Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೂರು ದಿನಗಳಲ್ಲಿ ಮದುವೆಯಾಗಬೇಕಿದ್ದ ಯುವತಿ ಭಾವಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಜಯನಗರ: ನವೆಂಬರ್ 23ರಂದು ಮದುವೆಯಾಗಬೇಕಿದ್ದ 26 ವರ್ಷದ ಯುವತಿಯೊಬ್ಬರು ಭಾನುವಾರ ರಾತ್ರಿ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿಯ ವರನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸರು ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಐಶ್ವರ್ಯ ಮತ್ತು ಅಶೋಕ್ ಕುಮಾರ್ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಳ್ಳೆಯ ಕೆಲಸದಲ್ಲಿದ್ದ ಬದುಕಿನಲ್ಲಿ ನೆಲೆ ಕಂಡುಕೊಂಡಿರುವ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಮನೆಯಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದರು. ಆದರೆ ಇಬ್ಬರ ಜಾತಿ ಬೇರೆಯಾದ್ದರಿಂದ ಎರಡೂ ಕುಟುಂಬದವರು ನಿರಾಕರಿಸಿದ್ದಾರೆ.

ಐಶ್ವರ್ಯಾ ಮತ್ತು ಅಶೋಕ್‌ ಪರಸ್ಪರ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರು. ಇದಕ್ಕೆ ಅಶೋಕ್ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಶೋಕ್ ಪೋಷಕರ ಬಳಿ ಒತ್ತಾಯ ಮಾಡಿ ಮನವೊಲಿಸಿದ್ದರು. ಐಶ್ವರ್ಯಾ ತನ್ನ ಪೋಷಕರಿಗೂ ಮನವರಿಕೆ ಮಾಡಿಸಿದ್ದರು. ಆದರೆ ಅಶೋಕ್ ಮನೆಯವರು ಈ ಮದುವೆಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಮದುವೆಯ ನಂತರ ಐಶ್ವರ್ಯಾ ತನ್ನ ಊರಿಗೆ ಹೋಗಬಾರದು ಮತ್ತು ಮದುವೆಗೆ ಅವರ ಕಡೆಯವರು ಯಾರೂ ಬರಬಾರದು. ಭವಿಷ್ಯದಲ್ಲಿ ಐಶ್ವರ್ಯಾ ತನ್ನ ಪೋಷಕರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಬಾರದು ಎನ್ನುವುದು ಅವರ ಷರತ್ತಾಗಿತ್ತು. ಅದಕ್ಕೆ ಐಶ್ವರ್ಯಾ ಮತ್ತು ಆಕೆಯ ಪೋಷಕರು ಕೂಡ ಒಪ್ಪಿದ್ದರಿಂದ ನವೆಂಬರ್ 23ಕ್ಕೆ ಮದುವೆ ನಿಶ್ಚಯವಾಯಿತು.

ಹಾಗಾಗಿ ಐಶ್ವರ್ಯಾ ವಿವಾಹ ಪೂರ್ವದ ಸಂಭ್ರಮಾಚರಣೆಗಾಗಿ ತನ್ನ ಭಾವಿ ಪತಿ ಮನೆಗೆ ಹೋಗಿದ್ದಳು. ಆದರೆ ಏನಾಯಿತೋ ಗೊತ್ತಿಲ್ಲ.. ಸೋಮವಾರ ಐಶ್ವರ್ಯಾ ಭಾವಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪರಿಣಾಮವಾಗಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಗಲೇ ಐಶ್ವರ್ಯಾ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

“ನನಗೆ ತಿಳಿಸುವ ಮೊದಲು, ಆಕೆಯ ನಾಡಿಮಿಡಿತದಲ್ಲಿ ಇಳಿಕೆ ಕಂಡುಬಂದ ಕಾರಣ ಅವರು ಅವಳನ್ನು ಎರಡು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದರು. ನನ್ನ ಮಗಳು ಹೇಗೆ ಸತ್ತಳು ಎಂದು ನನಗೆ ತಿಳಿದಿಲ್ಲ. ಅವಳು ತುಂಬಾ ಬಲಶಾಲಿಯಾಗಿದ್ದಳು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ವರನ ಕುಟುಂಬದ ಸದಸ್ಯರು ಆಕೆಯನ್ನು ಕೊಂದಿದ್ದಾರೆ” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು