<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>islam &#8211; Peepal Media</title>
	<atom:link href="https://peepalmedia.com/tag/islam/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 17 Apr 2025 08:39:18 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>islam &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಭಾರತದಲ್ಲಿ ವೈಜ್ಞಾನಿಕತೆ ಜೀವಂತವಿದೆಯೇ?</title>
		<link>https://peepalmedia.com/is-science-alive-in-india/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 17 Apr 2025 08:29:47 +0000</pubDate>
				<category><![CDATA[ಅಂಕಣ]]></category>
		<category><![CDATA[atheism]]></category>
		<category><![CDATA[atheist]]></category>
		<category><![CDATA[Gauhar Raza]]></category>
		<category><![CDATA[hindu]]></category>
		<category><![CDATA[hinduism]]></category>
		<category><![CDATA[hindutva]]></category>
		<category><![CDATA[india]]></category>
		<category><![CDATA[islam]]></category>
		<category><![CDATA[islamic]]></category>
		<category><![CDATA[kunal kamra]]></category>
		<category><![CDATA[politics]]></category>
		<category><![CDATA[religion]]></category>
		<category><![CDATA[religious]]></category>
		<category><![CDATA[science]]></category>
		<category><![CDATA[scientific temper]]></category>
		<category><![CDATA[scientific temperament]]></category>
		<category><![CDATA[Unscientific]]></category>
		<guid isPermaLink="false">https://peepalmedia.com/?p=57411</guid>

					<description><![CDATA[ವೈಜ್ಞಾನಿಕ ಚಿಂತನೆ ಎಂದರೇನು?ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, &#8220;ನಕ್ಷತ್ರಗಳು ಏಕೆ ಹೊಳೆಯುತ್ತವೆ?&#8221;, &#8220;ನಾವು ಎಲ್ಲಿಂದ ಬಂದೆವು?&#8221; ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ. ವೈಜ್ಞಾನಿಕ ಚಿಂತನೆಯ ಪಥವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. &#8220;ಹೇಗೇ?&#8221; ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. [&#8230;]]]></description>
										<content:encoded><![CDATA[
<pre class="wp-block-code"><code><strong>ವೈಜ್ಞಾನಿಕ ಚಿಂತನೆ ಮತ್ತು ಅದನ್ನು ಪಾಲಿಸುವುದು ಒಂದು ಸಮಾಜದ ಬೌದ್ಧಿಕ ಪ್ರಗತಿಯನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವೈಜ್ಞಾನಿಕ ಮನೋಭಾವ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿಯ ಪ್ರಭಾವ ಮತ್ತು ರಾಜಕೀಯ ಒತ್ತಡಗಳ ನಡುವೆ ತೊಳಲಾಡುತ್ತಿದೆ. "Are We Indians Scientific? Nope" ಎಂಬ ಕುನಾಲ್ ಕಮ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಖ್ಯಾತ ವಿಜ್ಞಾನಿ ಹಾಗೂ ಸಾಹಿತಿ <a href="https://en.wikipedia.org/wiki/Gauhar_Raza">ಗೌಹರ್ ರಾಝಾ </a>ಈ ಗಂಭೀರ ವಿಷಯದ ಬಗ್ಗೆ ಮಾತನಾಡಿದ್ದಾರೆ</strong>. ಇದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ</code></pre>



<p><strong>ವೈಜ್ಞಾನಿಕ ಚಿಂತನೆ ಎಂದರೇನು?</strong><br>ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, &#8220;ನಕ್ಷತ್ರಗಳು ಏಕೆ ಹೊಳೆಯುತ್ತವೆ?&#8221;, &#8220;ನಾವು ಎಲ್ಲಿಂದ ಬಂದೆವು?&#8221; ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ.</p>



<p><strong>ವೈಜ್ಞಾನಿಕ ಚಿಂತನೆಯ ಪಥ</strong><br>ವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. &#8220;ಹೇಗೇ?&#8221; ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. ಇದು &#8220;ಏಕೆ?&#8221; ಎಂಬ ಧಾರ್ಮಿಕ ಅಥವಾ ತತ್ತ್ವಶಾಸ್ತ್ರೀಯ ಪ್ರಶ್ನೆಗಿಂತ ಭಿನ್ನವಾಗಿದೆ. &#8220;ಏಕೆ?&#8221; ಎಂಬ ಮತೀಯವಾದದ ಪ್ರಶ್ನೆ ದೇವರೇ ಕಾರಣ ಎಂಬಲ್ಲಿಗೆ ಅವಸಾನವಾಗುತ್ತದೆ. ಆದರೆ &#8220;ಹೇಗೇ?&#8221; ಎಂಬ ವಿಜ್ಞಾನ ಪ್ರಶ್ನೆ ಪ್ರತೀ ಬಾರಿ ಉತ್ತರಗಳನ್ನು ಕಂಡುಕೊಳ್ಳುತ್ತಾ, ಹಳೆಯ ಉತ್ತರ ತಿರಸ್ಕಾರವಾಗಿ ಹೊಸ ಉತ್ತರದೊಂದಿಗೆ ನವೀನವಾಗುತ್ತಾ ಹೋಗುತ್ತದೆ.<br><br>ಧರ್ಮ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾವಿರಾರು ವರ್ಷಗಳ ಹಿಂದೆ ಬರೆದ ಓಟ್‌ಡೇಟೆಡ್‌ ಪುಸ್ತಕದ ಮೊರೆ ಹೋದರೆ, ವಿಜ್ಞಾನಕ್ಕೆ ನಿನ್ನೆಯ ದಿನ ಬಂದ ವೈಜ್ಞಾನಿಕ ಸಂಶೋಧನೆಯೇ ಮುಖ್ಯವಾಗುತ್ತದೆ.<br><br>ಹಾಗಾಗಿ, ಹಳೆಯ ನಂಬಿಕೆಗಳನ್ನು ಪ್ರಶ್ನಿಸುವವರ ಕೊಲೆಯಾಗಬಹುದು, ಮನೆಗಳಿಗೆ ಬೆಂಕಿ ಬೀಳಬಹುದು. ಸಂಪ್ರದಾಯವಾದಿಗಳಿಂದ ಈ ಜಗತ್ತಿನಲ್ಲಿ ರಕ್ತ ಹರಿದಿದೆಯೇ ಹೊರತು, ವಿಜ್ಞಾನಿಗಳಿಂದಲ್ಲ.<br><br>ತಮ್ಮ ನಂಬಿಕೆ ಶ್ರೇಷ್ಟ ಎಂದು ಸಾಬೀತು ಮಾಡಲು ಅವರು ಇನ್ನೊಂದು ಧರ್ಮವನ್ನು ನಿಸ್ಕೃಷ್ಟ ಎಂದು ತೋರಿಸಬೇಕು. ಹಾಗಾಗಿ, ಇನ್ನೊಂದು ಧರ್ಮ ಇಲ್ಲದೇ ಒಂದು ಧರ್ಮಕ್ಕೆ ಮೇಲು-ಕೀಳು ಅಸ್ತಿತ್ವವೇ ಇರುವುದಿಲ್ಲ. ಹಾಗಾಗಿ, ಪರಸ್ಪರ ಧರ್ಮಗಳು ಕಾದಾಡಿ ಜನರ ರಕ್ತ ಹರಿಸುತ್ತವೆ.<br><br>ಧರ್ಮದಲ್ಲಿ ಹಳೆಯ ನಂಬಿಕೆ ಸುಳ್ಳು ಎಂದು ಸಾಬೀತು ಆದರೆ ಅಲ್ಲಿ ಒಂದು ಕೊಲೆಯಾಗುತ್ತದೆ, ಜನ ದೊಂಬಿ ಏಳುತ್ತಾರೆ. ಆದರೆ ವಿಜ್ಞಾನದಲ್ಲಿ ಹಳೆಯ ಥಿಯೆರಿಗಳು ಸರಿ ಇಲ್ಲ ಎಂದು ಸಾಬೀತಾಗಿ, ಹೊಸ ಥಿಯೆರಿ ಬಂದಾಗ ವಿಜ್ಞಾನಿಗಳು ಸಂಭ್ರಮಿಸುತ್ತಾರೆ, ಆ ಹೊಸ ಅನ್ವೇಷಣೆಗಾಗಿ ನೋಬೆಲ್‌ನಂತಹ ಪ್ರಶಸ್ತಿಗಳು ಸಿಗುತ್ತವೆ.<br><br>ಉದಾಹರಣೆಗೆ, ನ್ಯೂಟನ್‌ನ ಗುರುತ್ವಾಕರ್ಷಣ ಸಿದ್ಧಾಂತವನ್ನು ಐನ್‌ಸ್ಟೈನ್ ಪ್ರಶ್ನಿಸಿದರು. ಥಿಯೆರಿ ಆಫ್‌ ರಿಲೇಟಿವಿಟಿಯನ್ನು ತಂದರು. ನ್ಯೂಟನ್‌ನ ಚಲನೆಯ ನಿಯಮಗಳ ಬಗ್ಗೆ ಐನ್‌ಸ್ಟೈನ್ ಎತ್ತಿದ ಈ ಪ್ರಶ್ನೆಯೇ ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ತು.<br><br>ಆದರೆ, <em>“ಓ… ಐನ್‌ಸ್ಟೈನ್ ನಮ್ಮ ನ್ಯೂಟನ್ನರ ವಾದವನ್ನು ಸರಿ ಇಲ್ಲ ಎಂದರು!” </em>ಎಂದು ನ್ಯೂಟನ್‌ನನ್ನು ಒಪ್ಪುವ ಜನರ ಗ್ಯಾಂಗ್‌ ಐನ್‌ಸ್ಟೈನ್ ಮನೆಗೆ ಹೋಗಿ ಕಲ್ಲುಹೊಡೆಯಲಿಲ್ಲ. ಆದರೆ ಧರ್ಮದಲ್ಲಿ ಹಳೆಯ ನಂಬಿಕೆಯನ್ನು ಪ್ರಶ್ನಿಸುವುದೇ ಅಪರಾಧ!<br><br><strong>ವೈಜ್ಞಾನಿಕತೆ ಮತ್ತು ಧರ್ಮದ ನಡುವಿನ ಸಂಘರ್ಷ</strong><br>ಭಾರತೀಯ ಸಮಾಜದಲ್ಲೂ ಪ್ರಶ್ನೆಗಳನ್ನು ಎತ್ತುವ ಸಂಸ್ಕೃತಿ ಇತ್ತು. ಗೌಹರ್ ರಾಝಾ ಅವರು ಭಾರತದ ತತ್ತ್ವಶಾಸ್ತ್ರದ ವಿಚಾರವಾಗಿ ಚಾರ್ವಾಕ ಮತ್ತು ಬುದ್ಧನ ಉಲ್ಲೇಖ ಮಾಡುತ್ತಾರೆ. ಚಾರ್ವಾಕನು &#8220;ಇಂದ್ರಿಯಗಳಿಗೆ ಗೋಚರವಾಗದ್ದನ್ನು ನಂಬಬೇಡಿ&#8221; ಎಂದು ಹೇಳಿದ. ಬುದ್ಧನು &#8220;ಯಾರಾದರೂ ಹೇಳಿದ್ದು ನಿಜವೆಂದು ನಂಬಬೇಡಿ, ಮೊದಲು ಆಲೋಚಿಸಿ, ಪರೀಕ್ಷಿಸಿ, ಆಮೇಲೆ ನಂಬಿ, ಅದನ್ನು ಜನರ ಒಳಿತಿಗಾಗಿ ಬಳಸಿ,&#8221; ಎಂದು ಬೋಧಿಸಿದ. ಈ ಎರಡು ದೃಷ್ಠಿಕೋನಗಳೂ ವೈಜ್ಞಾನಿಕ ಚಿಂತನೆಗೆ ಗಟ್ಟಿತನವನ್ನು ನೀಡುತ್ತವೆ.<br><br>ಗೌಹರ್ ರಾಝಾ ಅವರು ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ 179 ನೇ ಸೂಕ್ತವಾದ ನಾಸದೀಯ ಸೂಕ್ತವನ್ನು ಈ ವಿವೇಚನಾ ಸಂಸ್ಕೃತಿಯ ಬಗ್ಗೆ ಮಾತನಾಡಲು ಬಳಸುತ್ತಾರೆ.<br><br><em>&#8220;ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ತಿಳಿದವರು ಎಂಬ ಪ್ರಶ್ನೆಯನ್ನು ಇದರಲ್ಲಿ ಎತ್ತಿಕೊಳ್ಳುತ್ತಾರೆ. &nbsp;ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಬಂದಾಗ, ದೇವತೆಗಳು ಇರಬಹುದೇ ಎಂಬ ಸಂಶಯ ಬರುತ್ತದೆ. ಆದರೆ, ದೇವತೆಗಳು ಸೃಷ್ಟಿಯ ನಂತರ ಬಂದವರಾದ್ದರಿಂದ ಅವರಿಗೂ ಇದು ತಿಳಿದಿಲ್ಲ.&#8221;</em><br><br>ನಾಸದೀಯ ಸೂಕ್ತದ ಈ ಪ್ರಶ್ನೋತ್ತರವು ಮನುಷ್ಯನ ವಿವೇಚನಾ ಶಕ್ತಿಯೇ ಆಗಿದೆ. ಆದರೆ ಕಾಲ ಕಳೆದಂತೆ ಪ್ರಶ್ನಿಸುವುದನ್ನು ಧರ್ಮಗಳು ಘನಘೋರ ಅಪರಾಧವಾಗಿ ಕಂಡವು, ಈಗಲೂ ಕಾಣುತ್ತಿದ್ದಾವೆ.</p>



<p>ಆದರೆ, ನಾವು ಭಯಯಿಂದ, ನಂಬಿಕೆಗಳಿಂದ, ಮತ್ತು ಅಜ್ಞಾನದ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಇಂತಹ ಪರಂಪರೆಯ ಬದಲು ಯಾವುದನ್ನು ಕೊಡಲು ಹೊರಟಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.</p>



<p>ಭಾರತೀಯ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು ವೈಜ್ಞಾನಿಕ ಸತ್ಯಗಳೊಂದಿಗೆ ಡಿಕ್ಕಿ ಹೊಡೆಯುವ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೆಲವೊಮ್ಮೆ ಪುರಾತನ ಶಾಸ್ತ್ರಗಳಲ್ಲಿ, ಧರ್ಮಗ್ರಂಥಗಳಲ್ಲಿ ಉಲ್ಲೇಖಿತವಾದ ವಿಚಾರಗಳನ್ನು ವೈಜ್ಞಾನಿಕ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತವೆ — ಉದಾಹರಣೆಗೆ, ಪ್ಲಾಸ್ಟಿಕ್ ಸರ್ಜರಿ ಪ್ರಾಚೀನ ಭಾರತದಲ್ಲೇ ಇದ್ದಿತೆಂಬ ಅರ್ಥಹೀನ ಹೇಳಿಕೆಗಳು. ಈ ರೀತಿಯ &#8216;ಸುಳ್ಳು ವಾದ&#8217;ಗಳು ಸಮಾಜದಲ್ಲಿ ವೈಜ್ಞಾನಿಕತೆಯ ನಿಜವಾದ ಅರ್ಥವನ್ನು ನಾಶ ಮಾಡುತ್ತಿವೆ. ಸ್ವತಃ ಪ್ರಧಾನಿ ಮೋದಿಯವರು ಗಣಪತಿಯನ್ನು ಪ್ಲಾಸ್ಟಿಕ್‌ ಸರ್ಜರಿಯಿಂದ ಹುಟ್ಟಿದವನು ಎಂದು ಹೇಳಿದರು. ಆದರೆ ಕುಲಶಾಸ್ತ್ರೀಯವಾಗಿ, ಧಾರ್ಮಿಕ ಪಠ್ಯಗಳಲ್ಲಿ ಈ ಆನೆ ತಲೆಗೆ ಬೇರೆಯೇ ಅರ್ಥಗಳು ಇವೆ. ಮೋದಿಯವರ ಹೇಳಿಕೆಯಿಂದ ವಿಜ್ಞಾನಕ್ಕೆ ಮಾತ್ರ ಅವಮಾನವಲ್ಲ, ಗಣಪತಿಗೂ ಅವಮಾನ ಆಯ್ತು.</p>



<p><strong>ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಚಿಂತ</strong><strong>ನೆಯ ಕೊರತೆ</strong><strong></strong></p>



<p>ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತಿಲ್ಲ. &nbsp;ವಿದ್ಯಾರ್ಥಿಗಳು ಪರೀಕ್ಷೆ ಪಾಸ್ ಆಗುವುದು ಮುಖ್ಯ ಎಂಬ ಒತ್ತಡವನ್ನು ಸೃಷ್ಟಿಸಿಕೊಂಡಿರುವುದರಿಂದ, ಪ್ರಶ್ನೆಗಳನ್ನು ಕೇಳುವ ಸಂಸ್ಕೃತಿಕ ಕಮ್ಮಿಯಾಗುತ್ತಿದೆ. “<em>ನೀವು ಪ್ರಶ್ನೆ ಕೇಳದಿದ್ದರೆ, ನೀವು ಮತ್ತೆ ಮನುಷ್ಯನಿಂದ ಪ್ರಾಣಿಯೆ ಆಗುತ್ತೀರಿ,</em>” ಎಂದು ಗೌಹರ್ ರಾಝಾ ಈ ಬಗ್ಗೆ ತೀವ್ರವಾಗಿ ಚಿಂತೆ ವ್ಯಕ್ತಪಡಿಸುತ್ತಾರೆ.<br><br>ನಮ್ಮ ಪಠ್ಯಪುಸ್ತಕಗಳಿಂದ ಡಾರ್ವಿನ್‌ನ ವಿಕಾಸವಾದವನ್ನು ತೆಗೆದುಹಾಕಲಾಗಿದೆ. ಸರಿ, ಆ ವಾದದ ಬಗ್ಗೆ ಇನ್ನೂ ವಿವಾದಗಳಿಗೆ, ಒಪ್ಪೋಣ. ಆದರೆ ಆವರ್ತಕ ಕೋಷ್ಟಕ (ಪೀರಿಯಾಡಿಕ್‌ ಟೇಬಲ್‌) ವನ್ನೂ ತೆಗೆದುಹಾಕಿದ್ದಾರೆ. ಯಾಕೆ?<br><br>ಯಾಕೆಂದರೆ, ಇದನ್ನು ಓದಿದ ಮಕ್ಕಳು ಬಾಬಾ-ಸ್ವಾಮಿಗಳು ಸೃಷ್ಟಿಯ ಬಗ್ಗೆ ನೀಡುವ ಅವೈಜ್ಞಾನಿಕ, ಸುಳ್ಳು ಪ್ರವಚನಗಳನ್ನು ಪ್ರಶ್ನಿಸದೇ ಇರಲೆಂದು! ಅವರು ಈ ಭೂಮಿ ಪಂಚಭೂತಗಳಿಂದ ಆಗಿದೆ ಎಂದು ಇಂದಿಗೂ ನಂಬುತ್ತಾರೆ, ಆದರೆ ಮ್ಯಾಂಡಲೀವನ ಆವರ್ತಕ ಕೋಷ್ಟಕವು ಇಲ್ಲಿಯ ವರೆಗೆ ಪತ್ತೆಯಾಗಿರುವ 119 ಅಂಶಗಳಿವೆ, ಇವುಗಳಿಂದ ಸೃಷ್ಟಿ ಆಗಿದೆ ಎಂದು ಹೇಳುತ್ತದೆ.<br><br>ಬಾಬಾಗಳು-ಮುಲ್ಲಾಗಳು-ಸ್ವಾಮಿಗಳು ಅವರ ಅಂಗಡಿಯ ಬಾಗಿಲು ಪರ್ಮನೆಂಟಾಗಿ ಮುಚ್ಚುವುದನ್ನು ತಡೆಯಲು ಅವರ ಕೈಯಲ್ಲಿರುವ ಸರ್ಕಾರ ಈ ಪೀರಿಯಾಡಿಕ್‌ ಟೇಬಲ್‌ನಂತರ ಮಹತ್ವದ ಪಾಠಗಳನ್ನು ವಿಜ್ಞಾನದ ಪಾಠಪುಸ್ತಕಗಳಿಂದ ಕಿತ್ತುಹಾಕಿದೆ.</p>



<p><strong>ತಂತ್ರಜ್ಞಾನ ಮತ್ತು ವಿಜ್ಞಾನ — ಸ್ಪಷ್ಟ ಭಿನ್ನತೆ</strong><br>ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೈಜ್ಞಾನಿಕತೆಯನ್ನು ನಿರಾಕರಿಸುವ ಒಂದು ವಿಚಿತ್ರ ಪ್ರವೃತ್ತಿ ಭಾರತದಲ್ಲಿ ಕಾಣಸಿಗುತ್ತದೆ. ಮುಲ್ಲಾಗಳು ಅಥವಾ ಸ್ವಾಮಿಗಳ ಪ್ರವಚನಗಳಲ್ಲಿ ವೈಜ್ಞಾನಿಕ ಸಾಧನೆಗಳ ಕುರಿತಾಗಿ ತಾತ್ವಿಕ ವಿರೋಧ ಕಂಡುಬರುತ್ತದೆ.<br><br>ಸಂಪ್ರದಾಯವಾದಿಗಳಿಗೆ ತಂತ್ರಜ್ಞಾನ ಬೇಕು, ವಿಜ್ಞಾನ ಬೇಡ. ವಿಜ್ಞಾನ ಒಂದು ಅರಿವು, ತಂತ್ರಜ್ಞಾನ ಎಂಬುದು ಆ ಅರಿವನ್ನು ಬಳಸಿಕೊಂಡು ಮಾನವೇಂದ್ರಿಯಗಳ ಅನುಕೂಲಕ್ಕೆ ಸಾಧನಗಳನ್ನು ಉತ್ಪಾಸಿಸುವ ಕ್ಷೇತ್ರ ಅಷ್ಟೇ. ಹಾಗಾಗಿ, ಬಾಬಾ- ಮುಲ್ಲಾಗಳಿಗೆ ತಂತ್ರಜ್ಞಾನದಿಂದ ಹುಟ್ಟಿದ ಸಾಧನಗಳು ಬೇಕು, ಆದರೆ ವಿಜ್ಞಾನ ಬೇಡ. ವಿಜ್ಞಾನ ಅವರು ಕೊಡುವ ಧಾರ್ಮಿಕ ಪ್ರವಚನಕ್ಕೆ ಸವಾಲನ್ನು ಒಡ್ಡುತ್ತದೆ.<br><br>ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಜನರು, ಮುಖ್ಯವಾಗಿ ಸ್ತ್ರೀಯರು, ಫೋಟೋ ತೆಗೆಸಿಕೊಳ್ಳುವುದನ್ನು, ಟಿವಿ ನೋಡುವುದನ್ನು, ವಿಡಿಯೋ ಮಾಡುವುದನ್ನು ನಿಷೇಧಿಸಿದರು. ಆದರೆ ಅದೇ ತಾಲಿಬಾನಿ ನಾಯಕರು ಕ್ಯಾಮರಾದ ಮುಂದೆ ಬಂದು ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ತಂತ್ರಜ್ಞಾನ ಎಂಬ ವಿಜ್ಞಾನದ ಕೂಸು ಮತೀಯವಾದಿಗಳ ಕೈಗೆ ಬಂದರೆ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ.<br><br>ಈ ನಿಖರ ವ್ಯತ್ಯಾಸವನ್ನು ತಿಳಿಯದಿದ್ದರೆ, ನಾವು ವೈಜ್ಞಾನಿಕ ಮನೋಭಾವವನ್ನು ಶ್ರದ್ದೆ ಅಥವಾ ಭಕ್ತಿಯನ್ನು ಇಟ್ಟು ಗೊಂದಲಕ್ಕೊಳಗಾಗುತ್ತೇವೆ.</p>



<p><strong>ವೈಜ್ಞಾನಿಕತೆಯ ರಾಜಕೀಯಕರಣ</strong><br>ವೈಜ್ಞಾನಿಕ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಅಥವಾ ನಿರಾಕರಿಸುವ ಉದಾಹರಣೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ವಿಜ್ಞಾನಿಗಳ ಧ್ವನಿಯನ್ನು ಹತ್ತಿಕ್ಕುವ ಅಪಾಯವಿದೆ. ಗೌಹರ್ ರಾಝಾ ಈ ಬಗ್ಗೆ, “<em>ಇದು ರಾಜಕೀಯಕ್ಕಾಗಿ ವೈಜ್ಞಾನಿಕ ಸತ್ಯವನ್ನು ಬಳಕೆ ಮಾಡುವುದು</em>” ಎಂದು ಎಚ್ಚರಿಕೆ ನೀಡುತ್ತಾರೆ.</p>



<p><strong>ವೈಜ್ಞಾನಿಕ ಶಕ್ತಿ ಮತ್ತು ಪ್ರಗತಿಯ ಪರಿಪೂರ್ಣ ಸಂಬಂಧ</strong><br>ವೈಜ್ಞಾನಿಕ ಮನೋಭಾವವು ಒಂದು ರಾಷ್ಟ್ರದ ಪ್ರಗತಿಯ ಮೂಲ ಆಧಾರವಾಗಿದೆ. ತಂತ್ರಜ್ಞಾನ ಅಭಿವೃದ್ಧಿಯ ಹಿಂದೆ ಇರುವ ವಿಜ್ಞಾನಕ್ಕೆ ಮಾನ್ಯತೆ ನೀಡದೆ ಕೇವಲ ಅದರಿಂದ ಉತ್ಪಾದಿಸಲ್ಪಟ್ಟ ಸಾಧನೆಗಳನ್ನು &nbsp;ಸಂಭ್ರಮಿಸುವ ನಕಲಿ ರಾಷ್ಟ್ರೀಯತೆಯು ಯಾವುದೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡದು.</p>



<p>ಈ ಪಾಡ್‌ಕಾಸ್ಟ್‌ನಲ್ಲಿ ಕುನಾಲ್‌ ಕಾಮ್ರಾ ಅವರು ಗೌಹರ್ ರಾಝಾ ಅವರೊಂದಿಗೆ ಸುದೀರ್ಘ ಮತ್ತು ಆಳವಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ವೈಜ್ಞಾನಿಕತೆ ಹೇಗೆ ಧರ್ಮ, ರಾಜಕೀಯ ಮತ್ತು ಶಿಕ್ಷಣದೊಂದಿಗೆ ಸಂಘರ್ಷ ಮಾಡಿದೆ ಎಂಬುದರ ಮೇಲೆ ಅವರು ಬೆಳಕು ಚೆಲ್ಲುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ — &#8220;ಪ್ರ<em>ಶ್ನೆಗಳು ತಪ್ಪಾಗುವುದಿಲ್ಲ, ಉತ್ತರಗಳು ತಪ್ಪಾಗಬಹುದು</em>.&#8221;<br><br><strong>ಕುನಾಲ್‌ ಕಾಮ್ರಾ ಮತ್ತು ಗೌಹರ್‌ ರಾಝಾ ಅವರ ಸಂವಾದವನ್ನು ವೀಕ್ಷಿಸಲು</strong>: <a href="https://youtu.be/OPLFh1A-HCE?si=HRoi_cnb6Mha5oaV">Are We 🇮🇳 Indians Scientific? | Nope ft. Gauhar Raza | Episode 001</a></p>



<p><br></p>



<p></p>
]]></content:encoded>
					
		
		
			</item>
		<item>
		<title>ಭಾರತ 2024: ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣದಲ್ಲಿ 74% ಹೆಚ್ಚಳ- ವರದಿ</title>
		<link>https://peepalmedia.com/india-2024-74-increase-in-anti-minority-hate-speech-report/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 11 Feb 2025 07:04:34 +0000</pubDate>
				<category><![CDATA[ದೇಶ]]></category>
		<category><![CDATA[anti-minority hate speech]]></category>
		<category><![CDATA[bjp]]></category>
		<category><![CDATA[Christians]]></category>
		<category><![CDATA[hinduism]]></category>
		<category><![CDATA[hindutva]]></category>
		<category><![CDATA[india hate lab]]></category>
		<category><![CDATA[islam]]></category>
		<category><![CDATA[modi]]></category>
		<category><![CDATA[muslims]]></category>
		<category><![CDATA[narendra modi]]></category>
		<category><![CDATA[yogi adityanath]]></category>
		<guid isPermaLink="false">https://peepalmedia.com/?p=53699</guid>

					<description><![CDATA[ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಗುಂಪು ಇಂಡಿಯಾ ಹೇಟ್ ಲ್ಯಾಬ್ ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಶೇ. 74.4 ರಷ್ಟು ಹೆಚ್ಚಾಗಿದೆ. &#8220;ಭಾರತದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ದ್ವೇಷ ಭಾಷಣ ಇನ್ ಇಂಡಿಯಾ- Social Media and Hate Speech in India&#8221; ಎಂಬ ಅಧ್ಯಯನವು ಕಳೆದ ವರ್ಷ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣದ 1,165 ಪ್ರಕರಣಗಳು ದಾಖಲಾಗಿವೆ ಎಂದಿದೆ. [&#8230;]]]></description>
										<content:encoded><![CDATA[
<pre class="wp-block-code"><code><strong>ದ್ವೇಷ ಭಾಷಣ ಮಾಡುವ 10 ಜನರಲ್ಲಿ ಆರು ಜನರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಪಟಾಲಂ ಎಂದು ಇಂಡಿಯಾ ಹೇಟ್ ಲ್ಯಾಬ್ ಸಂಶೋಧನಾ ತಂಡ ತಿಳಿಸಿದೆ</strong></code></pre>



<p>ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಗುಂಪು <a href="https://www.csohate.org/2025/02/10/social-media-and-hate-speech-in-india/" target="_blank" rel="noreferrer noopener">ಇಂಡಿಯಾ ಹೇಟ್ ಲ್ಯಾಬ್</a> ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಶೇ. 74.4 ರಷ್ಟು ಹೆಚ್ಚಾಗಿದೆ.</p>



<p><em>&#8220;ಭಾರತದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ದ್ವೇಷ ಭಾಷಣ ಇನ್ ಇಂಡಿಯಾ- <em>Social Media and Hate Speech in India</em>&#8221; ಎಂಬ</em> ಅಧ್ಯಯನವು ಕಳೆದ ವರ್ಷ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣದ 1,165 ಪ್ರಕರಣಗಳು ದಾಖಲಾಗಿವೆ ಎಂದಿದೆ.</p>



<p>&#8220;ಇದು 2023 ಕ್ಕೆ ಹೋಲಿಸಿದರೆ 74.4% ಹೆಚ್ಚಳವನ್ನು ತೋರಿಸುತ್ತದೆ, ಹಿಂದೆ 668 ಇಂತಹ ಘಟನೆಗಳು ದಾಖಲಾಗಿದ್ದವು. ಇವುಗಳಲ್ಲಿ1,147 (98.5%) ಘಟನೆಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗಿತ್ತು. 1,050 ಘಟನೆಗಳು ಸ್ಪಷ್ಟವಾಗಿ ಮಾತ್ರ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. 97 ಘಟನೆಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇಬ್ಬರನ್ನೂ ಗುರಿಯಾಗಿಸಿಕೊಂಡಿವೆ. 115 (9.9%) ಘಟನೆಗಳಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಲಾಗಿತ್ತು. ಇವುಗಳಲ್ಲಿ 18 ಘಟನೆಗಳು ಸ್ಪಷ್ಟವಾಗಿ ಕ್ರೈಸ್ತರನ್ನು ಮಾತ್ರ ಗುರಿಯಾಗಿಸಿಕೊಂಡಿವೆ. 97 ಘಟನೆಗಳು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಬ್ಬರನ್ನೂ ಗುರಿಯಾಗಿಸಿಕೊಂಡಿವೆ.&#8221;</p>



<p>ವರದಿಯ ಪ್ರಕಾರ, ದ್ವೇಷ ಭಾಷಣ ಮಾಡುವ 10 ಜನರಲ್ಲಿ ಆರು ಮಂದಿ ರಾಜಕಾರಣಿಗಳಾಗಿದ್ದು, ಅವರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದ್ದಾರೆ.</p>



<p>&#8220;ಆದಿತ್ಯನಾಥ್ 86 (7.4%) ದ್ವೇಷ ಭಾಷಣ ಘಟನೆಗಳಿಗೆ ಕಾರಣರಾಗಿದ್ದರೆ, ಮೋದಿ 67 ಭಾಷಣಗಳನ್ನು ಮಾಡಿದ್ದಾರೆ, ಇವರ ಕೃತ್ಯಗಳು 2024 ರಲ್ಲಿ ನಡೆದಿರುವ ದ್ವೇಷ ಭಾಷಣಗಳ 5.7% ರಷ್ಟಿದೆ,&#8221; ಎಂದು ಅದು ಹೇಳಿದೆ.</p>



<p>2024 ರಲ್ಲಿ ಭಾರತದಲ್ಲಿ ದ್ವೇಷ ಭಾಷಣದ ಪರಿಶೀಲಿಸಲ್ಪಟ್ಟ ವ್ಯಕ್ತಿಗತ ಭಾಷಣ ಘಟನೆಗಳ (verified in-person hate speech events) ಪ್ರಸಾರ ಮತ್ತು ವರ್ಧನೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಅಧ್ಯಯನವು ವಿಶ್ಲೇಷಿಸಿದೆ, ಈ ಕೃತ್ಯಗಳು ರಾಜಕೀಯ ರ್ಯಾಲಿಗಳು, ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಧಾರ್ಮಿಕ ಮೆರವಣಿಗೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳಂತಹ ವಿವಿಧ ರೀತಿಯ ಸಾರ್ವಜನಿಕ ಸಭೆಗಳಲ್ಲಿ ನಡೆದಿವೆ.</p>



<p>ದ್ವೇಷ ಭಾಷಣ ದಾಖಲಾಗಿರುವ 931 ಅಥವಾ 79.9% ಘಟನೆಗಳು ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿರುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿವೆ ಎಂದು ವರದಿ ಹೇಳಿದೆ. &#8220;ರಾಜಕೀಯ ನಿಯಂತ್ರಣ ಮತ್ತು ದ್ವೇಷ ಭಾಷಣದ ಹರಡುವಿಕೆಯ ನಡುವೆ ಬಲವಾದ ಸಂಬಂಧವಿದೆ ಎಂದು ದತ್ತಾಂಶವು ಸೂಚಿಸುತ್ತದೆ&#8221; ಎಂದು ಸಂಶೋಧನೆ ಹೇಳಿದೆ.</p>



<p>2024 ರಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು 234 ಅಥವಾ 20% ರಷ್ಟು ಇಂತಹ ದ್ವೇಷ ಭಾಷಣ ಘಟನೆಗಳನ್ನು ದಾಖಲಿಸಿವೆ ಎಂದು ಅದು ಹೇಳಿದೆ.</p>



<p>&#8220;ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಅತಿ ಹೆಚ್ಚು ದ್ವೇಷ ಭಾಷಣ ಘಟನೆಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ, 2024 ರಲ್ಲಿ ಇಲ್ಲಿ ದಾಖಲಾದ ಎಲ್ಲಾ ಘಟನೆಗಳಲ್ಲಿ ಒಟ್ಟಾರೆಯಾಗಿ 47% ರಷ್ಟಿದೆ,&#8221; ಎಂದು ಅಧ್ಯಯನ ಹೇಳಿದೆ.</p>



<p>&#8220;ಬಿಜೆಪಿಯೇ ಅತಿ ಹೆಚ್ಚು ದ್ವೇಷ ಭಾಷಣದ ಆಯೋಜಕರಾಗಿದ್ದು, 340 ದ್ವೇಷ ಭಾಷಣ ಕಾರ್ಯಕ್ರಮಗಳಿಗೆ ಕಾರಣವಾಗಿದೆ, ಹೆಚ್ಚಾಗಿ ಮಾರ್ಚ್ ಮತ್ತು ಜೂನ್ ನಡುವಿನ ಸಾರ್ವತ್ರಿಕ ಚುನಾವಣೆಗಳು ಮತ್ತು ಜಾರ್ಖಂಡ್ ಮತ್ತು ಮಹಾರಾಷ್ಟ್ರದ ನಿರ್ಣಾಯಕ ರಾಜ್ಯ ಚುನಾವಣೆಗಳ ಸಮಯದಲ್ಲಿ &#8211; 2023 ಕ್ಕೆ ಹೋಲಿಸಿದರೆ ಶೇ. 580 ರಷ್ಟು ಹೆಚ್ಚಳ ಕಂಡಿದೆ,&#8221; ಎಂದು ಸಂಶೋಧನೆ ತಿಳಿಸಿದೆ.  </p>



<p>2024 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೋದಿ <a href="https://www.hrw.org/news/2024/08/14/india-hate-speech-fueled-modis-election-campaign" target="_blank" rel="noreferrer noopener">110 ಭಾಷಣಗಳಲ್ಲಿ</a> ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಆಗಸ್ಟ್ ವರದಿ ತಿಳಿಸಿದೆ. ಕನಿಷ್ಠ 110 ಭಾಷಣಗಳಲ್ಲಿ, ಮೋದಿ ಅವರು ರಾಜಕೀಯ ವಿರೋಧವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ.</p>



<p>&#8220;ಮೋದಿಯವರ 2024 ರ ಚುನಾವಣಾ ಪ್ರಚಾರವು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣವನ್ನು ಆಗಾಗ್ಗೆ ಬಳಸುತ್ತಿತ್ತು. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಪ್ರಚಾರದ ಸಮಯದಲ್ಲಿ, ಮೋದಿಯ ಹಿಂದೂ ಬಹುಸಂಖ್ಯಾತ ಬಿಜೆಪಿಯ ನಾಯಕತ್ವವು ಅಂಚಿನಲ್ಲಿರುವ ಗುಂಪುಗಳ ವಿರುದ್ಧ ತಾರತಮ್ಯ, ಹಗೆತನ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿತ್ತು,&#8221;  ಎಂದು ವರದಿ ಹೇಳಿದೆ.</p>



<p><a href="https://peepalmedia.com/fear-of-defeat-bjp-turns-to-hate-politics/">ಏಪ್ರಿಲ್ 21 ರಂದು</a> ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಮಾಡಿದ ಭಾಷಣವನ್ನು ಮಾನವ ಹಕ್ಕುಗಳ ಕಾವಲು ಸಂಸ್ಥೆ ನಿರ್ದಿಷ್ಟವಾಗಿ ಉಲ್ಲೇಖಿಸಿತ್ತು , ಅಲ್ಲಿ ಅವರು ಮುಸ್ಲಿಮರನ್ನು &#8220;ಒಳನುಸುಳುವವರು&#8221; ಮತ್ತು &#8220;ಹೆಚ್ಚು ಮಕ್ಕಳನ್ನು ಹೊಂದಿರುವವರು&#8221; ಎಂದು ಕರೆದರು.</p>



<p>ಪ್ರಚಾರದ ಸಮಯದಲ್ಲಿ ಪ್ರಧಾನಿಯವರು ಹಲವಾರು ಬಾರಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅದು ಹೇಳಿದೆ.</p>



<p></p>
]]></content:encoded>
					
		
		
			</item>
		<item>
		<title>ಮ್ಯಾಗ್ಡೆಬರ್ಗ್ ಕ್ರಿಸ್ಮಸ್ ಮಾರ್ಕೆಟ್ ದಾಳಿ: ಮಾಧ್ಯಮಗಳಿಗೆ ಪಾಠ</title>
		<link>https://peepalmedia.com/magdeburg-christmas-market-attack-lessons-for-the-media/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 31 Dec 2024 09:35:43 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[German]]></category>
		<category><![CDATA[hindu]]></category>
		<category><![CDATA[Ideology]]></category>
		<category><![CDATA[islam]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Magdeburg Attack]]></category>
		<category><![CDATA[Magdeburg Christmas Market Attack]]></category>
		<category><![CDATA[media]]></category>
		<category><![CDATA[media studies]]></category>
		<guid isPermaLink="false">https://peepalmedia.com/?p=51387</guid>

					<description><![CDATA[ಡಿಸೆಂಬರ್ 20, 2024 ರಂದು, ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ನಡೆದ ದುರಂತ ದಾಳಿಯಲ್ಲಿ ಐವರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪಾಶ್ಚಿಮಾತ್ಯ ಮಾಧ್ಯಮಗಳು ಇಂತಹ ಘಟನೆಗಳನ್ನು, ಅದರಲ್ಲೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೇಗೆ ರೂಪಿಸಬೇಕು ಎಂಬುದನ್ನು ತೋರಿಸಿಕೊಟ್ಟಿವೆ. ದಾಳಿಕೋರ ಸೌದಿ ಅರೇಬಿಯಾ ಮೂಲದ ಮನೋವೈದ್ಯ ತಲೇಬ್ ಅಲ್-ಅಬ್ದುಲ್ಮೊಹ್ಸೆನ್, ಒಬ್ಬ ನಾಸ್ತಿಕ ಮತ್ತು ಇಸ್ಲಾಮಿಕ್ ವಿರೋಧಿ ನಿಲುವಿಗೆ ಹೆಸರಾಗಿದ್ದವನು. ಈ ಘಟನೆಯನ್ನು ಸಾಂಪ್ರದಾಯಿಕ ಮಾಧ್ಯಮಗಳು ಹೇಗೆ ವರದಿ ಮಾಡಿದವು ಎಂಬುದು ಮುಖ್ಯವಾಗುತ್ತದೆ. ದಾಳಿಕೋರನ [&#8230;]]]></description>
										<content:encoded><![CDATA[
<pre class="wp-block-code"><code><em><strong>ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ</strong></em></code></pre>



<p>ಡಿಸೆಂಬರ್ 20, 2024 ರಂದು, ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ನಡೆದ ದುರಂತ ದಾಳಿಯಲ್ಲಿ ಐವರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪಾಶ್ಚಿಮಾತ್ಯ ಮಾಧ್ಯಮಗಳು ಇಂತಹ ಘಟನೆಗಳನ್ನು, ಅದರಲ್ಲೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೇಗೆ ರೂಪಿಸಬೇಕು ಎಂಬುದನ್ನು ತೋರಿಸಿಕೊಟ್ಟಿವೆ.</p>



<p>ದಾಳಿಕೋರ ಸೌದಿ ಅರೇಬಿಯಾ ಮೂಲದ ಮನೋವೈದ್ಯ ತಲೇಬ್ ಅಲ್-ಅಬ್ದುಲ್ಮೊಹ್ಸೆನ್, ಒಬ್ಬ ನಾಸ್ತಿಕ ಮತ್ತು ಇಸ್ಲಾಮಿಕ್ ವಿರೋಧಿ ನಿಲುವಿಗೆ ಹೆಸರಾಗಿದ್ದವನು. ಈ ಘಟನೆಯನ್ನು ಸಾಂಪ್ರದಾಯಿಕ ಮಾಧ್ಯಮಗಳು ಹೇಗೆ ವರದಿ ಮಾಡಿದವು ಎಂಬುದು ಮುಖ್ಯವಾಗುತ್ತದೆ. </p>



<p><strong>ದಾಳಿಕೋರನ ಧರ್ಮ ಮತ್ತು ಸಿದ್ಧಾಂತ</strong></p>



<p>ಸಾಮಾನ್ಯವಾಗಿ ಭಾರತೀಯ ಮಾಧ್ಯಮಗಳು ದಾಳಿಕೋರನ ಧರ್ಮ ಯಾವುದು ಎಂದು ನೋಡುತ್ತವೆ. ಅವನ ಸಿದ್ದಾಂತಗಳ ಮೂಲಕ ತಮ್ಮ ನಿರೂಪಣೆಗಳನ್ನು ಕಟ್ಟುತ್ತವೆ.</p>



<p>ದಾಳಿ ಮಾಡಿದವನು ಮುಸಲ್ಮಾನನಾಗಿದ್ದರೆ, &#8220;ರ್ಯಾಡಿಕಲ್‌ ಇಸ್ಲಾಂ, ಜಿಹಾದ್&#8221;‌ ನಂತಹ ಪದಗಳನ್ನು ಬಳಸಿ ಹೆಡ್‌ಲೈನ್‌ ಮಾಡುತ್ತವೆ. ಇಡೀ ಘಟನೆ ಇಸ್ಲಾಮಿಗೆ ಸಂಬಂಧ ಹೊಂದದೇ ಇದ್ದರೂ &#8220;ಇಸ್ಲಾಮಿಸ್ಟ್‌ ಭಯೋತ್ಪಾದನಾ ದಾಳಿ&#8221;ಯಾಗಿ ಬ್ರಾಂಡ್‌ ಮಾಡುತ್ತವೆ. ಲಷ್ಕರ್‌ ಎ ತೊಯೇಬಾ, ತಾಲಿಬಾನ್‌ನಂತಹ ಸಂಘಟನೆಗಳ ದಾಳಿಗಳಿಗೆ ವೈಯಕ್ತಿಕ ಅಪರಾಧಗಳನ್ನು ಸಮೀಕರಿಸಿ ನೋಡುತ್ತವೆ. </p>



<p>ಆದರೆ ಮ್ಯಾಗ್ಡೆಬರ್ಗ್‌ನ ಈ ದಾಳಿ ಇವೆಲ್ಲಕ್ಕೂ ಭಿನ್ನ ನಿರೂಪಣೆಯಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ವರದಿಯಾಗಿದೆ. ಧಾರ್ಮಿಕ ಗುರುತನ್ನು ಮುಂದಿಟ್ಟುಕೊಂಡು ಇಡೀ ಸಮಾಜವನ್ನು ಹೀಗಳೆಯುವ ಭಾರತೀಯ ಮಾಧ್ಯಮಗಳಿಗೆ ಭಿನ್ನವಾಗಿ ಇದರಲ್ಲಿ ಆಕ್ರಮಕಾರನ ವೈಯಕ್ತಿಕ ಮಾನಸಿಕ ಸಮಸ್ಯೆಗಳು, ಆತನ ನಾಸ್ತಿಕ ನಂಬಿಕೆ ಚರ್ಚೆಯ ಕೇಂದ್ರಬಿಂದುವಾಗಿದೆ. </p>



<p><strong>ಪ್ರಾಬಲ್ಯ ಮತ್ತು ಮಾಧ್ಯಮ ನಿರೂಪಣೆಗಳು</strong></p>



<p>ಆಂಟೋನಿಯೊ ಗ್ರಾಂಸ್ಕಿಯ ಅಧೀನತೆಯ ಸಿದ್ಧಾಂತ (theory of hegemony&nbsp;) ಮಾಧ್ಯಮಗಳು ನಿರ್ದಿಷ್ಟ ಸಂದರ್ಭಗಳಲ್ಲಿ ನಡೆಯುವ ಘಟನೆಗಳನ್ನು ರೂಪಿಸುವ ರೀತಿಯ ಮೂಲಕ ಪ್ರಬಲ ಸಿದ್ಧಾಂತಗಳನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸುತ್ತದೆ. ಆದರೆ, ಮ್ಯಾಗ್ಡೆಬರ್ಗ್ ದಾಳಿಯು ಮಾದ್ಯಮಗಳು ಮುಸ್ಲಿಂ ಅಪರಾಧಿಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕಟ್ಟಿರುವ ನಿರೂಪಣೆಗಳಿಂದ ಭಿನ್ನವಾಗಿ ನೋಡಿರುವುದನ್ನು ತೋರಿಸುತ್ತದೆ.</p>



<p><em>ಹ್ಯಾಂಡೆಲ್ಸ್‌ಬ್ಲಾಟ್ (<em>Handelsblatt</em></em>)<em> ಎಂಬ ಮಾಧ್ಯಮ ದಾಳಿಕೋರ ಆಲ್ಟರ್ನೇಟಿವ್‌ ಫಾರ್‌ ಜರ್ಮನಿ</em>&nbsp; (AfD) ಪಕ್ಷಕ್ಕೆ ತೋರಿರುವ ಸಹಾನುಭೂತಿ ಮತ್ತು ಆತನ ಇಸ್ಲಾಮಿಕ್ ವಿರೋಧಿ ಸೈದ್ಧಾಂತಿಕತೆಯ ದೃಷ್ಟಿಕೋನದಿಂದ ಘಟನೆಯನ್ನು ನೋಡಿದೆ.</p>



<p><em>ಡೈ ವೆಲ್ಟ್</em> (<em>Die Welt</em>)&nbsp;ದ್ವೇಷ ಭಾಷಣದ ಕಾನೂನುಗಳ ಬಗ್ಗೆ ಅಪರಾಧಿ ತೋರಿರುವ ಟೀಕೆಗಳು ಮತ್ತು ಅವನ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೇಲೆ ತನ್ನ ವರದಿಯನ್ನು ಕೇಂದ್ರೀಕರಿಸಿ, ಈ ದಾಳಿಯ ಹಿಂದಿನ ಪ್ರೇರಣೆಗಳನ್ನು  ಸೈದ್ಧಾಂತಿಕ ಚೌಕಟ್ಟಿನೊಳಗೆ ಇಟ್ಟು ವರದಿ ಮಾಡಿದೆ.  </p>



<p><strong>ಸಾಂಸ್ಕೃತಿಕ ಸಂಕೇತಗಳು ಮತ್ತು ಸುದ್ದಿ ಮೌಲ್ಯಗಳು</strong></p>



<p>ಸ್ಟುವರ್ಟ್ ಹಾಲ್ ಅವರ ಸಾಂಸ್ಕೃತಿಕ ಸಂಕೇತಗಳ ಸಿದ್ಧಾಂತವು (theory of cultural codes) ಮಾಧ್ಯಮವು ವರದಿಗಳನ್ನು ಮಾಡುವಾಗ ಪ್ರೇಕ್ಷಕರ ಮೌಲ್ಯಗಳು ಮತ್ತು ಗ್ರಹಿಕೆಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮಾಡುತ್ತವೆ ಎಂದು ಹೇಳುತ್ತದೆ. ದಾಳಿ ಮಾಡಿದವನು ಮುಸ್ಲಿಂ ಆಗಿದ್ದರೆ, ಆತನ ದಾಳಿ ಆತನ ಧಾರ್ಮಿಕ ಕಾರಣಗಳಿಂದ ಅಲ್ಲದೇ ಇದ್ದರೂ ಅದನ್ನು ಧರ್ಮದ ಜೊತೆಗೆ ತಳುಕುಹಾಕಿ ವರದಿ ಮಾಡುವುದು ಇದೇ ಕಾರಣಕ್ಕೆ. ಮೊದಲು ಮಾಧ್ಯಮಗಳು ವೀಕ್ಷಕನ, ಓದುಗನ ಆಲೋಚನೆಯನ್ನು ಬದಲಿಸುವಂತಹ ನಿರೂಪಣೆಗಳನ್ನು ಕಟ್ಟುತ್ತವೆ, ಆ ಮೇಲೆ ವೀಕ್ಷಕ/ಓದುಗ ಮಾಧ್ಯಮಗಳು ಈಗಾಗಲೇ ನೀಡಿರುವ ಕನ್ನಡಕ ಹಾಕಿಕೊಂಡು ಎಲ್ಲಾ ಘಟನೆಗಳನ್ನು ನೋಡುತ್ತಾನೆ. ಆತನ ಗ್ರಹಿಕೆಯನ್ನು ತಾನೇ ನಿರ್ಮಿಸಿ, ಅದನ್ನು ಪೋಷಿಸಲು ಬೇಕಾದ ರೀತಿಯಲ್ಲಿ ವರದಿ ಮಾಡುತ್ತವೆ.</p>



<p>ಒಂದು ವೇಳೆ ಈ ಘಟನೆ ಭಾರತದಲ್ಲಿ ನಡೆದಿದ್ದರೆ, ನಾಸ್ತಿಕ ಮತ್ತು ಕಟ್ಟರ್‌ ಇಸ್ಲಾಂ ವಿರೋಧಿ ದಾಳಿಕೋರನೂ ʼಜಿಹಾದಿʼಯಾಗುತ್ತಾನೆ. ಅದೇ ರೀತಿಯ ದಾಳಿಯನ್ನು ಹಿಂದೂ ಮಾಡಿದ್ದರೆ, ಅದು ಹಿಂದೂ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ. </p>



<p>ಭಾರತದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನಾವು ಈ ಹಿನ್ನಲೆಯಿಂದ ನೋಡಬೇಕು. ಮುಸಲ್ಮಾನ ವ್ಯಕ್ತಿ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಫ್ರೀಜರ್‌ನಲ್ಲಿ ಇಟ್ಟಿದ್ದು ಇಸ್ಲಾಂ ಬಗೆಗಿನ ಚರ್ಚೆಗೆ ಕಾರಣವಾದರೆ, ಅದೇ ರೀತಿಯ ಕೃತ್ಯ ನಡೆಸಿದ ಹಿಂದೂವಿನ ಈ ಅಪರಾಧ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ. ಈ ಪೂರ್ವಾಗ್ರಹಗಳನ್ನು ಮಾಧ್ಯಮಗಳು ನಮಗೆ ನೀಡಿವೆ. </p>



<p><em>ಫ್ರಾಂಕ್‌ಫರ್ಟರ್ ಆಲ್‌ಗೆಮೈನ್ ಝೈತುಂಗ್</em> (<em>Frankfurter Allgemeine Zeitung</em>) ಈ ದಾಳಿಯನ್ನು ನಡೆಸಿದವನು ತನ್ನನ್ನು ತಾನು &#8216;ಇಸ್ಲಾಂನ ಇತಿಹಾಸದಲ್ಲಿಯೇ ಅತ್ಯಂತ ಆಕ್ರಮಣಕಾರಿ ವಿಮರ್ಶಕ&#8217; ಎಂದು ಕರೆಸಿಕೊಂಡಿರುವುದು, ಆತನ ವೈಯಕ್ತಿಕ ಗುಣಕ್ಕೆ ಒತ್ತು ನೀಡುವ ಮೂಲಕ ತಟಸ್ಥ  ವರದಿಯನ್ನು ಮಾಡಿದೆ. ಬಿಬಿಸಿ ನ್ಯೂಸ್‌ ಕೂಡ ಇಸ್ಲಾಮೋಫೋಬಿಯಾದ ಬಗ್ಗೆ ಮರುಚರ್ಚೆಯನ್ನು ಮಾಡಿದರೂ, ಈ ಘಟನೆ ಸಾಮೂಹಿಕವಾಗಿ ನಡೆಯುವ ಇಸ್ಮಾಂನ ಬಗೆಗಿನ ಅಪಾದನೆಗಳಿಗೆ ಭಿನ್ನವಾಗಿ ಈ ಘಟನೆಯನ್ನು ನೋಡುವ ಬಗೆಯನ್ನು ತಿಳಿಸಿತು. </p>



<p>ಮ್ಯಾಗ್ಡೆಬರ್ಗ್‌ ದಾಳಿಯನ್ನು ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿದ ಬಗೆಯನ್ನು ಕೆಲವು ಮಾಧ್ಯಮ ಸಿದ್ಧಾಂತಗಳ ಮೂಲಕ ನೋಡಬಹುದು. </p>



<p><strong>ಚೌಕಟ್ಟಿನ ಸಿದ್ಧಾಂತ</strong> &#8211;<strong>Framing theory</strong></p>



<p>ಮಾಧ್ಯಮಗಳು ವರದಿ ಮಾಡುವಾಗ ಒಂದು ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುತ್ತವೆ. ಮಾಧ್ಯಮಗಳು ವಿಲನ್‌ ಎಂಬಂತೆ ಚಿತ್ರಿಸಿದ ವ್ಯಕ್ತಿ ಸಾರ್ವಜನಿಕರ ಗ್ರಹಿಕೆಯಲ್ಲಿಯೂ ವಿಲನ್‌ ಆಗುತ್ತಾನೆ. ಘಟನೆಯ ಹಿಂದೆ-ಮುಂದೆ ನೋಡಿ ಮಾಧ್ಯಮಗಳ ಸುದ್ದಿ ನಿರೂಪಣೆಯನ್ನು ಜನರು ಒಡೆದು ನೋಡುವುದಿಲ್ಲ ಎಂಬ ಧೈರ್ಯ ಕೂಡ ಮಾಧ್ಯಮಗಳಿಗೆ ಇರುತ್ತದೆ. ಮಾಧ್ಯಮಗಳ ದೃಷ್ಟಿಯಲ್ಲಿ ʼವೀಕ್ಷಕರು ಅವರು ಹೇಳಿದ್ದನ್ನು ಮಾತ್ರ ನಂಬುವ ಜೀವಿಗಳು.ʼ ಹೀಗಾಗಿ, ವೀಕ್ಷಕ ಏನನ್ನು ಯೋಚಿಸಬೇಕು ಎಂಬುದನ್ನು ಮಾಧ್ಯಮಗಳೇ ನಿಯಂತ್ರಿಸುತ್ತವೆ. ದಾಳಿಕೋರ ಮುಸ್ಲೀಂ ಆದರೆ ಆತನ ಅದು ಸಾಮೂಹಿಕ ಬೆದರಿಕೆ, ಮುಸ್ಲಿಮೇತರನಾದರೆ ಆತನ ಅಪರಾಧ ವೈಯಕ್ತಿಕ ಎಂಬಂತೆ ವರದಿ ಮಾಡುತ್ತವೆ. </p>



<p>ಇದರ ಪರಿಣಾಮವಾಗಿ ದಾಳಿ ನಡೆಸಿದವ, ಕಳ್ಳತನ ಮಾಡಿದವ, ಅತ್ಯಾಚಾರ ಮಾಡಿದವನು ಯಾವ ಧರ್ಮದವನು ಎಂದು ಮೊದಲು ನೋಡಿ ಈ ವರದಿಯನ್ನು ನೋಡುವ ಪರಿಪಾಠವನ್ನು ವೀಕ್ಷಕ ಬೆಳೆಸಿಕೊಳ್ಳುವಂತೆ ಮಾಧ್ಯಮಗಳು ಮಾಡಿವೆ. </p>



<p><strong>ಸುದ್ದಿ ಮೌಲ್ಯಗಳ ಸಿದ್ಧಾಂತ</strong> &#8211; <strong>News values theory</strong></p>



<p>ದಾಳಿಕೋರನ ಧರ್ಮ ಯಾವುದು ಎಂಬುದರಿಂದ ಸುದ್ದಿಗೆ  ಹೆಚ್ಚು ಮೌಲ್ಯ ಸಿಗುತ್ತಿದೆ. ಇಲ್ಲಿ ಸಾಂಪ್ರದಾಯಿಕ, ತಟಸ್ಠ ಸುದ್ದಿ ನಿರೂಪಣೆಗಳಿಗೆ ಬೆಲೆ ಇಲ್ಲ. ಪ್ರಕರಣದಲ್ಲಿ ಅಪರಾಧಿಯಾಗಿರುವ ವ್ಯಕ್ತಿಯ ಧರ್ಮದ ಮೇಲೆ ಆ ಸುದ್ದಿ ಹೆಚ್ಚು ಸಮಯ ಓಡುತ್ತದೆ. ಜನರು ಮತ್ತೆ ಮತ್ತೆ ತಮ್ಮ ಒಳಗೆ ಮಾಧ್ಯಮಗಳು ತುಂಬಿರುವ ಆಕ್ರೋಶವನ್ನು ಹೊರಗೆ ಹಾಕಲು ಈ ಸುದ್ದಿಯನ್ನು ಟಿವಿ, ಯೂಟ್ಯೂಬ್‌ಗಳಲ್ಲಿ ಹುಡುಕಿ ನೋಡುತ್ತಾರೆ.  </p>



<p><strong>ಅಧಿಕಾರ ಮತ್ತು ಸಿದ್ಧಾಂತ</strong> &#8211; <strong>Hegemony and ideology</strong></p>



<p>ಮಾಧ್ಯಮಗಳು ಸುದ್ದಿಯ ಯಾವ ಅಂಶವನ್ನು ಹೆಚ್ಚು ಹೈಲೈಟ್‌ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಮೂಲಕ ತಾವು ಈಗಾಗಲೇ ಬಿತ್ತಿರುವ ಪ್ರಬಲ ಸಿದ್ದಾಂತವನ್ನು ಬಲಪಡಿಸುತ್ತವೆ. ಮ್ಯಾಗ್ಡೆಬರ್ಗ್‌ ದಾಳಿಯನ್ನು ಭಾರತೀಯ ಮಾಧ್ಯಮಗಳು ವರದಿ ಮಾಡಿದರೆ, ಆತ ಹುಟ್ಟಿದ ಧರ್ಮ ಇಸ್ಲಾಂಗೆ ಹೆಚ್ಚು ಒತ್ತು ನೀಡಿ ವರದಿ ಮಾಡುತ್ತವೆ, ಆತ ನಾಸ್ತಿಕ ಎಂಬುದನ್ನು ಕಡಿಮೆ ಚರ್ಚೆ ಮಾಡುತ್ತವೆ. ಏಕೆಂದರೆ, ಇಸ್ಲಾಮೋಫೋಬಿಯಾದಿಂದ ಸುದ್ದಿಗೆ ಮೌಲ್ಯ ಹೆಚ್ಚಾಗುತ್ತದೆ, ಸುದ್ದಿ ಚೆನ್ನಾಗಿ ಮಾರಾಟವಾಗುತ್ತದೆ ಮತ್ತು ಒಳ್ಳೆಯ ಆದಾಯ ಬರುತ್ತದೆ.</p>



<p><strong>ಸಾಂಸ್ಕೃತಿಕ ಸಂಕೇತಗಳು</strong> &#8211;<strong>Cultural codes</strong></p>



<p>ಮತ್ತೆ ಇಲ್ಲೂ ದಾಳಿಕೋರನ ಧರ್ಮದ ಮೂಲಕ ಘಟನೆಯನ್ನು ನೋಡಲಾಗುತ್ತದೆ. ಮುಸಲ್ಮಾನ ನಾಸ್ತಿಕ ಮಾಡಿದ ದಾಳಿಯೂ ʼಇಸ್ಲಾಂನಿಂದ ಸಾಮೂಹಿಕ ಬೆದರಿಕೆʼ ಎಂಬುದಾಗಿ ಚಿತ್ರಿಸಲಾಗುತ್ತದೆ, ಮುಸ್ಲಿಮೇತರ ಮಾಡಿದ ದಾಳಿ ವೈಯಕ್ತಿಕವಾಗುತ್ತದೆ. ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬು ಇಟ್ಟಿದ್ದಾನೆ ಎಂದು ಆದಿತ್ಯ ರಾವ್‌ ಎಂಬಾತನನ್ನು ಬಂಧಿಸುವಾಗ, ಆತನನ್ನು ಮಾಧ್ಯಮಗಳು ʼಮಾನಸಿಕ ರೋಗಿʼ ಎಂದು ಕರೆಯುತ್ತವೆ ಎಂದು ಕೆಲವು ಜನರು ಟೀಕೆ ಮಾಡಿದ್ದರು. ಈ ಟೀಕೆಯೇ ಸದ್ಯದ ಮಾಧ್ಯಮಗಳ ನಿಜವಾದ ನಡವಳಿಕೆ.</p>



<p><strong>ಸಾಮಾಜಿಕ ನಿರ್ಮಾಣವಾದ</strong> &#8211; <strong>Social constructionism</strong></p>



<p>ಮಾಧ್ಯಮ ಸುದ್ದಿ ನಿರೂಪಣೆಗಳು ಒಂದು ಸಮುದಾಯವನ್ನು ಮತ್ತು ಇತತರನ್ನು ಹೇಗೆ ನೋಡಬೇಕು ಎಂಬುದನ್ನು ರೂಪಿಸುತ್ತವೆ. ಆದರೆ ಜರ್ಮನಿಯ ಈ ಘಟನೆಯಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ದಾಳಿ ನಡೆಸಿದವನ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿವೆ. ಇಲ್ಲಿ ಸಾಮೂಹಿಕ ಅಭಿಪ್ರಾಯವನ್ನು ಕಟ್ಟಲು ಹೋಗಲಿಲ್ಲ.  </p>



<p><strong>ಪವರ್ ಡೈನಾಮಿಕ್ಸ್ ಮತ್ತು ಸಾರ್ವಜನಿಕ ಗ್ರಹಿಕೆ</strong> &#8211; <strong>Power dynamics and public perception</strong></p>



<p>ಮೈಕೆಲ್ ಫೌಕಾಲ್ಟ್ ಅವರ ಶಕ್ತಿ ಮತ್ತು ಜ್ಞಾನದ ಸಿದ್ಧಾಂತವು (theory of power and knowledge) ಮಾಧ್ಯಮವು ತನ್ನ ವರದಿಯ ಮೂಲಕ ಸಾಮಾಜಿಕ ನಿಯಂತ್ರಣವನ್ನು ಮಾಡುತ್ತದೆ ಎಂದು ಹೇಳುತ್ತದೆ.  ಮ್ಯಾಗ್ಡೆಬರ್ಗ್ ಪ್ರಕರಣದಲ್ಲಿ, ಆಕ್ರಮಣಕಾರನ ಇಸ್ಲಾಮೋಫೋಬಿಕ್ ಚಿಂತನೆಯನ್ನು ನಿರ್ಲಕ್ಷಿಸುವುದು   ಅಸ್ತಿತ್ವದಲ್ಲಿರುವ ಪವರ್‌ ಡೈನಾಮಿಕ್ಸ್ ಅನ್ನು ತೋರಿಸುತ್ತದೆ.</p>



<p>ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ.</p>



<p>ಉದಾಹರಣೆಗೆ: ಆರಂಭದಲ್ಲಿ ರೀಲ್ಸ್‌ಗಳಲ್ಲಿ ಬರುವ ಜನರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾನ್ಯ ಜನರಿಗೆ ಆಸಕ್ತಿ ಇರಲಿಲ್ಲ. ಆ ಆಸಕ್ತಿನ್ನು ಮಾಧ್ಯಮಗಳು ಆರಂಭದಲ್ಲಿ ಹುಟ್ಟಿಸಿದವು. ಆ ನಂತರ ಜನರು ಅದನ್ನು ಪದೇ ಪದೇ ಬಯಸುವಂತೆ ಮಾಡಿ, ಅಂತಹ ಕಳಪೆ ಸುದ್ದಿಗಳನ್ನೇ ಜನರಿಗೆ ನೀಡಲು ಆರಂಭಿಸಿದವು. </p>



<p>ಮಾಧ್ಯಮಗಳು ನೀಡುವ ಸುದ್ದಿಗಳ ಬಗ್ಗೆ ಎಚ್ಚರವಾಗಿರೋಣ..</p>



<p></p>
]]></content:encoded>
					
		
		
			</item>
		<item>
		<title>ʼಭಾರತದ ಮುಸಲ್ಮಾನರು ನೊಂದಿದ್ದಾರೆʼ- ಅಯತೊಲ್ಲಾ ಖಮೇನಿ: ಇರಾನ್‌ ನಾಯಕನ ಹೇಳಿಕೆ ಒಪ್ಪುವಂತದ್ದಲ್ಲ ಎಂದ ಭಾರತ ಸರ್ಕಾರ</title>
		<link>https://peepalmedia.com/india-condemns-ayatollah-khameneis-indian-muslims-are-suffering-statement/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Sep 2024 06:13:08 +0000</pubDate>
				<category><![CDATA[ವಿದೇಶ]]></category>
		<category><![CDATA[Ayatollah Khamenei]]></category>
		<category><![CDATA[india]]></category>
		<category><![CDATA[iran]]></category>
		<category><![CDATA[Iranian Supreme]]></category>
		<category><![CDATA[islam]]></category>
		<category><![CDATA[islamic]]></category>
		<category><![CDATA[modi]]></category>
		<category><![CDATA[musilm]]></category>
		<category><![CDATA[narendra modi]]></category>
		<category><![CDATA[pm]]></category>
		<guid isPermaLink="false">https://peepalmedia.com/?p=45590</guid>

					<description><![CDATA[ಬೆಂಗಳೂರು: ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವಂತೆ ಭಾರತದ ಮುಸ್ಲಿಮರೂ &#8220;ನೋವಿನಲ್ಲಿದ್ದಾರೆ&#8221; ಎಂಬ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹೇಳಿಕೆಯನ್ನು ಭಾರತ ಸರ್ಕಾರವು ಸೆಪ್ಟೆಂಬರ್ 15 ರಂದು &#8220;ಇದು ಒಪ್ಪುವಂತದ್ದಲ್ಲ&#8221; ಎಂದು ಖಂಡಿಸಿದೆ ಮತ್ತು ಇರಾನ್ ತನ್ನ ದೇಶದ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯ ಕಡೆಗೆ ಗಮನ ಕೊಡುವಂತೆ ಒತ್ತಾಯಿಸಿದೆ. ಟೆಹ್ರಾನ್‌ನಲ್ಲಿ ಇಸ್ಲಾಮಿಕ್ ವಿದ್ವಾಂಸರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಖಮೇನಿ ಇಸ್ಲಾಮಿನ ವಿಶ್ವ ಸಹೋದರತ್ವದ ಬಗ್ಗೆ ಮಾತನಾಡಿ, ಇದು ಮುಸ್ಲಿಮರು ಇತರರಿಂದ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೆಚ್ಚು [&#8230;]]]></description>
										<content:encoded><![CDATA[
<p><strong>ಬೆಂಗಳೂರು</strong>: ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವಂತೆ ಭಾರತದ ಮುಸ್ಲಿಮರೂ &#8220;ನೋವಿನಲ್ಲಿದ್ದಾರೆ&#8221; ಎಂಬ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹೇಳಿಕೆಯನ್ನು ಭಾರತ ಸರ್ಕಾರವು ಸೆಪ್ಟೆಂಬರ್ 15 ರಂದು &#8220;ಇದು ಒಪ್ಪುವಂತದ್ದಲ್ಲ&#8221; ಎಂದು ಖಂಡಿಸಿದೆ ಮತ್ತು ಇರಾನ್ ತನ್ನ ದೇಶದ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯ ಕಡೆಗೆ ಗಮನ ಕೊಡುವಂತೆ ಒತ್ತಾಯಿಸಿದೆ.</p>



<p>ಟೆಹ್ರಾನ್‌ನಲ್ಲಿ ಇಸ್ಲಾಮಿಕ್ ವಿದ್ವಾಂಸರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಖಮೇನಿ ಇಸ್ಲಾಮಿನ ವಿಶ್ವ ಸಹೋದರತ್ವದ ಬಗ್ಗೆ ಮಾತನಾಡಿ, ಇದು ಮುಸ್ಲಿಮರು ಇತರರಿಂದ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.</p>



<p><a href="https://farsi.khamenei.ir/speech-content?id=57542">ಫಾರ್ಸಿಯಲ್ಲಿರುವ ಈ&nbsp;ಭಾಷಣವನ್ನು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ&nbsp;ಅಪ್‌ಲೋಡ್ ಮಾಡಲಾಗಿದೆ</a>. ಆಯ್ದ ಭಾಗವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.&nbsp;</p>



<p>“ಇಸ್ಲಾಮಿನ ಶತ್ರುಗಳು ಯಾವಾಗಲೂ ನಮ್ಮ ಇಸ್ಲಾಮಿಕ್ ಉಮ್ಮಾ ಎಂಬ ನಮ್ಮ ಗುರುತಿನ ಬಗ್ಗೆ ಅಸಡ್ಡೆಯನ್ನು ಹೊಂದಿದ್ದಾರೆ. ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸಲ್ಮಾನನೊಬ್ಬ ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಾವು ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲು ಸಾಧ್ಯವಿಲ್ಲ,”&nbsp;<a href="https://x.com/khamenei_ir/status/1835646452699164752">ಎಂದು ಎಕ್ಸ್ ಪೋಸ್ಟ್ ಹೇಳಿದೆ</a>&nbsp;.</p>



<p>ಕೆಲವು ಗಂಟೆಗಳ ನಂತರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಇರಾನ್ ನಾಯಕನ ಹೇಳಿಕೆಗಳನ್ನು ಟೀಕಿಸಿದರು.</p>



<p><strong>“</strong>ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕ ನೀಡಿರುವ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ತಪ್ಪು ಮಾಹಿತಿ ಮತ್ತು ಸ್ವೀಕಾರಾರ್ಹವಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಮೆಂಟ್ ಮಾಡುವ ದೇಶಗಳು ಇತರರ ಬಗ್ಗೆ ಯಾವುದೇ ಅವಲೋಕನ ಮಾಡುವ ಮೊದಲು ತಮ್ಮದೇ ಆದ ಸ್ಥಿತಿಯನ್ನು ನೋಡಿಕೊಳ್ಳುವಂತೆ ನಾವು ಸಲಹೆ ನೀಡುತ್ತೇವೆ,” ಎಂದು ಅವರು ಪೋಸ್ಟ್ ಮಾಡಿದ್ದಾರೆ.</p>



<p>ಭಾರತವು ಇರಾನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ, ಟೆಹ್ರಾನ್‌ ಚಾಬಹಾರ್‌ನ ಆಯಕಟ್ಟಿನ ಬಂದರಿನಲ್ಲಿ ಕೆಲಸ ಮಾಡುತ್ತಿದೆ. ಈ ವರ್ಷದ ಮೇನಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಉಪರಾಷ್ಟ್ರಪತಿ ಭಾಗವಹಿಸಿದ್ದರು.&nbsp;ಜುಲೈನಲ್ಲಿ ನೂತನವಾಗಿ ಚುನಾಯಿತರಾದ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ&nbsp;ಭಾರತದ ಹಿರಿಯ ಸಚಿವರೊಬ್ಬರು ಭಾರತವನ್ನು&nbsp;<a href="https://x.com/nitin_gadkari/status/1818333929910247571">ಪ್ರತಿನಿಧಿಸಿದ್ದರು .</a></p>



<p>ಬಲವಾದ ಸಂಬಂಧಗಳ ಹೊರತಾಗಿಯೂ, ಇರಾನಿನ ಸುಪ್ರೀಂ ಲೀಡರ್ ಭಾರತದಲ್ಲಿರುವ ಮುಸ್ಲಿಮರ ಪರಿಸ್ಥಿತಿ ಮತ್ತು ಕಾಶ್ಮೀರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು ಇದೇ ಮೊದಲೇನಲ್ಲ.</p>



<p>ಮಾರ್ಚ್ 2020 ರಲ್ಲಿ ದೆಹಲಿ ಗಲಭೆಯ ಸಂದರ್ಭದಲ್ಲಿ ಭಾರತೀಯ ಮುಸ್ಲಿಮರ ಬಗ್ಗೆ, “ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಪ್ರಪಂಚದಾದ್ಯಂತದ&nbsp;<a href="https://x.com/khamenei_ir/status/1235534356363517955">ಮುಸ್ಲಿಮರ ಹೃದಯಗಳು</a>&nbsp;ದುಃಖಿಸುತ್ತಿವೆ. ಭಾರತ ಸರ್ಕಾರವು ತೀವ್ರವಾದಿ ಹಿಂದೂಗಳು ಮತ್ತು ಅವರ ಪಕ್ಷಗಳನ್ನು ಎದುರಿಸಬೇಕು ಹಾಗೂ ಇಸ್ಲಾಮಿಕ್‌ ಜಗತ್ತಿನಿಂದ ಭಾರತವನ್ನು ಪ್ರತ್ಯೇಕಿಸುವುದು ಆಗಬಾರದೆಂದರೆ ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸಬೇಕು,” ಎಂದು ಅಯತೊಲ್ಲಾ ಖಮೇನಿ ಅವರ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.</p>



<p>ಹಿಂಸಾತ್ಮಕ ಗಲಭೆಗಳ ಬಗ್ಗೆ ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಅವರು ಕಳವಳ ವ್ಯಕ್ತಪಡಿಸಿದ ನಂತರ, ಇರಾನ್ ರಾಯಭಾರಿಯನ್ನು&nbsp;ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ&nbsp;<a href="https://thewire.in/diplomacy/india-summons-iranian-envoy-over-comments-by-foreign-minister-on-delhi-violence">ಕರೆಸಲಾಯಿತು .</a></p>



<p>ಅಯತೊಲ್ಲಾ ಕಾಶ್ಮೀರದ ಬಗ್ಗೆ ಹೆಚ್ಚು ಆಗಾಗ ಹೇಳಿಕೆಗಳನ್ನು ನೀಡುತ್ತಿದ್ದರು, ಅವರು ಎಂಬತ್ತರ ದಶಕದ ಆರಂಭದಲ್ಲಿ ಭೇಟಿ ತಾವು ನೀಡಿದ್ದ ಕಾಶ್ಮೀರದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಕಾಶ್ಮೀರದ ಬಗ್ಗೆ&nbsp;<a href="https://x.com/khamenei_ir/status/1164140759894953984">ಆಗಸ್ಟ್ 2019</a>&nbsp;ರಂದು ಕೊನೆಯ ಬಾರಿ ಹೇಳಿಕೆ ನೀಡಿದ್ದರು. ಆದರೂ ಅದಕ್ಕೂ ಮೊದಲು ಅವರು&nbsp;<a href="https://x.com/khamenei_ir/status/1092826386228789250">ಕಾಶ್ಮೀರಿ&nbsp;</a><a href="https://x.com/khamenei_ir/status/1092826386228789250">ಮುಸ್ಲಿಮರನ್ನು</a>&nbsp;ತುಳಿತಕ್ಕೊಳಗಾದ ಸಮುದಾಯಗಳ ಪಟ್ಟಿಯಲ್ಲಿ&nbsp;<a href="https://x.com/khamenei_ir/status/879204522530418689"> ಸೇರಿಸಿದ್ದಾರೆ.</a></p>



<p><a href="https://indianexpress.com/article/india/latest-news/india-summons-iranian-envoy-over-kashmir-remarks/">ನವೆಂಬರ್ 2010 ರಲ್ಲಿ</a>&nbsp;, ಕಾಶ್ಮೀರದ ಕುರಿತು ಅಯತೊಲ್ಲಾ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ತೋರಿಸಲು ಭಾರತ ಸರ್ಕಾರ ಹಂಗಾಮಿ ಇರಾನ್ ರಾಯಭಾರಿಯನ್ನು ಕರೆಸಿತ್ತು.&nbsp;</p>
]]></content:encoded>
					
		
		
			</item>
	</channel>
</rss>
