Tuesday, April 15, 2025

ಸತ್ಯ | ನ್ಯಾಯ |ಧರ್ಮ

ಅಸ್ಪೃಷ್ಯತೆ ವಿರುದ್ಧ ಸಂಘಟಿತರಾಗಿ ಮುಂಚೂಣಿಯಲ್ಲಿ ನಿಂತವರು ಡಾ.ಅಂಬೇಡ್ಕರ್ ರವರು – ಜೈ ಭೀಮ್ ಬ್ರಿಗೇಡ್ ರಾಜೇಶ್

ಹಾಸನ : ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನದ ಅಂಗವಾಗಿ ಮಹಾವೀರ ವೃತ್ತದಲ್ಲಿ ಅನ್ನ ಸಂತರ್ಪಣೆ, ಮಕ್ಕಳಿಗೆ ನೋಟ್ ಬುಕ್ ವಿತರಣೆ, ಸಮಾಜ ಸಾಧಕರಿಗೆ ಸನ್ಮಾನ ಮತ್ತು ಸಾರ್ವಜನಿಕರಿಗೆ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಜೈ ಭೀಮ್ ಬ್ರಿಗೇಡ್ ಸಂಘಟನೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಭಾಷಣವನ್ನು ಕಾಂಗ್ರೆಸ್ ಮುಖಂಡರಾದ ಡಿ.ಪಿ. ಚಂದ್ರಶೇಖರ್ ಅವರು ಸಂವಿಧಾನದ ಆಶಯಗಳ ಬಗ್ಗೆ ಅಂಬೇಡ್ಕರ್ ಕಾನೂನು ಬಗ್ಗೆ ಅವರ ವಿದ್ಯಾಭ್ಯಾಸದ ಬಗ್ಗೆ ಹೊರ ಹೋರಾಟದ ಬಗ್ಗೆ ಗುಣಗಾನ ಮಾಡಿದರು. ಎಚ್.ಎಮ್. ಯಶವಂತ ಮಾತನಾಡಿ, ವಿಶ್ವಕ್ಕೆ ಸಮಾನತ ಸಾರಿದ ನಾಯಕ ಎಲ್ಲ ಸಮುದಾಯದ ಬಡವರಿಗೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟವರು. ಅಸ್ಪೃಷ್ಯತೆಯ ವಿರುದ್ಧ ಸಂಘಟಿತರಾಗಿ ಮುಂಚೂಣಿಯಲ್ಲಿ ನಿಂತವರು. ಅಂಬೇಡ್ಕರ್ ಅಲ್ಲದೆ ಮೇಲ್ವರ್ಗದವರ ದಬ್ಬಾಳಿಕೆ ವಿರುದ್ಧ ಗಟ್ಟಿಯಾಗಿ ನಿಂತು ಕಾನೂನಿನ ಅಡಿಯಲ್ಲಿ ವಿಶ್ವಕ್ಕೆ ಸಮನತ ತೋರಿದವರು ಯಾರಾದ್ರೂ ಇದ್ರೆ ಅಂಬೇಡ್ಕರ್ ಮಾತ್ರ ಎಂದರು.

ಜೈ ಭೀಮ್ ಬ್ರಿಗೇಡ್ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಶ್ ಮಾತನಾಡಿ, ಸಂವಿಧಾನ ಪೀಠಿಕೆ ಓದಿ ಅಂಬೇಡ್ಕರ್ ಬಾಲ್ಯದ ದಿನಗಳಲ್ಲಿ ಕಷ್ಟದ ದಿನಗಳನ್ನು ಮೇಲುಕು ಹಾಕುತ್ತಾ, ಚೌಡರ್ ಕೆರೆಯಲ್ಲಿ ನೀರು ಕುಡಿಯಲು ಬಿಡದೆ ಅವರನ್ನು ತಳಿಸಿ ಹಲ್ಲೆ ಮಾಡಿದರು. ಕಳರಾಮ ದೇವಸ್ಥಾನ ಗರ್ಭಗುಡಿ ಪ್ರವೇಶಕ್ಕೆ ಅಡ್ಡಿಪಡಿಸಿದರು. ಆಗ ಬಾಬಾ ಸಾಹೇಬರು ಏಕಾಂಗಿ ಹೋರಾಟ ಮಾಡಿ ಗರ್ಭಗುಡಿ ಪ್ರವೇಶ ಮಾಡಿ ದೇಶಕ್ಕೆ ಸಮಾನತೆಯನ್ನು ಸಾರಿದರು. ಸುಮಾರು ಎರಡು ವರ್ಷ ಹನ್ನೊಂದು ತಿಂಗಳು ಕಾಲ ಸಂವಿಧಾನ ರಚಿಸಿ ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿದರು. ಸರ್ವಜನಾಂಗದವರಿಗೆ ಎಲ್ಲಾ ಜಾತಿಯ ಬಡವರಿಗೆ ಮಹಿಳೆಯರಿಗೆ ನ್ಯಾಯ ಒದಗಿಸಿಕೊಟ್ಟವರು. ಅಂಬೇಡ್ಕರ್ ಇಂದು ಅವರು ಕೊಟ್ಟ ಸಂವಿಧಾನದ ಮೀಸಲಾತಡಿಯಲ್ಲಿ ನಾವೆಲ್ಲ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಅಂಬೇಡ್ಕರ್ ಕೊಟ್ಟ ಕೊಡುಗೆ ಅಪಾರ ಎಂದು ಹಳೆ ನೆನಪನ್ನು ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ಡಿ.ಪಿ. ಚಂದ್ರಶೇಖರ್, ಎಚ್.ಎಮ್. ಯಶ್ವಂತ್, ಜನಪ್ರಿಯ ಆಸ್ಪತ್ರೆ ವೈದ್ಯರಾದ ಡಾ. ಅಬ್ದೂಲ್ ಬಶೀರ್, ದಲಿತ ಮುಖಂಡ ನಾಗರಾಜ್ ಹೆತ್ತೂರು, ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಅಧ್ಯಕ್ಷರಾದ ಶಂಕರ್ ವೆಂಕಟೇಶ್ ಪೂಜಾರಿಕ, ಪ್ರಸನ್ನ ಪಾಲ್ಗೊಂಡಿದ್ದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು ಹಾಗೂ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page