<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>madras high court &#8211; Peepal Media</title>
	<atom:link href="https://peepalmedia.com/tag/madras-high-court-2/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 02 Oct 2024 08:47:19 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>madras high court &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಗ್ಗಿ ವಾಸುದೇವ್ ಇಶಾ ಫೌಂಡೇಶನ್ ಮೇಲೆ ಪೊಲೀಸರ ದಾಳಿ</title>
		<link>https://peepalmedia.com/police-raid-on-jaggi-vasudevs-isha-foundation/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Oct 2024 08:05:40 +0000</pubDate>
				<category><![CDATA[ಅಪರಾಧ]]></category>
		<category><![CDATA[adiyogi]]></category>
		<category><![CDATA[coimbatore]]></category>
		<category><![CDATA[isha foundation]]></category>
		<category><![CDATA[jaggi vasudev]]></category>
		<category><![CDATA[madras hc]]></category>
		<category><![CDATA[madras high court]]></category>
		<category><![CDATA[tamil nadu]]></category>
		<category><![CDATA[Tamil Nadu Police]]></category>
		<category><![CDATA[Thondamuthur]]></category>
		<category><![CDATA[ಅದಿಯೊಗಿ]]></category>
		<guid isPermaLink="false">https://peepalmedia.com/?p=46559</guid>

					<description><![CDATA[ಬೆಂಗಳೂರು: ತಮಿಳುನಾಡು ಪೊಲೀಸರು ಮಂಗಳವಾರ ಕೊಯಮತ್ತೂರು ಜಿಲ್ಲೆಯ ತೊಂಡಮುತ್ತೂರಿನಲ್ಲಿರುವ ಸ್ವಯಂಘೋಷಿತ ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ, ಮದ್ರಾಸ್ ಹೈಕೋರ್ಟ್ ಈ ಸಂಸ್ಥೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ಕುರಿತು ವರದಿಯನ್ನು ಕೋರಿದ ಒಂದು ದಿನದ ನಂತರ ಇದು ನಡೆದಿದೆ. ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ಸುಮಾರು 150 ಪೊಲೀಸ್ ಅಧಿಕಾರಿಗಳು ಮತ್ತು ಮೂವರು ಉಪ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒಳಗೊಂಡ ತಂಡ ಶೋಧಕಾರ್ಯ ಆರಂಭಿಸಿದೆ. ಇಶಾ ಫೌಂಡೇಶನ್‌ನ ಸಿಬ್ಬಂದಿಗಳ ಪರಿಶೀಲನೆ ನಡೆಸಲಾಯಿತು [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ತಮಿಳುನಾಡು <a href="https://indianexpress.com/article/india/sadhguru-isha-foundation-search-madras-high-court-order-9598107/?ref=hometop_hp">ಪೊಲೀಸರು</a> ಮಂಗಳವಾರ ಕೊಯಮತ್ತೂರು ಜಿಲ್ಲೆಯ ತೊಂಡಮುತ್ತೂರಿನಲ್ಲಿರುವ ಸ್ವಯಂಘೋಷಿತ ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ, ಮದ್ರಾಸ್ ಹೈಕೋರ್ಟ್ ಈ ಸಂಸ್ಥೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ಕುರಿತು ವರದಿಯನ್ನು ಕೋರಿದ ಒಂದು ದಿನದ ನಂತರ ಇದು ನಡೆದಿದೆ.</p>



<p>ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ಸುಮಾರು 150 ಪೊಲೀಸ್ ಅಧಿಕಾರಿಗಳು ಮತ್ತು ಮೂವರು ಉಪ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒಳಗೊಂಡ ತಂಡ ಶೋಧಕಾರ್ಯ ಆರಂಭಿಸಿದೆ. ಇಶಾ ಫೌಂಡೇಶನ್‌ನ ಸಿಬ್ಬಂದಿಗಳ ಪರಿಶೀಲನೆ ನಡೆಸಲಾಯಿತು ಮತ್ತು ಅದರ ಭಾಗವಾಗಿ ಕೊಠಡಿಗಳನ್ನು ಶೋಧಿಸಲಾಗಿದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ <em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>



<p>ಸೋಮವಾರ ಎಸ್.ಎಂ.ಸುಬ್ರಮಣ್ಯಂ ಮತ್ತು ವಿ.ಶಿವಜ್ಞಾನಂ ನ್ಯಾಯಪೀಠವು ಎಸ್.ಕಾಮರಾಜ್ ಎಂಬ ನಿವೃತ್ತ ಪ್ರಾಧ್ಯಾಪಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿತು.</p>



<p>ತಮ್ಮ ಇಬ್ಬರು ಪುತ್ರಿಯರಾದ 42 ವರ್ಷದ ಗೀತಾ ಕಾಮರಾಜ್ ಮತ್ತು 39 ವರ್ಷದ ಲತಾ ಕಾಮರಾಜ್ ಅವರನ್ನು ಫೌಂಡೇಶನ್‌ನಲ್ಲಿರುವ ಯೋಗ ಕೇಂದ್ರದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>



<p>ಎಸ್ ಕಾಮರಾಜ್, ಈ ಸಂಸ್ಥೆಯು ವ್ಯಕ್ತಿಗಳ ಬ್ರೈನ್ ವಾಶ್ ಮಾಡುತ್ತಿದೆ, ಅವರನ್ನು ಸನ್ಯಾಸಿಗಳಾಗಿ ಪರಿವರ್ತಿಸುತ್ತಿದೆ ಮತ್ತು ಅವರ ಕುಟುಂಬಗಳೊಂದಿಗೆ ಅವರ ಸಂಪರ್ಕವನ್ನು ನಿರ್ಬಂಧಿಸುತ್ತಿದೆ ಎಂದು ಆರೋಪ ಮಾಡಿದ್ದರು.</p>



<p>ಯುನೈಟೆಡ್ ಕಿಂಗ್‌ಡಮ್‌ನ ವಿಶ್ವವಿದ್ಯಾನಿಲಯದಿಂದ ಮೆಕಾಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ತಮ್ಮ ಹಿರಿಯ ಮಗಳು 2008 ರಲ್ಲಿ ತನ್ನ ಪತಿಗೆ ವಿಚ್ಛೇದನ ನೀಡುವ ಮೊದಲು ಗಣನೀಯ ಸಂಬಳವನ್ನು ಪಡೆಯುತ್ತಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಕಾಮರಾಜ್ ಹೇಳಿದ್ದರು. ವಿಚ್ಛೇದನದ ನಂತರ ಅವರು ಈಶಾ ಫೌಂಡೇಶನ್‌ನಲ್ಲಿ ಯೋಗ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದರು.</p>



<p>ಇದಾದ ಮೇಲೆ ಅಕ್ಕನಂತೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತಂಗಿಯೂ ಈಶಾ ಫೌಂಡೇಶನ್‌ಗೆ ಹೋಗಲು ಆರಂಭಿಸಿದರು, ಕೊನೆಗೆ ಅಲ್ಲಿಯೇ ಶಾಶ್ವತವಾಗಿ ಉಳಿಯಲು ನಿರ್ಧರಿಸಿದರು ಎಂದು ಕಾಮರಾಜ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಫೌಂಡೇಶನ್ ಅವರ ಹೆಣ್ಣುಮಕ್ಕಳಿಗೆ‌ ನೀಡಿದ ಆಹಾರ ಮತ್ತು ಔಷಧಿಗಳನ್ನು ಅವರ ಅರಿವಿನ ಸಾಮರ್ಥ್ಯಗಳನ್ನು ಮಂದಗೊಳಿಸಿತು, ಇದು ಅವರ ಕುಟುಂಬದೊಂದಿಗೆ ಸಂಬಂಧವನ್ನು ಕಡಿತಗೊಳಿಸಲು ಕಾರಣವಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.</p>



<p>ವಿಚಾರಣೆಯ ಸಂದರ್ಭದಲ್ಲಿ, ವಾಸುದೇವ್ ಅವರ ಸ್ವಂತ ಮಗಳನ್ನು ಮದುವೆಯಾಗಿ &#8220;ಚೆನ್ನಾಗಿ ನೆಲೆಸಿದ್ದಾಳೆ&#8221; ಎಂಬುದು ತಿಳಿದ ನಂತರ, ಇತರ <a href="https://peepalmedia.com/why-is-sadhguru-encouraging-women-to-live-like-hermits/">ಯುವತಿಯರ ತಲೆ ಕೆಡಿಸಿ ಸನ್ಯಾಸಿಗಳಂತೆ</a> ಬದುಕಲು ಏಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪೀಠವು ಕೇಳಿತ್ತು.&nbsp;&nbsp;</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="QyGq0OafEP"><a href="https://peepalmedia.com/why-is-sadhguru-encouraging-women-to-live-like-hermits/">ʼನಿಮ್ಮ ಮಗಳಿಗೆ ಮದುವೆ ಮಾಡಿಸಿ, ಬೇರೆಯವರ ಹೆಣ್ಣು ಮಕ್ಕಳನ್ನು ಏಕೆ ಸನ್ಯಾಸಿನಿಯರನ್ನಾಗಿ ಮಾಡುತ್ತಿದ್ದೀರಿ?ʼ ಸದ್ಗುರು ಜಗ್ಗಿ ವಾಸುದೇವ್‌ಗೆ ಹೈಕೋರ್ಟ್‌ ಪ್ರಶ್ನೆ</a></blockquote><iframe class="wp-embedded-content" sandbox="allow-scripts" security="restricted"  title="&#8220;ʼನಿಮ್ಮ ಮಗಳಿಗೆ ಮದುವೆ ಮಾಡಿಸಿ, ಬೇರೆಯವರ ಹೆಣ್ಣು ಮಕ್ಕಳನ್ನು ಏಕೆ ಸನ್ಯಾಸಿನಿಯರನ್ನಾಗಿ ಮಾಡುತ್ತಿದ್ದೀರಿ?ʼ ಸದ್ಗುರು ಜಗ್ಗಿ ವಾಸುದೇವ್‌ಗೆ ಹೈಕೋರ್ಟ್‌ ಪ್ರಶ್ನೆ&#8221; &#8212; Peepal Media" src="https://peepalmedia.com/why-is-sadhguru-encouraging-women-to-live-like-hermits/embed/#?secret=rxy4c4RlgX#?secret=QyGq0OafEP" data-secret="QyGq0OafEP" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p>ಆದರೆ ನ್ಯಾಯಾಲಯದಲ್ಲಿ ಹಾಜರಾಗಿದ್ದ ಅರ್ಜಿದಾರರ ಪುತ್ರಿಯರು, ತಮ್ಮ ಸ್ವ ಇಚ್ಛೆಯಿಂದ ಯೋಗ ಕೇಂದ್ರದಲ್ಲಿ ವಾಸವಿದ್ದು, ಯಾರೂ ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧಿಸಿಲ್ಲ ಎಂದು ಹೇಳಿದ್ದಾರೆ..</p>



<p>ಈಶಾ ಫೌಂಡೇಶನ್‌ನ ವಕೀಲ ಕೆ ರಾಜೇಂದ್ರ ಕುಮಾರ್, ವಯಸ್ಕರು ತಮ್ಮ ಜೀವನದಲ್ಲಿ ತಮ್ಮದೇ ಆದ ಮಾರ್ಗವನ್ನು ಆರಿಸಿಕೊಳ್ಳಲು ಸ್ವತಂತ್ರರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮಹಿಳೆಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಕೆಲಸ ಮಾಡುತ್ತಿರುವುದರಿಂದ ಅಂತಹ ವೈಯಕ್ತಿಕ ನಿರ್ಧಾರಗಳ ಬಗ್ಗೆ ವಿಚಾರಣೆ ಅನಗತ್ಯ ಎಂದು ಅವರು ಹೇಳಿದರು.</p>



<p>ಇದಕ್ಕೆ &#8220;ನೀವು ಒಂದು ನಿರ್ದಿಷ್ಟ ಪಾರ್ಟಿಗಾಗಿ ಇಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ನಿಮಗೆ ಇದು ಅರ್ಥವಾಗುವುದಿಲ್ಲ&#8221; ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರತಿಕ್ರಿಯಿಸಿದರು. ಆದರೆ ಈ ನ್ಯಾಯಾಲಯ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ. ನಮ್ಮ ಮುಂದಿರುವ ದಾವೆದಾರರಿಗೆ ನ್ಯಾಯವನ್ನು ನೀಡುವುದನ್ನು ಮಾತ್ರ ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.</p>



<p>ಹೆಣ್ಣುಮಕ್ಕಳು ಮತ್ತು ಅವರ ಹೆತ್ತವರ ನಡುವಿನ ಸ್ಪಷ್ಟವಾದ ಹಗೆತನವನ್ನು ಗಮನಿಸಿದ ಸುಬ್ರಮಣಿಯಂ: “ನೀವು [ಅರ್ಜಿದಾರರ ಹೆಣ್ಣುಮಕ್ಕಳು] ಆಧ್ಯಾತ್ಮಿಕತೆಯ ಹಾದಿಯಲ್ಲಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ. ನಿಮ್ಮ ತಂದೆ ತಾಯಿಯರನ್ನು ನಿರ್ಲಕ್ಷಿಸುವುದು ಪಾಪ ಎಂದು ನಿಮಗೆ ಅನಿಸುವುದಿಲ್ಲವೇ? &#8216;ಎಲ್ಲರನ್ನು ಪ್ರೀತಿಸಿ ಮತ್ತು ಯಾರನ್ನೂ ದ್ವೇಷಿಸಬೇಡಿ&#8217; ಎಂಬುದು ಭಕ್ತಿಯ ತತ್ವವಾಗಿದೆ ಆದರೆ ನಿಮ್ಮಲ್ಲಿ ನಿಮ್ಮ ಹೆತ್ತವರ ಬಗ್ಗೆ ತುಂಬಾ ದ್ವೇಷವನ್ನು ನಾವು ನೋಡಬಹುದು. ನೀವು ಅವರನ್ನು ಗೌರವಯುತವಾಗಿ ಸಂಬೋಧಿಸುತ್ತಿಲ್ಲ,” ಎಂದು ಕೇಳಿದ್ದಾರೆ.</p>



<p>ಅರ್ಜಿದಾರರ ಪರ ವಕೀಲ ಎಂ ಪುರುಷೋತ್ತಮನ್ ಅವರು, ಫೌಂಡೇಶನ್‌ಗೆ ಸಂಬಂಧಿಸಿದಂತೆ ಈ ಹಿಂದೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು, ಇದು ದುರ್ನಡತೆ ಮತ್ತು ಕಾನೂನು ಉಲ್ಲಂಘನೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.</p>



<p>ಈಶಾ ಫೌಂಡೇಶನ್‌ ವಿರುದ್ಧ ಬಾಕಿ ಉಳಿದಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಅಕ್ಟೋಬರ್ 4 ರೊಳಗೆ ಸಲ್ಲಿಸುವಂತೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇ ರಾಜ್ ತಿಲಕ್ ಅವರಿಗೆ ನ್ಯಾಯಾಲಯ ಸೂಚಿಸಿದೆ.</p>



<p>ಇದಕ್ಕೆ ಪ್ರತಿಕ್ರಿಯಿಸುತ್ತಾ ಈಶಾ ಫೌಂಡೇಶನ್‌ &#8220;ಜನರನ್ನು ಮದುವೆಯಾಗಲು ಅಥವಾ ಸನ್ಯಾಸಿತ್ವವನ್ನು ತೆಗೆದುಕೊಳ್ಳಲು ನಾವು ಹೇಳುವುದಿಲ್ಲ; ಇವು ವೈಯಕ್ತಿಕ ಆಯ್ಕೆಗಳಾಗಿವೆ. ಯೋಗ ಕೇಂದ್ರವು ಅನೇಕ ವ್ಯಕ್ತಿಗಳಿಗೆ ಆತಿಥ್ಯ ನೀಡುತ್ತದೆ, ಕೆಲವರು ಮಾತ್ರ ಸನ್ಯಾಸಿತ್ವವನ್ನು ಆರಿಸಿಕೊಂಡಿದ್ದಾರೆ ಎಂದು ತಿಳಿಸಿದೆ.</p>



<p>&#8220;ಈ ಹಿಂದೆ ಇಶಾ ಫೌಂಡೇಶನ್ ನಿರ್ಮಿಸುತ್ತಿರುವ ಸ್ಮಶಾನದ ಸುತ್ತಲಿನ ಸಂಗತಿಗಳ ಬಗ್ಗೆ ವಿಚಾರಿಸಲು ಸತ್ಯಶೋಧನಾ ಸಮಿತಿ ಎಂಬ ಸುಳ್ಳು ನೆಪದಲ್ಲಿ ಈ ಅರ್ಜಿದಾರರು ಇತರರೊಂದಿಗೆ ನಮ್ಮ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದರು ಮತ್ತು ನಂತರ ಈಶಾ ಯೋಗ ಕೇಂದ್ರದ ಜನರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದರು,” ಎಂದು ಈಶಾ ಫೌಂಡೇಶನ್ ಹೇಳಿಕೆಯಲ್ಲಿ ಹೇಳಲಾಗಿದೆ.</p>



<p>&#8220;ಇದರ ವಿರುದ್ಧ ಗೌರವಾನ್ವಿತ ಮದ್ರಾಸ್ ಹೈಕೋರ್ಟ್ ಪೊಲೀಸರಿಂದ ಅಂತಿಮ ವರದಿಯನ್ನು ಸಲ್ಲಿಸಲು ತಡೆಯಾಜ್ಞೆ ನೀಡಿದೆ. ಇದನ್ನು ಹೊರತುಪಡಿಸಿ, ಪ್ರತಿಷ್ಠಾನದ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ,&#8221; ಎಂದು ಅದು ಹೇಳಿದೆ.</p>



<p>ಪೋಲೀಸರ ದಾಳಿಯ ಬಗ್ಗೆ ಫೌಂಡೇಶನ್ ಇದು ಕೇವಲ ತನಿಖೆ ಎಂದು ಹೇಳಿದೆ. &#8220;ಅವರು [ಪೊಲೀಸರು] ನಿವಾಸಿಗಳು ಮತ್ತು ಸ್ವಯಂಸೇವಕರನ್ನು ವಿಚಾರಿಸುತ್ತಿದ್ದಾರೆ, ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುತ್ತಾರೆ, ಅವರು ಹೇಗೆ ಬರುತ್ತಾರೆ ಮತ್ತು ಉಳಿಯುತ್ತಾರೆ ಇತ್ಯಾದಿಗಳ ಬಗ್ಗೆ ಅರ್ಥಮಾಡಿಕೊಳ್ಳುತ್ತಿದ್ದಾರೆ,&#8221; ಎಂದು <em>ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>
]]></content:encoded>
					
		
		
			</item>
		<item>
		<title>ಫಿಫಾ ವಿಶ್ವಕಪ್‌ : 12,000 ಜಾಲತಾಣಗಳ ದೃಶ್ಯಾವಳಿ ಪ್ರಸಾರಕ್ಕೆ ನಿರ್ಬಂಧ</title>
		<link>https://peepalmedia.com/fifa-world-cup-12000-websites-banned-from-broadcasting-footage/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 20 Nov 2022 07:42:09 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[fifa world cup]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[madras high court]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15992</guid>

					<description><![CDATA[ಮದ್ರಾಸ್‌ : ಮೊದಲ ಬಾರಿಗೆ ಅದ್ದೂರಿಯಾಗಿ ಆರಂಭವಾಗುತ್ತಿರುವ &#160;ಫಿಫಾ ವಿಶ್ವಕಪ್‌ ದೃಶ್ಯಾವಳಿ ಪ್ರಸಾರ ಮಾಡದಂತೆ ಮದ್ರಾಸ್‌ ಹೈಕೋರ್ಟ್, 12000 ಜಾಲತಾಣಗಳಿಗೆ ನಿರ್ಭಂದ ಮಾಡಿದೆ. ಅರಬ್ ದೇಶದಲ್ಲಿ ಮೊದಲ  ಫಿಫಾ ಫುಟ್‌ಬಾಲ್‌ ವಿಶ್ವಕಪ್‌ 2022 (FIFA Football world Cup)ರ ಪಂದ್ಯಾವಳಿವನ್ನು ನವೆಂಬರ್‌ 20, ಭಾನುವಾರದಂದು ಆಯೋಜಿಸಲಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಶ್ವಕಪ್‌ ಪಂದ್ಯಾವಳಿಯಾಗಲಿದೆ. ಅಂತರಾಷ್ಟ್ರೀಯ ಕ್ರೀಡಾ ಮಾಧ್ಯಮಗಳು ವರದಿ ಮಾಡಿರುವ &#160;ಪ್ರಕಾರ, ಫಿಫಾ ವಿಶ್ವಕಪ್ ಇಂದಿನಿಂದ ಗಲ್ಫ್ ರಾಷ್ಟ್ರದಲ್ಲಿ ನಡೆಯಲಿದ್ದು, ಇದರಿಂದ ಸುಮಾರು 5.31 ಟ್ರೆಲಿಯನ್‌ [&#8230;]]]></description>
										<content:encoded><![CDATA[
<p><strong>ಮದ್ರಾಸ್‌</strong> : ಮೊದಲ ಬಾರಿಗೆ ಅದ್ದೂರಿಯಾಗಿ ಆರಂಭವಾಗುತ್ತಿರುವ &nbsp;ಫಿಫಾ ವಿಶ್ವಕಪ್‌ ದೃಶ್ಯಾವಳಿ ಪ್ರಸಾರ ಮಾಡದಂತೆ ಮದ್ರಾಸ್‌ ಹೈಕೋರ್ಟ್, 12000 ಜಾಲತಾಣಗಳಿಗೆ ನಿರ್ಭಂದ ಮಾಡಿದೆ.</p>



<p>ಅರಬ್ ದೇಶದಲ್ಲಿ ಮೊದಲ  ಫಿಫಾ ಫುಟ್‌ಬಾಲ್‌ ವಿಶ್ವಕಪ್‌ 2022 (FIFA Football world Cup)ರ ಪಂದ್ಯಾವಳಿವನ್ನು ನವೆಂಬರ್‌ 20, ಭಾನುವಾರದಂದು ಆಯೋಜಿಸಲಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಶ್ವಕಪ್‌ ಪಂದ್ಯಾವಳಿಯಾಗಲಿದೆ.</p>



<p>ಅಂತರಾಷ್ಟ್ರೀಯ ಕ್ರೀಡಾ ಮಾಧ್ಯಮಗಳು ವರದಿ ಮಾಡಿರುವ &nbsp;ಪ್ರಕಾರ, ಫಿಫಾ ವಿಶ್ವಕಪ್ ಇಂದಿನಿಂದ ಗಲ್ಫ್ ರಾಷ್ಟ್ರದಲ್ಲಿ ನಡೆಯಲಿದ್ದು, ಇದರಿಂದ ಸುಮಾರು 5.31 ಟ್ರೆಲಿಯನ್‌ ಹಣ ಗಳಿಸುತ್ತದೆ ಎಂಬ ನಿರೀಕ್ಷೆ ಮಾಡಬಹುದಾಗಿದೆ.</p>



<p>ಈ ಬೆನ್ನಲ್ಲೇ ಆದೇಶ ಹೊರಡಿಸಿರುವ ಮದ್ರಾಸ್‌ ಹೈಕೋರ್ಟ್‌, ಫಿಫಾ ವಿಶ್ವಕಪ್‌ ದೃಶ್ಯಾವಳಿ ಪ್ರಸಾರ ಮಾಡದಂತೆ ಮದ್ರಾಸ್‌ ಹೈಕೋರ್ಟ್, 12000 ಜಾಲತಾಣಗಳಿಗೆ ನಿರ್ಭಂದಿಸಿ ತಡೆ ಹಿಡಿದಿದೆ.</p>
]]></content:encoded>
					
		
		
			</item>
		<item>
		<title>ನಾಳೆಯ ಆರ್‌ಎಸ್‌ಎಸ್‌ ಮೆರವಣಿಗೆ ಕಾರ್ಯಕ್ರಮ ಮುಂದೂಡಿಕೆ</title>
		<link>https://peepalmedia.com/naleya-rss-meravanige-karyakrama-mundoodike/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Nov 2022 09:21:49 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[madras high court]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RSS]]></category>
		<category><![CDATA[rss march]]></category>
		<category><![CDATA[state politics]]></category>
		<category><![CDATA[tamil nadu]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14323</guid>

					<description><![CDATA[ತಮಿಳುನಾಡು: ನವೆಂಬರ್‌ 6ರಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಮೆರವಣಿಗೆ ನಡೆಸಲು ಹೈಕೋರ್ಟ್‌ ಸಮ್ಮತಿ ನೀಡಿತ್ತು. ಆದರೆ ಮೆರೆವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಮುಂದೂಡಲಾಗಿದೆ ಎಂದು ಸಂಘದ ಮೂಲಗಳು ಇಂದು ದೃಢಪಡಿಸಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹೈಕೋರ್ಟ್ ಅನುಮತಿ ಮೇರೆಗೆ ನವೆಂಬರ್ 6ರ ಭಾನುವಾರದಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ನಿಗದಿತ ಮಾರ್ಗ ಮೆರವಣಿಗೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ ಇಂದು ಆ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲು ಆರ್‌ಎಸ್‌ಎಸ್ ನಿರ್ಧರಿಸಿದೆ. ಅದಲ್ಲದೆ ನ್ಯಾಯಮೂರ್ತಿ ಜಿ.ಕೆ.ಇಳಂತಿರಾಯನ್ ಅವರಿದ್ದ [&#8230;]]]></description>
										<content:encoded><![CDATA[
<p><strong>ತಮಿಳುನಾಡು</strong>: ನವೆಂಬರ್‌ 6ರಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಮೆರವಣಿಗೆ ನಡೆಸಲು ಹೈಕೋರ್ಟ್‌ ಸಮ್ಮತಿ ನೀಡಿತ್ತು. ಆದರೆ ಮೆರೆವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಮುಂದೂಡಲಾಗಿದೆ ಎಂದು ಸಂಘದ ಮೂಲಗಳು ಇಂದು ದೃಢಪಡಿಸಿವೆ.</p>



<p>ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹೈಕೋರ್ಟ್ ಅನುಮತಿ ಮೇರೆಗೆ ನವೆಂಬರ್ 6ರ ಭಾನುವಾರದಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ನಿಗದಿತ ಮಾರ್ಗ ಮೆರವಣಿಗೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ ಇಂದು ಆ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲು ಆರ್‌ಎಸ್‌ಎಸ್ ನಿರ್ಧರಿಸಿದೆ.</p>



<p>ಅದಲ್ಲದೆ ನ್ಯಾಯಮೂರ್ತಿ ಜಿ.ಕೆ.ಇಳಂತಿರಾಯನ್ ಅವರಿದ್ದ ಏಕಸದಸ್ಯ ಪೀಠವು ಕೆಲವು ಷರತ್ತುಗಳೊಂದಿಗೆ 44 ಸ್ಥಳಗಳಲ್ಲಿ ಮಾತ್ರ ಕಾರ್ಯಕ್ರಮಗಳಿಗೆ ಶುಕ್ರವಾರ ಅನುಮತಿ ನೀಡಿತ್ತು. ಈ ಆದೇಶದ ವಿರುದ್ಧ 50 ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಬೇಕು ಮತ್ತು ಅವುಗಳಲ್ಲಿ ಒಂದು ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಮೈದಾನ ಅಥವಾ ಕ್ರೀಡಾಂಗಣದಂತಹ ಆವರಣಗಳಲ್ಲಿ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಆರ್‌ಎಸ್‌ಎಸ್‌ ಮದ್ರಾಸ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.</p>



<p>50 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಆರ್‌ಎಸ್‌ಎಸ್‌ ನ್ಯಾಯಾಲಯದ ಅನುಮೋದನೆಯನ್ನು ಕೋರಿತ್ತು. ಈ ಮನವಿಯ ಕುರಿತು ಆದೇಶ ನೀಡಿರುವ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಾಧೀಶರು, ʼತಿರುಪ್ಪೂರು ಜಿಲ್ಲೆಯ ಪಲ್ಲಡಂ, ಕನ್ಯಾಕುಮಾರಿಯ ಅರುಮನೈ ಮತ್ತು ನಾಗರ್ ಕೋಯಿಲ್, ಕೊಯಮತ್ತೂರು, ಮೆಟ್ಟುಪಾಳಯಂ ಮತ್ತು ಪೊಲ್ಲಾಚಿ ಈ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳುವುದರ ಜೊತೆಗೆ ಕಾರ್ಯಕ್ರಮದ ಸಮಯದಲ್ಲಿ ಯಾರೂ ಹಾಡುಗಳನ್ನು ಹಾಡಬಾರದು ಅಥವಾ ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬಾರದುʼ ಎಂದು ಹೇಳಿದರು.</p>



<p>ಅಲ್ಲದೇ ಮೆರವಣಿಗೆಯಲ್ಲಿ ಭಾಗಿಯಾಗುವವರು ಯಾವುದೇ ಕಾರಣಕ್ಕೂ ಯಾರಿಗೂ ತೊಂದರೆಯುಂಟುಮಾಡಬಾರದು. ಮೆರವಣಿಗೆಗೆ ಕೋಲು, ಲಾಠಿ ಅಥವಾ ಯಾವುದೇ ರೀತಿಯ ಆಯುಧಗಳನ್ನು ತರಬಾರದು ಎಂದು ಹೇಳಿದ್ದು, ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟ ಸಂಘಟನೆಗಳ ಪರವಾಗಿ ಏನನ್ನೂ ಮಾತನಾಡಬಾರದು. ದೇಶದ ಸಮಗ್ರತೆಗೆ ಭಂಗ ತರುವ ಯಾವುದೇ ಕೆಲಸಗಳನ್ನು ಮಾಡಬಾರದುʼ ಎಂದು ನ್ಯಾಯಾಧೀಶರು ತಿಳಿಸಿದ್ದರು.</p>



<p>ʼಮೆರವಣಿಗೆಯಲ್ಲಿ ಮಾರ್ಗಮಧ್ಯೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟಾದರೆ ಆ ವೆಚ್ಚವನ್ನು ಮರುಪಾವತಿಸುವ ಮತ್ತು ಪರಿಹಾರ ವೆಚ್ಚಗಳನ್ನು ಭರಿಸುವ ಮುಚ್ಚಳಿಕೆ ಬರೆದು ಕೊಡತಕ್ಕದ್ದು. ಈ ಕಾರ್ಯಕ್ರಮದಿಂದ ಹಾನಿಗೊಳಗಾಗಿ ಅರ್ಜಿ ಸಲ್ಲಿಸಬಹುದಾದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಅದನ್ನು ಭರಿಸುವ ಭರವಸೆ ನೀಡಲಾಗಿದೆ ಮತ್ತು ವಿಧಿಸಲಾದ ಷರತ್ತುಗಳಲ್ಲಿ ಯಾವುದಾದರೂ ಒಂದನ್ನು ಉಲ್ಲಂಘಿಸಿದರೆ, ಕಾನೂನಿನ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯವಿದೆʼ ಎಂದು ನ್ಯಾಯಮೂರ್ತಿ ಜಿ.ಕೆ.ಇಳಂತಿರಾಯನ್ ಅವರು ಹೇಳಿದ್ದರು.</p>
]]></content:encoded>
					
		
		
			</item>
	</channel>
</rss>
