Monday, June 23, 2025

ಸತ್ಯ | ನ್ಯಾಯ |ಧರ್ಮ

ಸ್ವಾತಂತ್ರ್ಯ ಸತ್ಯಾಗ್ರಹದ ಕಾರ್ನಾಡ ಸದಾಶಿವ ರಾವ್

1881 ರಲ್ಲಿ ರಾಧಾಬಾಯಿ ಮತ್ತು ರಾಮಚಂದ್ರ ರಾವ್ ಅವರ ಏಕೈಕ ಮಗನಾಗಿ ಜನಿಸಿದ ಕಾರ್ನಾಡ ಸದಾಶಿವ ರಾವ್, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನಂತರ ಕಾನೂನು ಅಧ್ಯಯನ ಮಾಡಲು ಬಾಂಬೆಗೆ ಹೋದರು. 1909 ರಲ್ಲಿ  ವಕೀಲರಾಗಿ ಮಂಗಳೂರಿಗೆ ಹಿಂದಿರುಗಿದರು ಮತ್ತು ಬಹುಬೇಗ ಖ್ಯಾತಿ ಪಡೆದರು. 1911 ರಲ್ಲಿ  ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಅವರ ಮುಖ್ಯ ಧ್ಯೇಯ/ಗುರಿ ಮಹಿಳೆಯರ ಅಭ್ಯುದಯವಾಗಿತ್ತು. ಅವರು ತಮ್ಮ ಪತ್ನಿ ಶಾಂತಾಬಾಯಿಯವರ ಸಹಾಯದಿಂದ ಮಹಿಳೆಯರನ್ನು, ತಮ್ಮ ಮನೆಯಿಂದ ಹೊರ ಬರಲು ಪ್ರೋತ್ಸಾಹಿಸಿದ್ದರು ಮತ್ತು ಮಹಿಳಾ ಸಭೆಗಳನ್ನು ಆರಂಭಿಸಿದರು. ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣ ನೀಡುವುದರ ಜೊತೆಗೆ ತಮ್ಮ ಪತ್ನಿಯ ಸಹಾಯದಿಂದ ಮಹಿಳೆಯರಿಗೆ ಹೊಲಿಗೆ, ಬುಟ್ಟಿ ತಯಾರಿಕೆ ಮತ್ತು ಇತರ ಉಪಯುಕ್ತ ತರಗತಿಗಳನ್ನು ಪ್ರಾರಂಭಿಸಿದರು. ವಿಧವೆಯ ಸಬಲೀಕರಣದ ಭಾಗವಾಗಿ, ವಿಧವಾ ಸಂಪ್ರದಾಯವನ್ನು ಮುರಿದು ಈ ತರಗತಿಗಳಿಗೆ ಸೇರಲು ಪ್ರೋತ್ಸಾಹಿಸಿದರು. 

ಮಂಗಳೂರಿನ ಅಸ್ಪೃಶ್ಯರಲ್ಲಿ ಮತ್ತೊಬ್ಬ ಸಮಾಜ ಸೇವಕ ಕುದ್ಮುಲ್ ರಂಗ ರಾವ್ ರವರೊಂದಿಗೆ ಕೈ ಜೋಡಿಸಿ ಹರಿಜನರ ಉನ್ನತಿಗಾಗಿ ಶ್ರಮಿಸಿದರು. ಮೇಲ್ಜಾತಿಯ ದೇವಾಲಯಗಳು ಅಸ್ಪೃಶ್ಯರಿಗೆ ಪ್ರವೇಶ ನೀಡದ ಕಾರಣ,  ಅಸ್ಪೃಶ್ಯತೆಯನ್ನು ತೊಡೆದುಹಾಕಲು ದೇವಾಲಯದ ಬಳಿ  ಅಸ್ಪೃಶ್ಯರಿಗೆ ಭೋಜನವನ್ನು ಏರ್ಪಡಿಸಿ, ಅವರೊಂದಿಗೆ ಕುಳಿತು ಆಹಾರವನ್ನು ಸೇವಿಸಿದರು.

1919 ರ ಹೊತ್ತಿಗೆ, ಸದಾಶಿವ ರಾವ್‌ ರವರು, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿ ಕೊಂಡರು. ಗಾಂಧಿಯವರ ಸತ್ಯಾಗ್ರಹ ಚಳುವಳಿಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದವರಲ್ಲಿ ಕರ್ನಾಟಕದಿಂದ ಮೊದಲಿಗರಾಗಿದ್ದರು.  ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದ ಸದಾಶಿವ ರಾವ್‌ ರವರಿಗೆ, ಕರ್ನಾಟಕದಲ್ಲಿ ಪಕ್ಷವನ್ನು ವಿಸ್ತರಿಸುವ ಜವಾಬ್ದಾರಿ ನೀಡಲಾಗಿತ್ತು. ಇವರು ಇಡೀ ದಕ್ಷಿಣ ಕೆನರಾ ಜಿಲ್ಲೆಯ ಅಸಹಕಾರ ಚಳವಳಿಯ ಆತ್ಮವಾಗಿದ್ದರು. ಸದಾಶಿವ ರಾವ್ ರವರನ್ನು 1937 ರ ಪ್ರಾಂತೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗಿತ್ತು.

1967 ರಲ್ಲಿ ಅಂದಿನ ರಾಷ್ಟ್ರಪತಿಗಳು ಉದ್ಘಾಟಿಸಿದ ಮಂಗಳೂರಿನ ಕೇಂದ್ರ ಗ್ರಂಥಾಲಯಕ್ಕೆ ಕಾರ್ನಾಡ್ ಸದಾಶಿವ ರಾವ್ ರವರ ಹೆಸರನ್ನು ಇಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page