Sunday, June 16, 2024

ಸತ್ಯ | ನ್ಯಾಯ |ಧರ್ಮ

ವಿಜಯಪುರ: ಹಂದಿಗಳ ಪ್ರವಾಸ ತಾಣವಾಗಿರುವ ಜಿಲ್ಲಾಸ್ಪತ್ರೆ ಆವರಣ!!

ವಿಜಯಪುರ, ಅ 21: ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣವು ಅಕ್ಷರಶಃ ಹಂದಿಗಳ ಮೋಜುದಾಣವಾಗಿ ಮಾರ್ಪಟ್ಟಿದ್ದು, ಈ ಆವರಣದೊಳಗೆ ಹಂದಿಗಳು ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿರುವುದು ಸರಕಾರಿ ಆಸ್ಪತ್ರೆಗಳ ನಿರ್ವಹಣಾ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಆಸ್ಪತ್ರೆಯ ಆವರಣದಲ್ಲಿ ವಿಹಾರದ ಮೋಜು ಅನುಭವಿಸುತ್ತಿರುವ ಹಂದಿಗಳು

ಈ ಜಿಲ್ಲಾಸ್ಪತ್ರೆಗೆ ಇತ್ತೀಚಿನ ದಿನಗಳಲ್ಲಿ ಜನರಿಗಿಂತಲೂ ಹೆಚ್ಚು ಹಂದಿಗಳೇ ಭೇಟಿ ನೀಡುತ್ತಿರುವುದರಿಂದಲೋ ಏನೋ, ಈ ಆ ಸ್ಪತ್ರೆಯ ಆವರಣದಲ್ಲಿ ಮಳೆ ಬಂದರೆ ಹಂದಿಗಳಿಗೆ ಈಜುಕೊಳವೇ ನಿರ್ಮಾಣವಾಗಿಬಿಡುತ್ತದೆ.

ವಿಜಯ ಜಿಲ್ಲಾಸ್ಪತ್ರೆಯ ನೋಟ

ಅಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ, ಈ ಆಸ್ಪತ್ರೆಯ ಬಳಿ ಹಂದಿಗಳ ಉಪಟಳ ನಿನ್ನೆ ಮೊನ್ನೆಯದಲ್ಲ. ಈ ಸಂಬಂಧ ಆಸ್ಪತ್ರೆಯ ಡೀನ್‌ ಆಗಲೀ, ಆರೋಗ್ಯ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಯ ಶುಚಿತ್ವ ಮತ್ತು ರೋಗಿಗಳ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ಆವರಣವನ್ನು ಗುಂಡಿಮುಕ್ತ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು