Home ರಾಜಕೀಯ “ಮಣಿಪುರಕ್ಕೆ ಬೇಕಿರುವುದು ದಿಟ್ಟ ನಾಯಕತ್ವ, ಜಾಹೀರಾತಿನ ಶ್ರೇಷ್ಠತೆಯಲ್ಲ” – ಪ್ರಿಯಾಂಕಾ ಗಾಂಧಿ

“ಮಣಿಪುರಕ್ಕೆ ಬೇಕಿರುವುದು ದಿಟ್ಟ ನಾಯಕತ್ವ, ಜಾಹೀರಾತಿನ ಶ್ರೇಷ್ಠತೆಯಲ್ಲ” – ಪ್ರಿಯಾಂಕಾ ಗಾಂಧಿ

0

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ನಾಯಕರ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಶ್ರೇಷ್ಠತೆಯ ಜಾಹೀರಾತುಗಳಿಂದಷ್ಟೆ ದೊಡ್ಡವರಾಗಲು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಹಾಗೂ ನಾಲ್ವರ ದುರ್ಮರಣದ ನಂತರ ಆಡಳಿತದಲ್ಲಿರುವ ಪಕ್ಷ ಈ ಬಗ್ಗೆ ಏನೊಂದೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಮಣಿಪುರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಕಾಣಿಸಿಕೊಂಡಿದ್ದಾರೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಇನ್ನೂ ಮುಂದುವರೆದಿದೆ ಮಣಿಪುರದ ಜನರು ಎಂಟು ತಿಂಗಳಿನಿಂದ ಕೊಲೆ, ಹಿಂಸಾಚಾರ ಮತ್ತು ಆಪತ್ಕಾಲವನ್ನು ಎದುರಿಸುತ್ತಿದ್ದಾರೆ. ಈ ಪ್ರವೃತ್ತಿ ಯಾವಾಗ ನಿಲ್ಲುತ್ತದೆ?” ಎಂದು ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿದ್ದಾರೆ.

ನಿರಂತರ ಸುದ್ದಿಗಳಿಗೆ ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ

ಈವರೆಗೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಹೋಗಿಲ್ಲ, ಮಣಿಪುರದ ಬಗ್ಗೆ ಮಾತನಾಡಿಲ್ಲ, ಸಂಸತ್ತಿನಲ್ಲಿ ಉತ್ತರವನ್ನೂ ನೀಡಿಲ್ಲ, ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ. ಮಣಿಪುರಕ್ಕೆ ಬೇಕಾಗಿರುವುದು ದಿಟ್ಟ ನಾಯಕತ್ವವೇ ಅಥವಾ ಜಾಹೀರಾತಿನ ಮೂಲಕ ಬಂದ ಶ್ರೇಷ್ಠತೆಯೇ?” ಎಂದು ಪ್ರಶ್ನಿಸಿದ್ದಾರೆ.

You cannot copy content of this page

Exit mobile version