Saturday, June 21, 2025

ಸತ್ಯ | ನ್ಯಾಯ |ಧರ್ಮ

ಸ್ಲಂ ಮಹಿಳಾ ನಿವಾಸಿಗಳಿಗೆ ʼಮಹಿಳಾ ನಾಯಕತ್ವ ಶಿಬಿರʼ

ಲಗ್ಗೆರೆ : ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ವತಿಯಿಂದ ಶನಿವಾರದಂದು ʼಮಹಿಳಾ ನಾಯಕತ್ವ ಶಿಬಿರʼ ವನ್ನು ಹಮ್ಮಿಕೊಳ್ಳಲಾಗಿತ್ತು. ಲಗ್ಗೆರೆಯ ಸಮುದಾಯ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ಗಣ್ಯರು ಆಗಮಿಸಿ ಮಹಿಳೆಯರನ್ನು ಪ್ರೋತ್ಸಾಹಿಸಿದ್ದಾರೆ.

ಬರಹಗಾರ್ತಿಯಾದ ಸುರಭಿ ರೇಣುಕಾಂಬಿಕೆಯವರು ಶಿಬಿರದಲ್ಲಿ, ʼಮಹಿಳೆಯರಲ್ಲಿನ ನಾಯಕತ್ವದ ಗುಣಗಳ ಉದಾಹರಣೆ ಸಮೇತವಾಗಿ ಮಾತನಾಡಿ ಮಹಿಳೆಯರನ್ನು ಹುರಿದುಂಬಿಸಿದ್ದಾರೆ.

ಸಾವಿತ್ರಿ ಬಾಪುಲೆ ಮಹಿಳಾ ನಾಯಕತ್ವಕ್ಕೆ ಮಾದರಿಯಾಗಿದ್ದಾರೆ. ಅವರಲ್ಲಿನ ಗುಣಗಳನ್ನು ಪ್ರತಿಯೊಬ್ಬರು ಅನುಸರಿಸಿದರೆ ಮಹಿಳಾ ನಾಯಕತ್ವಕ್ಕೆ ಒಂದು ಅರ್ಥ ಬರುತ್ತದೆ ಎಂದು ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯರಾದ ಚಂದ್ರಮ್ಮ, ರೇಖಾ ಕಂಬಳಿ, ಮಂಜುಬಾಯಿ, ತ್ರಿವೇಣಿ, ಯಶಸ್ವಿನಿ ಹಾಗೂ ಸಾವಿತ್ರಿ ಬಾಪುಲೆ ನಗರ, ಜೈಭೀಮ್‌ನಗರ, ಉತ್ತರಹಳ್ಳಿ ಅಂಬೇಡ್ಕರ್ ನಗರ ಮತ್ತು ಯಶವಂತಪುರದ ಸುಣ್ಣದಗೂಡಿನ ಸ್ಲಂ ಮಹಿಳಾ ನಿವಾಸಿಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page