Tuesday, April 15, 2025

ಸತ್ಯ | ನ್ಯಾಯ |ಧರ್ಮ

ಉಡುಪಿ ಹಿಟ್ ಅಂಡ್ ರನ್ ; ಕಾಂಗ್ರೆಸ್ ಮುಖಂಡನ ಮಗ ಅರೆಸ್ಟ್

ಉಡುಪಿಯಲ್ಲಿ 39 ವರ್ಷದ ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಬೈಕ್‌ಗೆ ತನ್ನ ಎಸ್‌ಯುವಿಯನ್ನು ಡಿಕ್ಕಿ ಹೊಡೆದ ಓಡಿ ಹೋದ ಕಾರಣ ಕಾಂಗ್ರೆಸ್ ಮುಖಂಡನ ಮಗ ಪ್ರಜ್ವಲ್ ಶೆಟ್ಟಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ವರದಿ ಪ್ರಕಾರ, ಪ್ರಜ್ವಲ್ ಶೆಟ್ಟಿ ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಅವರ ಮಗ. ಬೆಳಪು ನ. ಮೊಹಮ್ಮದ್ ಹುಸೇನ್ ಅವರ ಬೈಕಿಗೆ ಡಿಕ್ಕಿ ಹೊಡೆದ ನಂತರ ಅವರು ಓಡಿಹೋದರು ಎನ್ನಲಾಗಿದೆ.

“ಹಿಟ್ ಅಂಡ್ ರನ್ ಕೇಸ್’ ಆರೋಪದ ಮೇಲೆ ಪೊಲೀಸರು ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಿದ್ದಾರೆ. ವರದಿಯ ಪ್ರಕಾರ ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ಎಸ್ ಯುವಿ ಪ್ರಜ್ವಲ್ ಶೆಟ್ಟಿ ಅವರದ್ದು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page