Friday, June 20, 2025

ಸತ್ಯ | ನ್ಯಾಯ |ಧರ್ಮ

ನಟ ದರ್ಶನ್ ಮೇಲೆ ಮತ್ತೆ ಮೂರು ಪ್ರಕರಣ ದಾಖಲು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ನಿಂದ ಹೊರಬಂದು ರೌಡಿಶೀಟರ್ ಗಳ ಜೊತೆಗೆ ಟೀ, ಸಿಗರೇಟು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮೇಲೆ ಮತ್ತೆ ಮೂರು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ.

ಈ ಮೂರು ಪ್ರಕರಣಗಳ ಪೈಕಿ 2 ಕೇಸ್ ನಲ್ಲಿ ನಟ ದರ್ಶನ್ ಎ 1 ಆರೋಪಿಯಾಗಿದ್ದರೆ, ನಾಗರಾಜ್ ಎ2, ವಿಲ್ಸನ್ ಗಾರ್ಡನ್ ನಾಗ ಎ3, ಕುಳ್ಳ ಸೀನ ಎ4 ಆರೋಪಿಗಳಾಗಿದ್ದಾರೆ.

ಎರಡನೇ ಪ್ರಕರಣದಲ್ಲಿ ನಟ ದರ್ಶನ್ ಎ1, ಧರ್ಮ ಎ2, ಸತ್ಯ ಎ3 ಆರೋಪಿಗಳಾಗಿದ್ದಾರೆ. ಮೂರನೇ ಪ್ರಕರಣದಲ್ಲಿ ಕೆ.ಎಸ್. ಸುದರ್ಶನ್ ಎ1, ಮುಜೀಬ್ ಎ2, ಪರಮೇಶ್ ನಾಯಕ ಲಮಾಣಿ ಎ3, ಕೆ.ಬಿ. ರಾಯಮನೆ ಎ4 ಆರೋಪಿಗಳಾಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ರೀತಿಯ ಬೆಳವಣಿಗೆ ಕಂಡುಬಂದ ಮಾಹಿತಿಯ ನಂತರ ಆರೋಪಿ ನಟ ದರ್ಶನ್ ಅವರನ್ನು ಬೆಳಗಾವಿ ಹಿಂದಲಗಾ ಜೈಲಿಗೆ ಶಿಫ್ಟ್ ಮಾಡುವ ನಿಟ್ಟಿನಲ್ಲಿ ಜೈಲಿನ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಆದರೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕೇಂದ್ರ ಕಾರಾಗೃಹಗಳ ಉಪ ನಿರ್ದೇಶಕ ಸೋಮಶೇಖರ ಅವರು ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page