ಯವಿಲ್ಲ ಎಂದು ಪ್ರದೀಪ್‌ ಈಶ್ವರ್‌ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page