Friday, June 14, 2024

ಸತ್ಯ | ನ್ಯಾಯ |ಧರ್ಮ

ವಂಚನೆಗೊಳಗಾದ ಅಭ್ಯರ್ಥಿಗಳಿಗೆ ಯಾವ ದಾರಿ ತೋರಿಸುವಿರಿ?: ಕಾಂಗ್ರೇಸ್‌ ಪ್ರಶ್ನೆ

ನೇಮಕಾತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಅಭ್ಯರ್ಥಿಗಳ ಪರವಾಗಿ ಧ್ವನಿ ಎತ್ತಿರುವ ಕರ್ನಾಟಕ ಕಾಂಗ್ರೇಸ್‌ ಟ್ವೀಟ್‌ ಮಾಡುವ ಮೂಕಲ ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

ಈ ಕುರಿತು ಸರ್ಕಾರದ ಕ್ರಮವನ್ನು ಟೀಕಿಸಿ ಗೃಹಸಚಿವ @JnanendraAraga ಅರಗ ಅವರನ್ನು , ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬಂತೆ ಸರ್ಕಾರದ ಅಕ್ರಮಕ್ಕೆ, ಅಭ್ಯರ್ಥಿಗಳಿಗೆ ಬರೆ ಎಂಬಂತಾಗಿದೆ PSI ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳದ್ದು ಎಂದು ಪ್ರಶ್ನೆ ಮಾಡಿದೆ.

ಮುಂದುವರೆದು ಮುಖ್ಯಮಂತ್ರಿಗಳಿಗೆ @BSBommai ಅವರೇ, ವಂಚನೆಗೊಳಗಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಯಾವ ದಾರಿ ತೋರಿಸುವಿರಿ? #40PercentSarkara ದ ಅಸಮರ್ಥತೆಗೆ ಇವರ ಬದುಕೇಕೆ ಬಲಿಯಾಗಬೇಕು? ಎಂದು ಕೇಳಿದ್ದಾರೆ.

ಈ ಕುರಿತು ಅಭ್ಯರ್ತಿಗಳು ಪ್ರತಿಕ್ರಿತಯಿಸಿದ್ದು, ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ. ಯಾರೋ ಭ್ರಷ್ಟರು ಮಾಡಿದ ತಪ್ಪಿಗೆ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಜೀವನ ಹಾಳು ಮಾಡಬೇಡಿ ದಯವಿಟ್ಟು. ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನೂ ಗಮನಿಸಿ: https://www.youtube.com/watch?v=1Y_0liA-yp4

Related Articles

ಇತ್ತೀಚಿನ ಸುದ್ದಿಗಳು