Thursday, June 13, 2024

ಸತ್ಯ | ನ್ಯಾಯ |ಧರ್ಮ

ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ: ಅತ್ಯುತ್ತಮ ಕಥೆಗೆ 10 ಸಾವಿರ ಬಹುಮಾನ

ಆನೇಕಲ್‌ : ತಮ್ಮ ಬರಹದ ಪ್ರತಿಭೆಯನ್ನು ಕಥೆಯ ಮುಖಾಂತರ ತಂದು ಬಹುಮಾನ ಗೆಲ್ಲುವುದಲ್ಲದೇ ನಿಮ್ಮ ಬರಹಗಳು ಪುಸ್ತಕದಲ್ಲಿ ಪ್ರಕಟವಾಗುವಂತೆ ಕಥಾ ಸಮಯ ವಾರ್ಷಿಕ ಕಥಾ ಸ್ಪರ್ಧೆ ಯುವ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್‌ ವಿಧಾನಸಭಾ ಕ್ಷೇತ್ರ, ಪ್ರಜಾತಾರೆ ಬಳಗ ಮತ್ತು ಕೌದಿ ಪ್ರಕಾಶನ ಜಂಟಿ  ಸಹಯೋಗದೊಂದಿಗೆ ʼವಾರ್ಷಿಕ ಕಥಾ ಸ್ಪರ್ಧೆʼಯೊಂದನ್ನು ಆಯೋಜಿಸಲಾಗಿದ್ದು.  ನವೆಂಬರ್‌ 01, 2022 ರೊಳಗೆ ಬರೆದು ಕಳುಹಿಸುವ ಅತ್ಯುತ್ತಮ ಎನ್ನಿಸುವ ಕಥೆಗಳಿಗೆ  ತಲಾ 10000 ರೂ ಬಹುಮಾನವನ್ನು ನೀಡಲಾಗುತ್ತಿದೆ.

ಕಥೆಗಳನ್ನು ಬರೆದು ಕಳಿಹಿಸುವವರು 40 ವಯಸ್ಸಿನವರಿಗಿಂತಲೂ ಕಡಿಮೆ ಇರಬೇಕು. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟವಾಗಿರದ ಕಥೆಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ಪದಗಳ ಮಿತಿ ಇಲ್ಲ,ಬರೆಯುವ ಕಥೆ  ನುಡಿ ತಂತ್ರಾಂಶದಲ್ಲಿರಬೇಕು ಎಂದು ಕೆಲ ನಿಯಮಗಳನ್ನು ಸ್ಪರ್ಧಾ ಆಯೋಜಕರು ಹೇಳಿದ್ದಾರೆ.

ಅತ್ಯುತ್ತಮ ಎನ್ನಿಸುವ ಮೊದಲ ಮೂರು ಕಥೆಗಳಿಗೆ ತಲಾ 10 ಸಾವಿರ ರೂಗಳನ್ನು ಬಹುಮಾನವಾಗಿ ಕೊಡಲಾಗುತ್ತಿದ್ದು, ಅದ್ಬುತವಾಗಿ ಮೂಡಿ ಬಂದ ಇಪ್ಪತ್ತು ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಹಾಗೆಯೇ ಬಹುಮಾನಿತ ಕಥೆಗಳು ಸೇರಿದಂತೆ ಮೊದಲ ಇಪ್ಪತ್ತು ಕಥೆಗಳನ್ನು ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸುವ ಹಕ್ಕು ಸ್ಪರ್ಧೆಯ ಆಯೋಜಕರದ್ದಾಗಿರುತ್ತದೆ  ಎಂದು ಜಂಟಿ ಆಯೋಜಕರು ತಿಳಿಸಿದ್ದಾರೆ.

ಕಥೆಗಳನ್ನು ಪ್ರತ್ಯೇಕ ಪುಟದಲ್ಲಿ ನಿಮ್ಮ ಭಾವಚಿತ್ರ, ಪರಿಚಯ ಹಾಗೂ ವಿಳಾಸದೊಂದಿಗೆ anekalkathasparde@gmail.com ಇಮೇಲ್‌ ವಿಳಾಸಕ್ಕೆ ದಿ.01/11/22 ರೊಳಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕ.ಸಾ.ಪ ಆನೇಕಲ್‌ ವಿಧಾನಸಭಾ ಕ್ಷೇತ್-7795212012, ಪ್ರಜಾತಾರೆ ಬಳಗ-7204761668 ಮತ್ತು ಕೌದಿ ಪ್ರಕಾಶನ- 9380697082 ಈ ಮೊಬೈಲ್‌ ಸಂಖೈಗಳಿಂದ ಸಂಪರ್ಕಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು