Home ಅಪರಾಧ ಬಿಜೆಪಿ ಜೊತೆ ಸಂಬಂಧಿತ ಮೂವರಿಂದ ಮಹಿಳೆ ಮೇಲೆ ಹಲ್ಲೆ: ಜಾಮೀನು ಮಂಜೂರು

ಬಿಜೆಪಿ ಜೊತೆ ಸಂಬಂಧಿತ ಮೂವರಿಂದ ಮಹಿಳೆ ಮೇಲೆ ಹಲ್ಲೆ: ಜಾಮೀನು ಮಂಜೂರು

0
ಪ್ರಕರಣದ ಆರೋಪಿ ಅಶ್ವಜಿತ್ ಗಾಯಕ್ವಾಡ್ | Ashwajit Gaikwad/ Facebook

ಮಹಾರಾಷ್ಟ್ರ: ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರಿಗೆ ಥಾಣೆ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ ಮತ್ತು. ಈ ಗುಂಪು ಮಹಿಳೆಯನ್ನು ಕಾರಿನಿಂದ ಹಲ್ಲೆ ಮಾಡಲು ಯತ್ನಿಸಿತ್ತು. 

ಅಶ್ವಜಿತ್ ಗಾಯಕವಾಡ್, ರೊಮಿಲ್ ಪಾಟೀಲ್ ಮತ್ತು ಸಾಗರ್ ಶೆಡ್ಗೆ ಜಾಮೀನು ಸಿಕ್ಕಿದ ಆರೋಪಿಗಳು.  ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಅಶ್ವಜಿತ್ ಗಾಯಕವಾಡ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲಕುಮಾರ ಗಾಯಕವಾಡ ಅವರ ಪುತ್ರ.

ಪ್ರಿಯಾ ಸಿಂಗ್ ಎಂಬ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಘೋಡ್‌ಬಂದರ್ ರಸ್ತೆಯ ಹೋಟೆಲ್‌ಗೆ ಗಾಯಕ್ವಾಡ್ ಅವರನ್ನು ಭೇಟಿಯಾಗಲು ಹೋಗಿದ್ದಾಗಿ ಹೇಳಿರುವ ಮಹಿಳೆಯ ಜೊತೆಗೆ ಅಶ್ವಜಿತ್‌ ಜಗಳವಾಡಿರುವ ಬಗ್ಗೆ  ಪಿಟಿಐ ವರದಿ ಮಾಡಿದೆ.

ಗಾಯಕ್‌ವಾಡ್ ಅವರ ಕಾರಿನಿಂದ ಆಕೆ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಆಕೆಯನ್ನು ಕಾರಿನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ.

ಅಶ್ವಜಿತ್ ಗಾಯಕ್‌ವಾಡ್ ಜತೆ ಸಂಬಂಧ ಹೊಂದಿದ್ದ ಈಕಗೆ ಆತನ ವೈವಾಹಿಕ ಬದುಕಿನ ಬಗ್ಗೆ ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಆದರೂ, ಗಾಯಕ್‌ವಾಡ್ ಆಕೆ ಕೇವಲ ಸ್ನೇಹಿತೆ ಮಾತ್ರ, ಅವಳು ತನ್ನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಳು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾನುವಾರ ಪೊಲೀಸರು ಗಾಯಕ್‌ವಾಡ್, ಪಾಟೀಲ್ ಮತ್ತು ಶೆಡ್ಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 279 (ವೇಗದ ಚಾಲನೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಭಾನುವಾರ ಬಂಧಿಸಿದ್ದರು.

ಸೋಮವಾರ, ಆರೋಪಿಗಳ ಪರ ವಕೀಲ ಬಾಬಾ ಶೇಖ್ ಅವರು ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದ್ದರು, ಅವರ ಮೇಲಿನ ಎಲ್ಲಾ ಆರೋಪಗಳು ಜಾಮೀನು ನೀಡಬಹುದಾದವು ಮತ್ತು ವಿಚಾರಣೆಗಾಗಿ ಪೊಲೀಸರಿಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪೊಲೀಸರು ಏಕೆ ಕೊಲೆ ಯತ್ನದ ದೂರನ್ನು ದಾಖಲಿಸಿಲ್ಲ ಎಂದು ಮಹಿಳೆಯ ಪರ ವಕೀಲರು ಕೇಳಿದ್ದಾರೆ.

ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು. ತಲಾ 15,000 ರೂ.ಗಳ ಬಾಂಡ್ ಅನ್ನು ನೀಡುವಂತೆ ಸೂಚಿಸಿದೆ.

You cannot copy content of this page

Exit mobile version