ಯತ್ನಾಳ್‌ ನಮ್ಮ ಪಕ್ಷದವರಲ್ಲ:‌ ಸಚಿವ ಅರುಣ್‌ ಸಿಂಗ್

ಹುಬ್ಬಳ್ಳಿ : ಬಸನಗೌಡ ಪಾಟೀಲ್‌ ಯತ್ನಾಳ್‌ ನಮ್ಮ ಪಕ್ಷದವರಲ್ಲಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಸಚಿವ ಅರುಣ್‌ ಸಿಂಗ್‌ ಹೇಳಿದ್ದಾರೆ.

ಇಂದು ಹುಬ್ಬಳಿಯಲ್ಲಿ ಮಾತನಾಡಿದ ಅರುಣ್‌ ಸಿಂಗ್‌, ʼಬಸನಗೌಡ ಪಾಟೀಲ್‌ ಯತ್ನಾಳ್‌ ನಮ್ಮ ಪಕ್ಷದ ನಾಯಕರಲ್ಲ. ಅವರು ಬಿಜೆಪಿ ಕೋರ್‌ ಕಮಿಟಿಯಲ್ಲಿ ಇಲ್ಲ. ಅವರ ಯಾವ ಹೇಳಿ ನಮ್ಮ ಪಕ್ಷದ ಹೇಳಿಕೆಯಲ್ಲ. ಬೆಲ್ಲದ್‌ ಮತ್ತು ಯತ್ನಾಳ್‌ ಅಲ್ಪಸಂಖ್ಯಾತ ಮೀಸಲಾತಿ ಬಗ್ಗೆ ಹೇಳಿರುವುದು  ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಬಗ್ಗೆ ಯತ್ನಾಳ್‌ ಅವರಿಗೆ ನೋಟಿಸ್‌ ಜಾರಿ ಮಾಡಿ ಅವರಿಂದಲೇ ಉತ್ತರ ಪಡೆದಿದ್ದೇವೆ ́ ಎಂದು ಹೇಳಿದರು.

ಯತ್ನಾಳ್‌ ಅವರ ಸ್ವಭಾವವೇ ಹಾಗೆ ಇರುವುದರಿಂದ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೆಟ್ಟರ್‌ ಅವರನ್ನು ಪಕ್ಷವು ಸೈಡ್ಲೈನ್‌ ಮಾಡಿಲ್ಲ. ಅವರೂ ಸಹ ಬಿಜೆಪಿ ಕೋರ್‌ ಕಮಿಟಿಯಲ್ಲಿದ್ದಾರೆ. ಅವರಿಗೂ ಟಿಕೆಟ್‌ ಸಿಗಲಿದೆ ಎಂದು ಮಾತನಾಡಿದರು.

Related Articles

ಇತ್ತೀಚಿನ ಸುದ್ದಿಗಳು