ಮುಂಬಯಿ: ಇಂಡಿಯಾ ಒಕ್ಕೂಟದ ಭಾಗವಾಗಿರುವ NCP ಒಂದು ಕಾಲನ್ನು ಹೊರಗೇ ಇಟ್ಟುಕೊಂಡು ಮೈತ್ರಿ ಸಾಧಿಸಿದೆ. ಅತ್ತ ಆ ಪಕ್ಷದ ಇನ್ನೊಂದು ಭಾಗ ಬಿಜೆಪಿಯ ಸಖ್ಯದಲ್ಲಿದೆ. ನಾಗಲ್ಯಾಂಡ್ ರಾಜ್ಯದ ಎನ್ಸಿಪಿ ಕೂಡಾ ಬಿಜೆಪಿ ಜೊತೆ ಹೋಗಿರುವ ಅಜಿತ್ ಪವಾರ್ ಬಣಕ್ಕೆ ಬೆಂಬಲ ನೀಡಿರುವುದು ಶರದ್ ಪವಾರ್ ಅವರ ಕೈಯನ್ನು ಕಟ್ಟಿ ಹಾಕಿರುವಂತಿದೆ.
ಸದ್ಯಕ್ಕೆ ಕರ್ನಾಟಕದ JDS ಹಾಗೂ NCP ಒಂದೇ ದೋಣಿಯ ಪಯಣಿಗರೆನ್ನಬಹುದು. ಇಲ್ಲಿಯೂ ಜೆಡಿಸ್ ದೇಹ ಪಕ್ಷದಲ್ಲಿದ್ದರೆ ಅದರ ಮನಸ್ಸೆಲ್ಲ ಬಿಜೆಪಿಯಲ್ಲಿದೆ.
ಈಗ ಸುಳಿದಾಡುತ್ತಿರುವ ಸುದ್ದಿಯ ಪ್ರಕಾರ ಅಗಸ್ಟ್ರಂದು ಶರದ್ ಪವಾರ್ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಘೋಷಣೆ ಹೊರಡಿಸಲಿದ್ದಾರೆ. ಅಜಿತ್ ಪವಾರ್ ಕೈಗೆ ಪಕ್ಷದ ಚುಕ್ಕಾಣಿ ಪೂರ್ತಿಯಾಗಿ ನೀಡಿ ಸುಪ್ರಿಯಾ ಸುಳೆ ಬಿಜೆಪಿ ಮೈತ್ರಿಯ ಭಾಗವಾಗಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಇಂದು ಶರದ್ ಪವಾರ್ ಮೋದಿಯವರನ್ನು ಸನ್ಮಾನಿಸಲು ಒಪ್ಪಿಕೊಂಡಿರುವುದು ಕೂಡಾ ಈ ಕಾರ್ಯತಂತ್ರದ ಒಂದ ಭಾಗ ಎನ್ನಲಾಗುತ್ತಿದೆ. ಎನ್ಸಿಪಿ ಜೊತೆ ಬಿಜೆಪಿಯ ಸಖ್ಯ ಗಟ್ಟಿಯಾಗುತ್ತಿರುವಂತೆ ಅತ್ತ ಶಿವಸೇನೆಯ ಶಿಂಧೆಯ ಬಣ ಅಭದ್ರತೆಯನ್ನು ಎದುರಿಸುತ್ತಿದೆ. ಒಂದು ವೇಳೆ ಅಜಿತ್ ಪವಾರ್ ಕೈಗೆ ಪೂರ್ಣ ಪ್ರಮಾಣದಲ್ಲಿ ಪಕ್ಷ ಸೇರಿದಲ್ಲಿ ಅವರು ಮಹಾರಾಷ್ಟ್ರದ ಸಿಎಮ್ ಪಟ್ಟ ಕೇಳುತ್ತಾರೆನ್ನುವುದು ಕೂಡಾ ಶಿಂಧೆ ಬಣಕ್ಕೆ ತಳಮಳ ಹುಟ್ಟಿಸಿದೆ.