Home ಬ್ರೇಕಿಂಗ್ ಸುದ್ದಿ ಹಾಸನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಸುತ್ತಾ ಅವೈಜ್ಞಾನಿಕ ವಾಹನ ಪಾರ್ಕಿಂಗ್ ಪ್ರತಿದಿನ ಕಿರಿಕ್

ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಸುತ್ತಾ ಅವೈಜ್ಞಾನಿಕ ವಾಹನ ಪಾರ್ಕಿಂಗ್ ಪ್ರತಿದಿನ ಕಿರಿಕ್

ಬೇಲೂರು : ಬೇಲೂರು ನಗರದ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಸುತ್ತಾ ಅವೈಜ್ಞಾನಿಕ ವಾಹನ ಪಾರ್ಕಿಂಗ್ ನಿಂದ ಸ್ಥಳೀಯ ನಿವಾಸಿಗಳಿಗೆ ಮತ್ತು ವಾಹನ ಸವಾರರಿಗೆ ನೆಮ್ಮದಿ ಇಲ್ಲದಂತಾಗಿದೆ ಐತಿಹಾಸಿಕ ಪ್ರವಾಸಿ ತಾಣವಾದ ಬೇಲೂರಿಗೆ ಪ್ರತಿನಿತ್ಯ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮನಬಂದಂತೆ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿದ್ದು ಪ್ರತಿನಿತ್ಯ ಸಾರ್ವಜನಿಕರಿಗೆ ಮತ್ತು ದೇವಾಲಯದ ಸುತ್ತಮುತ್ತಲ ನಿವಾಸಿಗಳಿಗೆ ದೊಡ್ಡ ತಲೆ ನೋವಾಗಿ ಪರಿಗಣಿಸಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದಕ್ಕೂ ತಲೆಕೆಡಿಸಿ ಕೊಳ್ಳದೆ ಕೇವಲ ವಾಹನ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ತೊಡಗಿದ್ದಾರೆ ಇದರಿಂದ ಸಾರ್ವಜನಿಕರು ಪ್ರತಿನಿತ್ಯ ನರಕ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ದೇವಾಲಯದ ಮುಂಭಾಗ ಯಾವುದೇ ತರಹದ ವಾಹನಗಳನ್ನು ನಿಲುಗಡೆ ನಿಷೇಧಿಸಿದ್ದರು ದೇವಾಲಯದಿಂದಲೇ ನಾಮಫಲಕಗಳನ್ನು ಅಳವಡಿಸಿದ್ದರು ನಾಮಫಲಕದ ಸುತ್ತಮುತ್ತಲು ಮನಬಂದಂತೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು ದೇವಾಲಯದ ಸಿಬ್ಬಂದಿಗಳೇ ಮನಬಂದಂತೆ ಪಾರ್ಕಿಂಗ್ ಮಾಡಿಸುತ್ತಿರು ವುದು ವಿಪರ್ಯಾಸ ಇನ್ನು ದೇವಾಲಯದ ಹಿಂಭಾಗ ಪ್ರವಾಸಿಗರ ವಾಹನ ಪಾರ್ಕಿಂಗ್ ಗಾಗಿ ವಿಶಾಲವಾದ ಮೈದಾನ ಮೀಸಲಿಟ್ಟಿದ್ದು ಮೈದಾನದಲ್ಲಿ ಶುಂಠಿ ಒಣಗಿಸಲು ಶಾಮಿಯಾನ ಒಣಗಿಸಲು ಮತ್ತು ಮಲಮೂತ್ರ ವಿಸರ್ಜನೆ ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ವಾಹನ ಪಾರ್ಕಿಂಗ್ ಗಾಗಿ ದೇವಾಲಯದಿಂದ ಪಾರ್ಕಿಂಗ್ ನಾಮಪಾಲಕಗಳು ಅಳವಡಿಸಿದ್ದು ಕೇವಲ ನಾಮಫಲಕಗಳು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಆಗಿವೆ ದೇವಾಲಯದಿಂದ ಕೆಲವೇ ಅಂತರದಲ್ಲಿರುವ ವಾಹನ ಪಾರ್ಕಿಂಗ್ನಲ್ಲಿ ವಾಹನ ಪಾರ್ಕಿಂಗ್ ಮಾಡಿಸದೆ ಇರುವುದು ದೇವಾಲಯದ ಆಡಳಿತಾದಿಕಾರಿಯ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.


ಈ ಸಂಬಂಧ ಮಾತನಾಡಿದ ಸ್ಥಳೀಯ ನಿವಾಸಿಗಳು ದೇವಾಲಯದ ಆಡಳಿತ ಮಂಡಳಿ ನಿರ್ಲಕ್ಷದಿಂದ ದೇವಾಲಯದ ಮುಂಭಾಗ ಮತ್ತು ಜೆ.ಪಿ ನಗರ ರಸ್ತೆ ಮತ್ತು ಕಂಡ ಕಂಡ ಜಾಗಗಳಲ್ಲಿ ಮನೆಗಳ ಮುಂದೆ ವ್ಯಾಪಾರ ವಹಿವಾಟು ಮಾಡುವ ಅಂಗಡಿಗಳ ಮುಂದೆ ಮನಬಂದಂತೆ ಪ್ರವಾಸಿಗರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು ಇದರಿಂದ ಭಾರಿ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಪ್ರತಿನಿತ್ಯ ಸಾವಿರಾರು ಶಾಲಾ ಮಕ್ಕಳು ವೃದ್ಧರು ಅಪಘಾತಗಳಿಗೆ ತುತ್ತಾಗುತ್ತಿದ್ದು ಸಂಬಂಧಪಟ್ಟವರು ಇನ್ನಾದರೂ ಪ್ರವಾಸಿಗರ ವಾಹನ ಪಾರ್ಕಿಂಗ್ ಗಾಗಿ ನಿಗದಿಪಡಿಸಿರುವ ಸ್ಥಳಕ್ಕೆ ಪ್ರವಾಸಿಗರ ವಾಹನಗಳನ್ನು ಪಾರ್ಕಿಂಗ್ ಮಾಡುವಂತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆಗೆ ಮುಕ್ತಿ ಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿದರು.

You cannot copy content of this page

Exit mobile version