Friday, January 17, 2025

ಸತ್ಯ | ನ್ಯಾಯ |ಧರ್ಮ

ಬೆಟ್ಟಿಂಗ್ ಆಡಬೇಡ ಎಂಬ ಬುದ್ಧಿಮಾತಿಗೆ ಆತ್ಮ*ಹತ್ಯೆಗೆ ಶರಣಾದ ಯುವಕ

ಆನ್ಲೈನ್ ಬೆಟ್ಟಿಂಗ್ ಆಡಬೇಡ ಎಂದು ಹೆತ್ತ ತಾಯಿ ಬುದ್ಧಿ ಹೇಳಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ನಗರದ ಹೊರಪೇಟೆಯ ಯುವಕ ಟಿ.ಎಸ್ ಭರತ್ ಮೃತ ಯುವಕನಾಗಿದ್ದಾನೆ. ಭರತ್ ಕೆಲ ದಿನಗಳಿಂದ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಈ ಗೇಮ್ ನಲ್ಲಿ 20 ಸಾವಿರ ಹಣ ಹಾಕಿ ಕಳೆದುಕೊಂಡಿದ್ದನು. ಈ ವಿಚಾರ ಗೊತ್ತಾದಂತ ತಾಯಿಯು, ಇನ್ಮುಂದೆ ಆನ್ ಲೈನ್ ಗೇಮ್ ಆಡೋದು ಬೇಡ ಎಂಬುದಾಗಿ ಬುದ್ಧಿ ಹೇಳಿದ್ದಾರೆ.

ಈ ವಿಚಾರಕ್ಕಾಗಿ ಭರತ್ ಸಿಟ್ಟು ಮಾಡಿಕೊಂಡು ತಮ್ಮ ಹಳೆಯ ಹೆಂಚಿನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page