Home ಬ್ರೇಕಿಂಗ್ ಸುದ್ದಿ ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಸಂಪರ್ಕ ದಿನನಿತ್ಯ ನರಕ 

ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಸಂಪರ್ಕ ದಿನನಿತ್ಯ ನರಕ 

ಬೇಲೂರು : ಹಾಸನ ಜಿಲ್ಲೆ ಬೇಲೂರು ತಾಲೂಕು ಯುನೆಸ್ಕೋ ಪಟ್ಟಿಗೆ ಸೇರಿದರೂ ಸಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರೋದಂತೂ ಕಟು ಸತ್ಯ. ಬೇಲೂರು ಪುರಸಭೆ ಇಪ್ಪತ್ತ ಮೂರು ವಾರ್ಡು ಹೊಂದಿದ್ದು. ವೇಗವಾಗಿ ಅಭಿವೃದ್ಧಿ ಗೊಳ್ಳುತ್ತಿರುವ ವಾರ್ಡ್ಗಳಲ್ಲಿ 13,12,16 ನೇ ವಾರ್ಡ್ಗಳು  ಒಳಗೊಂಡಂತೆ ಒಳ ಚರಂಡಿ ನಿರ್ಮಾಣವಾಗಿ ಸುಮಾರು 30 ವರ್ಷ ಕಳೆದರೂ. ಈ ಗಂಭೀರ ಸಮಸ್ಯೆ ಇಲ್ಲಿವರೆಗೂ ಪರಿಹಾರ ಕಂಡು ಕೊಂಡಿಲ್ಲ. ಹಾಗಾಗಿ ಪುರಸಭಾ ಅಧ್ಯಕ್ಷ  ಅಶೋಕ್ ಬೇಲೂರು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನೀಲಿ ನಕ್ಷೆ ತಯಾರಿಸಿ ನೂತನವಾಗಿ ಒಳಚರಂಡಿ ಕಾಮಗಾರಿ ನಡೆಸುವ ಅವಶ್ಯಕತೆ ಇದೆ  . ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಆಗಿರುವುದ ರಿಂದ. ನೂತನವಾಗಿ ಭಸ್ಮೀಕರಣ ಹೊಂಡ ದಂತೆ ತೆಗೆದಿರುವ. ಗುಂಡಿಯನ್ನು ಶೀಘ್ರವಾಗಿ ಮುಚ್ಚಿ ಮುಂದಾಗು ವಂತಹ ವಾಹನ ಅಪಘಾತ ಇರಬಹುದು ಮತ್ತು ಶಾಲೆಗೆ ತೆರಳುವ ಮಕ್ಕಳು ಜಾನುವಾರು ಗಳು ವಯೋ ವೃದ್ಧರು ನಡೆದಾಡಲು ಅನುವು  ಮಾಡಿಕೊಡಬೇಕು‌ . ಒಂದಲ್ಲ ಒಂದು ಒಳಚರಂಡಿ ಭರ್ತಿಯಾಗಿ  ಮಲ ಮೂತ್ರ ಒಳಗೊಂಡ ಅಶುದ್ಧವಾದ ನೀರು ಘನ ತ್ಯಾಜ್ಯ. ವಸ್ತು ಗಳು ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದೆ ಹಾಗೂ ದೇಶ ವಿದೇಶ ದಿಂದ ಬರುವ ಪ್ರವಾಸಿಗರು ಧರ್ಮಸ್ಥಳ ಹೊರನಾಡು ಶೃಂಗೇರಿ. ಕುಕ್ಕೆ ಸುಬ್ರಮಣ್ಯ  ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬೇಲೂರಿನಿಂದ ಹಾದುಹೋಗುವ ದಾರಿಯಲ್ಲಿ ಈ ಗಬ್ಬು ವಾಸನೆ ಮತ್ತು ಕೊಳಚೆ ನೀರನ್ನು ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಸ್ಥಳೀಯ ನಿವಾಸಿಗಳು ಈ ಗಂಭೀರಸಮಸ್ಯೆಯಿಂದ   ಕಾಯಿಲೆ ಬಿದ್ದು.ಆಸ್ಪತ್ರೆಗೆ ದಾಖಲಾಗಿರುವ ನಿದರ್ಶನಗಳು ಇವೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಮುಂದಾಗುವಂತಹ ಬಾರಿ ಅನಾಹುತ ತಪ್ಪಿಸಿ ಸಾರ್ವಜನಿಕರು ಆರೋಗ್ಯಕರ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿ ಕೋರಲಾಗಿದೆ. ಈ ಸಂದರ್ಭದಲ್ಲಿ ಮಜೀದ್ ಸಾಬ್. ಜೈಬೂನ್. ರಫೀಕ್. ಮುಬಾರಕ್. ಜಮೀಲಾ. ಸಾಮಾಜಿಕ ಹೋರಾಟಗಾರ ನೂರ್ ಅಹಮ್ಮದ್ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.

You cannot copy content of this page

Exit mobile version