Thursday, July 10, 2025

ಸತ್ಯ | ನ್ಯಾಯ |ಧರ್ಮ

ಉತ್ತರ ಪ್ರದೇಶ:  ಮುಚ್ಚಿದ ಕಂಟೈನರ್‌ನಲ್ಲಿ 29 ಹಸುಗಳ ಸಾವು, ಪ್ರಕರಣ ದಾಖಲು

ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಸಿಲುಕಿದ್ದ ಮುಚ್ಚಿದ ಕಂಟೈನರ್ ನಲ್ಲಿ 29 ಹಸುಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮಥುರಾ ಸರ್ಕಲ್ ಆಫೀಸರ್ (ಸಿಒ) ಹರ್ಷಿತಾ ಸಿಂಗ್, ʼನಮಗೆ ಮಥುರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಮುಚ್ಚಿದ ಕಂಟೇನರ್ ನಿಂತಿದೆ ಎಂಬ ಮಾಹಿತಿ ದೊರಕಿತು. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಂಟೇನರ್ ನಲ್ಲಿ 29 ಹಸುಗಳು ಸತ್ತಿದ್ದು, ಒಂದು ಹಸು ಜೀವಂತವಾಗಿತ್ತು ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕಂಟೈನರ್‌ನಲ್ಲಿ ಚಾಲಕ ಕಾಣೆಯಾಗಿದ್ದಾನೆ ಎಂದು ತಿಳಿಸರುವ ಅವರು, ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹರ್ಷಿತಾ ಸಿಂಗ್ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page