Thursday, June 13, 2024

ಸತ್ಯ | ನ್ಯಾಯ |ಧರ್ಮ

ಜೈನ ಧರ್ಮದ ಬೋಧನೆಗಳು

ಜೈನಮತವು ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸುವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು
- ಲೇಖಕರು: ಗೌತಮ ಆವರ್ತಿ

ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ ವಾದುದೆಂದೂ ವೃಷಭದೇವನೇ ಆದಿಯಾಗಿ ಇಪ್ಪತ್ನಾಲ್ಕು ತೀರ್ಥಂಕರರು ಈ ಮತವನ್ನು ಪ್ರಚಾರ ಮಾಡಿದರೆಂದೂ ತಿಳಿದುಬರುತ್ತದೆ. ಆದರೆ ಮೊದಲಿನ ಇಪ್ಪತ್ತೆರಡು ತೀರ್ಥಂಕರರು ಪೌರಾಣಿಕ ವ್ಯಕ್ತಿಗಳೆಂದು ವೇದ್ಯವಾಗುತ್ತದೆ. ಇಪ್ಪತ್ತೂರನೇ ತೀರ್ಥಂಕರನಾದ ಪಾರ್ಶ್ವ ನಾಥ ಕ್ರಿ.ಪೂ. ಎಂಟನೇ ಶತಮಾನದಲ್ಲಿ ಜೀವಿಸಿದ್ದ. ಕ್ಷತ್ರಿಯ ವರ್ಗಕ್ಕೆ ಸೇರಿದ ಪಾರ್ಶ್ವ ನಾಥ ತನ್ನ ೩೦ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಕಠಿಣ ತಪಸ್ಸನ್ನು ಆಚರಿಸಿದ. ತಪಶ್ಚರ್ಯೆಯಿಂದ ತನಗೆ ಸಿದ್ಧಿಸಿದ ಜ್ಞಾನವನ್ನು ಇತರರಿಗೆ ಪ್ರಸಾರ ಮಾಡಿದ. ತನ್ನ ತತ್ತ್ವಗಳನ್ನು ಪ್ರಸಾರ ಮಾಡಲು ಭಿಕ್ಷುಗಳನ್ನು ನೇಮಿಸಿದ. ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸು ವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು. ವರ್ಧಮಾನ ಮಹಾ ವೀರನ ಮಾತಾಪಿತೃಗಳು ಪಾರ್ಶ್ವನಾಥನ ಪಂಥಕ್ಕೆ ಸೇರಿದವರಾಗಿದ್ದರು.

ವರ್ಧಮಾನ ಮಹಾವೀರ : ವೈಶಾಲಿಯ ಉಪನಗರವಾದ ಕುಂಡಲವನದಲ್ಲಿ ವಾಸಿಸುತ್ತಿದ್ದ ಜ್ಞಾತ್ರಿಕ ಕ್ಷತ್ರಿಯ ಪಂಗಡದ ಸಿದ್ದಾರ್ಥ ಮತ್ತು ತ್ರಿಶಾಲಿ ಎಂಬುವವರ ಮಗನಾದ ವರ್ಧಮಾನ ಕ್ರಿ.ಪೂ. ಸುಮಾರು ೫೪೦ ರಲ್ಲಿ ಹುಟ್ಟಿದ. ವರ್ಧಮಾನನಿಗೆ ಬಾಲ್ಯದಲ್ಲಿ ಸೂಕ್ತ ಶಿಕ್ಷಣ ಕೊಡಲಾಗಿತ್ತು. ಅವನು ಪ್ರಾಪ್ತವಯಸ್ಕನಾದಾಗ ‘ಯಶೋದ’ ಎಂಬ ಕನೈಯನ್ನು ವರಿಸಿದ. ಅನೇಕ ವರ್ಷಗಳ ಕಾಲ ಅವರ ದಾಂಪತ್ಯ ಜೀವನ ಮುಂದುವರಿಯಿತು. ಅವರಿಗೆ ಒಬ್ಬಳು ಪುತ್ರಿಯೂ ಇದ್ದಳು. ಅವಳನ್ನು ಜಾಮಾಲಿ ಎಂಬುವವ ನಿಗೆ ಕೊಟ್ಟು, ವಿವಾಹಮಾಡಿದ್ದರು. ಜಾಮಾಲಿ ಅನಂತರ ವರ್ಧಮಾನನಿಂದ ದೀಕ್ಷೆ ಪಡೆ ದವರಲ್ಲಿ ಒಬ್ಬ. ವರ್ಧಮಾನನ ೩೦ ನೇ ವಯಸ್ಸಿನಲ್ಲಿ ಅವನ ಮಾತಾಪಿತೃಗಳು ಮರಣ ಹೊಂದಿದರು. ಮಾತಾಪಿತೃಗಳ ಅಗಲುವಿಕೆಯ ದುಃಖದಿಂದ ಬಹುವಾಗಿ ನೊಂದ ವರ್ಧ – ಮಾನ ಸಂಸಾರ ತ್ಯಾಗಮಾಡಿ ತಪಶ್ಚರ್ಯೆ ಕೈಗೊಂಡ. ಸುಮಾರು ೧೩ ವರ್ಷಗಳ ಕಾಲ ಅವನು ಕಠಿಣವಾದ ತಪಸ್ಸನ್ನಾಚರಿಸಿದ. ಈ ಅವಧಿಯ ಕೊನೆಯಲ್ಲಿ ಬಿಹಾರದ ಪಾರ್ಶ್ವ ತ ನಾಥ ಗುಡ್ಡದ ಬಳಿಯಲ್ಲಿ ವರ್ಧಮಾನ ಪರಮಜ್ಞಾನ ಪಡೆದ. ಅಂದಿನಿಂದ ಅವನಿಗೆ ಮಹಾವೀರ ಎಂಬ ಹೆಸರಾಯಿತು. ಅನಂತರ ಮಹಾವೀರ ಮತಪ್ರಚಾರ ಕಾರ್ಯದಲ್ಲಿ ತೊಡಗಿದ. ಅವನು ತನ್ನ ೭೨ನೇ ವಯಸ್ಸಿನಲ್ಲಿ ಪಾವಾ ಗ್ರಾಮದ ಬಳಿ ಕ್ರಿ.ಪೂ. ಸುಮಾರು ೨ ೪೬೮ ರಲ್ಲಿ ಕೈವಲ್ಯ ಹೊಂದಿದ. ಮಹಾವೀರ ಪ್ರಚಾರಮಾಡಿದ ಧರ್ಮಕ್ಕೆ ಜೈನಮತವೆಂದು – ಹೆಸರಾಗಿದೆ.

ಜೈನಮತದ ಮುಖ್ಯ ತತ್ತ್ವಗಳು: ಮಹಾವೀರ ಪಾರ್ಶ್ವನಾಥ ಬೋಧಿಸಿದ ತತ್ತ್ವಗಳ ಜೊತೆಗೆ ಕೆಲವು ಅಂಶಗಳನ್ನು ಸೇರಿಸಿದ. ಜೈನಮತದ ಮುಖ್ಯ ತತ್ತ್ವಗಳೇ ನೆಂದರೆ: (೧) ಅಸತ್ಯ ನುಡಿಯಬಾರದು, (೨) ಕಳ್ಳತನ ಮಾಡಬಾರದು, (೩) ಜೀವರಾಶಿಗಳನ್ನು ಹಿಂಸಿಸಬಾರದು, (೪) ಆಸ್ತಿಯನ್ನು ಹೊಂದಬಾರದು, (೫) ತಪಶ್ಚರೆಯನ್ನು ಅನುಸರಿಸಬೇಕು. ಮಹಾವೀರ ವೇದಗಳನ್ನು ಪ್ರಮಾಣವೆಂದಾಗಲಿ, ಅಪೌರುಷೇಯವೆಂದಾಗಲಿ ಒಪ್ಪಲಿಲ್ಲ. ಜಗತ್ತು ಭಗವಂತನ ನಿಯಾಮಕ ಮತ್ತು ಲೀಲೆ ಎಂಬುದನ್ನು ಜೈನಮತ ಪುರಸ್ಕರಿಸಲಿಲ್ಲ. ಜೈನಮತ ಅಹಿಂಸೆಗೆ ವಿಶೇಷ ಪ್ರಾಧಾನ್ಯ ಕೊಟ್ಟಿದೆ.

ಜೈನ ತತ್ತ್ವದ ಪ್ರಕಾರ ಆತ್ಮ ಪರಿಶುದ್ಧವಾದುದು, ಪರಿಶುದ್ಧವಾದ ಆತ್ಮವನ್ನು ಪುದ್ದಲ ಹೊಕ್ಕು ಅಶುದ್ಧಗೊಳಿಸುವುದರಿಂದ ಸಂಸಾರ ಬಂಧನವುಂಟಾಗುತ್ತದೆ. ಕಠಿಣ ತಪಸ್ಸನ್ನಾಚರಿಸುವುದರಿಂದ ಪುನಃ ಆತ್ಮ ಪರಿಶುದ್ಧವಾಗಿ ಮೋಕ್ಷ ಪಡೆಯುವುದು. ಸಮ್ಯಕ್ ಆಚಾರ, ಸಮ್ಯಕ್ ದರ್ಶನ, ಸಮ್ಯಕ್ ಚಿಂತನೆ ಇವು ಜೈನಮತದ ತ್ರಿರತ್ನಗಳು. ಜೈನಯತಿಗಳು ಕಠಿಣವಾದ ನಿಯಮಗಳನ್ನು ಆಚರಿಸಬೇಕು. ಗೃಹಸ್ಥರು ಜೈನಮತದ

ಮುಖ್ಯ ನಿಯಮಗಳ ಜೊತೆಗೆ ಪಂಚಪರಮೇಷ್ಠಿ ಯಜ್ಞವನ್ನಾಚರಿಸಬೇಕು. ಜೈನಮತದ ಪ್ರಚಾರ : ಮಹಾವೀರನಿಗೆ ಹನ್ನೊಂದು ಮಂದಿ ಆಪ್ತ ಶಿಷ್ಯ ರಿದ್ದರು. ಅವರಲ್ಲಿ ಸುಧಮ್ಮನ್ ಎಂಬುವನೊಬ್ಬನ ಹೊರತಾಗಿ ಉಳಿದವರು ಮಹಾವೀರನು ಜೀವಿಸಿರುವಾಗಲೆ ಮರಣ ಹೊಂದಿದರು. ಸುಧಮ್ಮನ್ ಮಹಾವೀರನ ಮರಣಾನಂತರ ಜೈನ ಯತಿಗಳ ಸಂಘದ ಮುಖ್ಯನಾದ. ಅವನ ಅನಂತರ ಒಬ್ಬೊಬ್ಬರಾಗಿ ಅನೇಕ ಆಚಾರೈರು ಶ್ರವಣ ಸಂಘದ ಮುಖ್ಯರಾಗಿದ್ದರು. ಅವರಲ್ಲಿ ಆರನೆಯವನಾದ ಭದ್ರಬಾಹು ಚಂದ್ರಗುಪ್ತ ಮೌಯ್ಯನ ಸಮಕಾಲೀನನಾಗಿದ್ದ. ಚಂದ್ರಗುಪ್ತಮೌಯ್ಯನ ಆಳ್ವಿಕೆಯ ಕೊನೆಗಾಲದಲ್ಲಿ ಮಗಧ ಸಾಮ್ರಾಜ್ಯದಲ್ಲಿ ಹನ್ನೆರಡು ವರ್ಷಗಳ ಅವಧಿಯ ಕ್ಷಾಮ ತಲೆದೋರಿತೆಂದೂ, ಆ ಸಮಯದಲ್ಲಿ ಮೌಲ್ಯ ಚಕ್ರವರ್ತಿ ಸಿಂಹಾಸನ ತ್ಯಾಗಮಾಡಿ ಭದ್ರಬಾಹು ಮತ್ತು ಇತರ ಅನೇಕ ಜೈನಭಿಕ್ಷುಗಳೊಡನೆ ದಕ್ಷಿಣಕ್ಕೆ ಬಂದು ಮೈಸೂರು ದೇಶದ ಶ್ರವಣಬೆಳಗೊಳದಲ್ಲಿ ತಂಗಿದನೆಂದೂ ತಿಳಿದುಬರುತ್ತದೆ. ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿರುವ ಚಂದ್ರಗುಪ್ತ ಬಸದಿ ಈ ಘಟನೆಯ ನೆನಪಾಗಿ ಇಂದಿಗೂ ಉಳಿದುಬಂದಿದೆ. ಭದ್ರಬಾಹುವಿನೊಡನೆ ಶ್ರವಣಬೆಳಗೊಳಕ್ಕೆ ಬಂದ ಮೌಲ್ಯ ಚಕ್ರವರ್ತಿ ಚಂದ್ರಗುಪ್ತನ ಮೊಮ್ಮಗ ಸಂಪ್ರಾತಿ ಚಂದ್ರಗುಪ್ತನಾಗಿರಬಹುದೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ಷಾಮದ ಅವಧಿಯಲ್ಲಿ ಮಗಧರಾಜ್ಯದಲ್ಲೇ ನೆಲಸಿದ್ದ ಜೈನಭಿಕ್ಷುಗಳು ಒಂದು ಸಮ್ಮೇಳನ ನಡೆಸಿ ಆ ಸಮ್ಮೇಳನದ ನಿರ್ಣಯದ ಪ್ರಕಾರ ಜೈನದರ್ಶನದ ಹನ್ನೆರಡು ಅಂಗಗಳನ್ನೊಳಗೊಂಡ ಪವಿತ್ರಗ್ರಂಥಗಳನ್ನು ರಚಿಸಿದರು. ಅಲ್ಲದೆ ಬಿಳಿಬಟ್ಟೆಗಳನ್ನು ಧರಿಸುವ ಹಾಗೂ ಇತರ ಕೆಲವು ಪದ್ಧತಿಗಳನ್ನು ಅವರು ಆಚರಣೆಗೆ ತಂದುಕೊಂಡಿದ್ದರು. ಹಲವು ವರ್ಷಗಳ ಅನಂತರ ಭದ್ರ ಬಾಹು ಮತ್ತು ಅವನ ಅನುಯಾಯಿಗಳು ಮಗಧರಾಜ್ಯಕ್ಕೆ ಹಿಂದಿರುಗಿದರು. ತಮ್ಮ ಗೈರುಹಾಜರಿಯಲ್ಲಿ ಆಚರಣೆಗೆ ಬರದಿದ್ದ ನಿಯಮಗಳನ್ನು ಅವರು ಒಪ್ಪಲಿಲ್ಲ. ಆದ್ದರಿಂದ

ಜೈನಮತ ‘ದಿಗಂಬರ’ ಮತ್ತು ‘ಶ್ವೇತಾಂಬರ’ ಎಂಬ ಎರಡು ಶಾಖೆಗಳಾಗಿ ಮಾಲ್ಪಟ್ಟಿತು. ಜೈನಮತ ಕ್ರಿ.ಪೂ. ೪ನೇ ಶತಮಾನದ ವೇಳೆಗೆ ದಕ್ಷಿಣ ಭಾರತದಲ್ಲಿ ಪ್ರಚಾರ ವಾಯಿತು. ತಮಿಳು ಸಂಘಂ’ಕಾಲದಲ್ಲಿ ಮಧುರೆಯ ಪಾಂಡ್ಯರು ಜೈನಮತಕ್ಕೆ ಪ್ರೋತ್ಸಾಹ ನೀಡಿದರು. ಅನೇಕ ಜೈನಕವಿಗಳು ತಮಿಳು ಗ್ರಂಥಗಳನ್ನು ರಚಿಸಿರುವರು. ಕ್ರಿ.ಶ. ಎರಡನೇ ಶತಮಾನದಲ್ಲಿ ಕಳಿಂಗದ ಖಾರವೇಲ ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಕನ್ನಡ ನಾಡಿನ ಅರಸು ಮನೆತನಗಳಾದ ಗಂಗರು, ರಾಷ್ಟ್ರಕೂಟರು, ಹೊಯ್ಸಳರು ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ಈ ಮನೆತನಗಳ ಅನೇಕ ರಾಜರು ಜೈನಮತೀಯರಾಗಿ ದ್ದರು. ಸಿಂಹನಂದಿ ಕುಂದಕುಂದಾಚಾರ, ಪೂಜ್ಯಪಾದ ಮೊದಲಾದ ಪ್ರಸಿದ್ಧ ಜೈನಯತಿ ಗಳು ಸಂಸ್ಕೃತ ಭಾಷೆಯಲ್ಲಿ ದಾರ್ಶನಿಕ ಗ್ರಂಥಗಳನ್ನು ರಚಿಸಿದರು.

ತಲಕಾಡಿನ ಗಂಗರ ಕಾಲದಲ್ಲಿ ಕನ್ನಡನಾಡಿನಲ್ಲಿ ಜೈನಮತ ಸರ್ವತೋಮುಖ ಅಭಿ ವೃದ್ಧಿ ಹೊಂದಿತ್ತು. ಕ್ರಿ.ಶ. ೧೦ನೇ ಶತಮಾನದಲ್ಲಿ ಮಾರಸಿಂಹ ಗಂಗ ಮತ್ತು ಅವನ ಮಗ ರಾಚಮಲ್ಲನ ಅಮಾತ್ಯನಾಗಿದ್ದ ಚಾವುಂಡರಾಯ ಶ್ರವಣಬೆಳಗೊಳದ ಜಗತ್ರ ಸಿದ್ಧವಾದ ಏಕಶಿಲೆಯ ೫೮ ಅಡಿ ಎತ್ತರದ ಗೊಮ್ಮಟ ಪ್ರತಿಮೆಯನ್ನು ಕಡೆಸಿ ಸ್ಥಾಪಿಸಿದ. ಕನ್ನಡ ನಾಡಿನ ಬೇರೆಬೇರೆ ಸಂತತಿಗಳ ರಾಜರ ಆಸ್ಥಾನದಲ್ಲಿದ್ದ ಪಂಪ, ರನ್ನ, ಪೊನ್ನ, ಜನ್ನ ಮತ್ತು ಇತರ ಪ್ರಸಿದ್ಧ ಜೈನಕವಿಗಳು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ.

ಮಧ್ಯಕಾಲೀನ ಯುಗದ ರಜಪೂತರು ಜೈನ ದಾರ್ಶನಿಕರಿಗೂ ವಿದ್ವಾಂಸರಿಗೂ ಪ್ರೋತ್ಸಾಹ ನೀಡಿದರು. ಆ ಕಾಲದಲ್ಲಿ ಮೌಂಟ್ ಅಬು ಬೆಟ್ಟಗಳ ಮೇಲೆ ಅಮೃತಶಿಲೆಯ ಜೈನ ದೇವಾಲಯ ನಿರ್ಮಾಣವಾಯಿತು. ಮೊಗಲ್ ಸಾಮ್ರಾಟ ಅಕ್ಟರ್‌ನ ಆಸ್ಥಾನದಲ್ಲಿ ಪ್ರಸಿದ್ಧ ಜೈನ ದಾರ್ಶನಿಕರಾದ ಹೀರವಿಜಯಸೂರಿ ಮೊದಲಾದವರಿದ್ದರು. ಹೀರವಿಜಯಸೂರಿಯು ಅಕ್ಟರ್ ಸಾಮ್ರಾಟನ ವಿಶೇಷ ಮನ್ನಣೆಗೆ ಪಾತ್ರನಾಗಿದ್ದನು. ಜೈನಮತ ಬೌದ್ಧ ಮತದಷ್ಟು ವಿಶೇಷವಾಗಿ ಭಾರತದಲ್ಲಿ ಹರಡಲೂ ಇಲ್ಲ, ಸಂಪೂರ್ಣವಾಗಿ ಚ್ಯುತಿ ಹೊಂದಲೂ ಇಲ್ಲ.

ಜೈನಮತ ಅಹಿಂಸಾ ತತ್ತ್ವವನ್ನು ವಿಶೇಷವಾಗಿ ಪ್ರಚಾರಪಡಿಸಿತು. ಪ್ರಾಂತೀಯ ಭಾಷೆಗಳ ಬೆಳವಣಿಗೆಗೆ ಬಹುಮಟ್ಟಿಗೆ ಸಹಕಾರಿಯಾಯಿತು. ಭಾರತೀಯ ತತ್ತ್ವಶಾಸ್ತ್ರಕ್ಕೆ ಜೈನಮತ ತನ್ನ ಕೊಡುಗೆ ಸಲ್ಲಿಸಿದೆ. ಜೈನ ಮತೀಯರು ಪ್ರಾರಂಭದಲ್ಲಿ ಅನೇಕ ಗುಹಾಲಯಗಳನ್ನು ನಿರ್ಮಿಸಿದರು. ಶ್ರವಣಬೆಳಗೊಳ, ಮೌಂಟ್ ಅಬು, ಹಳೇಬೀಡು ಮೊದಲಾದ ಸ್ಥಳಗಳಲ್ಲಿರುವ ಜೈನ ದೇವಾಲಯಗಳು ಇಂದಿಗೂ ಪ್ರಸಿದ್ಧವಾಗಿವೆ. ಮೈಸೂರು ರಾಜ್ಯದ ಧರ್ಮಸ್ಥಳದಲ್ಲಿ ಬೃಹತ್ ಗೊಮ್ಮಟ ಶಿಲಾ ಪ್ರತಿಮೆ ಜೈನ ಧರ್ಮದ ಸಾಕ್ಷಿಯಾಗಿ ನಿಂತಿದೆ.

ಲೇಖಕರು: ಗೌತಮ ಆವರ್ತಿ

ಆಕರ: ಡಾ. ಬಿ. ಷೇಕ್ ಅಲಿ ಜಿ. ಆರ್. ರಂಗಸ್ವಾಮಯ್ಯ ಡಾ. ಎ. ವಿ. ವೆಂಕಟರತ್ನಂ. ಡಾ. ಬಿ. ಮುದ್ದಾಚಾರಿ, VARF – Visual Anthropology Research Foundation Varf Viewfinder ಕನ್ನಡದ ಐತಿಹಾಸಿಕ ದಾಖಲೆಗಳು

Related Articles

ಇತ್ತೀಚಿನ ಸುದ್ದಿಗಳು