Monday, June 17, 2024

ಸತ್ಯ | ನ್ಯಾಯ |ಧರ್ಮ

ಪೊಲೀಸರೊಡನೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ಉಪೇಂದ್ರ – ಫೋನ್‌ ಸ್ಚಿಚಾಫ್‌, ಮನೆಯಲ್ಲಿಲ್ಲ ಎನ್ನುತ್ತಿರುವ ಸೆಕ್ಯುರಿಟಿ

ಬೆಂಗಳೂರು: ದಲಿತ ಸಮುದಾಯದ ಕುರಿತು ನಿಂದನಾತ್ಮಕ ಗಾದೆ ಬಳಸಿದ ಆರೋಪದಡಿ ನಟ, ನಿರ್ದೇಶಕ ಉಪೇಂದ್ರ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ಜಾರಿಗೊಳಿಸಿದ್ದಾರೆ. ಆದರೆ ಇತ್ತ ಉಪೇಂದ್ರ ಪೊಲೀಸರ ಕೈಗೆ ಸಿಗದೆ ʼಬುದ್ಧಿವಂತʼತನ ತೋರಿಸುತ್ತಿರುವ ಕುರಿತು ವರದಿಯಾಗಿದೆ.

ಮೊನ್ನೆ ರಾತ್ರಿ ತನ್ನ ಪ್ರಜಾಕೀಯ ಕುರಿತು ವಿಡಿಯೋ ಒಂದರಲ್ಲಿ ಮಾತನಾಡುತ್ತಾ ಉಪೇಂದ್ರ ಒಂದು ಸಾಮುದಾಯಿಕವಾಗಿ ನಿಂದನಾತ್ಮಕವಾಗಿರುವ ಗಾದೆ ಮಾತೊಂದನ್ನು ಬಳಸಿದ್ದರು. ನಂತರ ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಲು ಪ್ರಯತ್ನಸಿದ್ದರು.

ಆದರೆ ಸಾಮಾಜಿಕ ಹೋರಾಟಗಾರರು ಇದನ್ನು ಹಾಗೇ ಬಿಟ್ಟರೆ ಮತ್ತೆ ಮತ್ತೆ ಇಂತಹ ಸಮುದಾಯಗಳನ್ನು ಅವಮಾನಿಸುವ ಗಾದೆಗಳ ಬಳಕೆ ಹೆಚ್ಚಾಗುತ್ತದೆಯೆನ್ನುವ ಕಾರಣಕ್ಕೆ ಹೋರಾಟವನ್ನು ಕೈಗೆತ್ತಿಕೊಂಡು ಉಪೇಂದ್ರ ವಿರುದ್ಧ ಕೇಸ್‌ ದಾಖಲಿಸಿದ್ದರು.

ಆದರೆ ಹೋರಾಟಗಾರರು ಕೇಸು ದಾಖಲಿಸುವ ಮೊದಲೇ ಜಾತಿಯಿಂದ ಬ್ರಾಹ್ಮಣನಾಗಿರುವ ಸಮಾಜ ಕಲ್ಯಾಣ ಉದ್ಯೋಗಿಯೊಬ್ಬರು ಹೋಗಿ ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಕುರಿತು FIR ಕೂಡಾ ದಾಖಲಾಗಿತ್ತು.

ಆದರೆ ಈ ದೂರು ಸಲ್ಲಿಸಿದ್ದು ಪ್ರಕರಣವನ್ನು ಹಳ್ಳ ಹಿಡಿಸುವ ಸಲುವಾಗಿ ಎನ್ನುವುದು ಹೋರಾಟಗಾರರ ವಾದವಾಗಿದೆ. ಇಲ್ಲಿ ದೂರು ಸಲ್ಲಿಸಿರುವುದು ದಲಿತ ವ್ಯಕ್ತಿಯಲ್ಲದ ಕಾರಣ ದೂರು ನ್ಯಾಯಾಲಯದಲ್ಲಿ ನಿಲ್ಲುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ.

ಪೊಲೀಸರು ನಿಮ್ಮನ್ನು ಸಾಕ್ಷಿಯಾಗಿಸುವುದಾಗಿ ದಲಿತ ಸಂಘಟನೆಗಳ ನಾಯಕರನ್ನು ಮನವೊಲಿಸಲು ನೋಡಿದರಾದರೂ, ಹೋರಾಟಗಾರರು ಪಟ್ಟು ಬಿಡದೆ FIR ದಾಖಲಿಸಿದ್ದಾರೆ ಎನ್ನಲಾಗಿದೆ.

ಇತ್ತ ಈಗ ಪ್ರಕರಣ ಕುರಿತು ವಿವರಣೆ ನೀಡಬೇಕಿರುವ ಉಪೇಂದ್ರ ತಲೆ ತಪ್ಪಿಸಿಕೊಂಡಿರುವುದಾಗಿ ವರದಿಗಳು ಹೇಳುತ್ತಿವೆ.

ಉಪೇಂದ್ರ ಅವರು ತನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಅವರ ಮನೆ ಬಾಗಿಲಿಗೆ ಹೋದ ಪೊಲೀಸರನ್ನು ಸೆಕ್ಯುರಿಟಿಗಳು ಅವರು ಮನೆಯಲ್ಲಿ ಇಲ್ಲವೆಂದು ತಿಳಿಸಿ ಕಳಿದ್ದಾರೆಂದು ಹೇಳಲಾಗಿದೆ.

ನಿನ್ನೆ ಈ ಕುರಿತು ಟ್ವೀಟ್‌ (X) ಮಾಡಿದ್ದ ಉಪೇಂದ್ರ ಅಲ್ಲಿಯೂ “ನಾನು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಈಗ ನನ್ನ ವಿರುದ್ಧ ದೂರು ಕೊಡುತ್ತಿರುವವರು ಹುಟ್ಟಿಯೇ ಇರಲಿಲ್ಲ” ಎನ್ನುವ ಉದ್ಧಟತನದ ಮಾತುಗಳನ್ನೇ ಆಡಿದ್ದರು. ಆದರೆ ಇಂದು ತನ್ನ ಟ್ವಿಟರ್‌ (X) ಖಾತೆಯನ್ನು ಲಾಕ್‌ ಮಾಡಿಟ್ಟುಕೊಂಡಿದ್ದು, ಅವರ ಟ್ವಟರ್‌ ಐಡಿ ಓಪನ್‌ ಮಾಡಿದರೆ “These Tweets are protected” ಎಂದು ತೋರಿಸುತ್ತಿದ್ದು ಸದ್ಯ ಅವರ ಟ್ವಿಟರ್‌ ಖಾತೆಯನ್ನು ಅವರ ಫಾಲೋವರ್‌ಗಳು ಮಾತ್ರವೇ ನೋಡಬಹುದಾಗಿದೆ.

ಇನ್ನು ಇಂತಹ ಕೆಟ್ಟ ಹೇಳಿಕೆಗಳನ್ನು ನೀಡಿ ಕ್ಷಮೆ ಕೇಳುವುದು ಸುಲಭ. ಆದರೆ ಇಂತಹ ಹೇಳಿಕೆಗಳಿಂದ ನೋವು ಅನುಭವಿಸುವ ಸಮುದಾಯಗಳಿಗೆ ಅದರಿಂದ ಹೊರಬರುವುದು ಅಷ್ಟೇ ಸುಲಭವೇ ಎಂದು ಉಪೇಂದ್ರ ಮತ್ತು ಅಂತಹ ಮನಸ್ಥಿತಿ ಹೊಂದಿರುವವರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಿದೆ.

ಇದನ್ನೂ ಓದಿ:

ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು

Related Articles

ಇತ್ತೀಚಿನ ಸುದ್ದಿಗಳು