ಜಿರಿಬಾಮ್ನಲ್ಲಿ ಶಂಕಿತ ಉಗ್ರರು ಒಂದೇ ಕುಟುಂಬದ ಆರು ಸದಸ್ಯರನ್ನು ಅಪಹರಿಸಿದ ಕೆಲವೇ ದಿನಗಳಲ್ಲಿ ಮಣಿಪುರ-ಅಸ್ಸಾಂ ಗಡಿಯ ಬಳಿ ಶುಕ್ರವಾರ ಶಿಶು ಸೇರಿದಂತೆ ಇಬ್ಬರು ಮಕ್ಕಳು ಮತ್ತು ಮಹಿಳೆಯ ಕೊಳೆತ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ, ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಸಿಆರ್ಪಿಎಫ್ ಪೋಸ್ಟ್ ಮೇಲೆ ದಾಳಿ ಮಾಡಿದ ನಂತರ ಭದ್ರತಾ ಅಧಿಕಾರಿಗಳು 10 ಶಂಕಿತ ಉಗ್ರರನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಜಿರಿಬಾಮ್ ಗ್ರಾಮದಿಂದ ಇಬ್ಬರು ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ಗ್ರಾಮದ ಮೈತೇಯಿ ಕುಟುಂಬದ ಆರು ಸದಸ್ಯರು-ಮೂರು ಮಹಿಳೆಯರು ಮತ್ತು ಮೂವರು ಮಕ್ಕಳು-ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ಶವಗಳು ಅಂತರಾಜ್ಯ ಗಡಿಯ ಸಮೀಪವಿರುವ ನದಿಯ ಬಳಿ ಮತ್ತು ಅಪಹರಣಗಳು ನಡೆದ ಸ್ಥಳದಿಂದ ಸುಮಾರು 15 ಕಿ.ಮೀ. ನಲ್ಲಿ ಪತ್ತೆಯಾಗಿದೆ. ಮೃತದೇಹಗಳು ಅಪಹರಣಕ್ಕೊಳಗಾದವರದ್ದೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. “ದೇಹಗಳನ್ನು ಗುರುತಿಸಲು ಸಿಲ್ಚಾರ್ಗೆ ಕೊಂಡೊಯ್ಯಲಾಗಿದೆ. ಅವರನ್ನು ಇನ್ನೂ ಗುರುತಿಸಬೇಕಿದೆ. ಆರು ಜನರ ಕುಟುಂಬವನ್ನು ಕರೆದೊಯ್ದ ಸ್ಥಳದಿಂದ 15-20 ಕಿಮೀ ದೂರದಲ್ಲಿ ಮೃತದೇಹ ಪತ್ತೆಯಾಗಿವೆ. ಪೊಲೀಸರು ಗುರುತನ್ನು ಖಚಿತಪಡಿಸಲು ಸಾಧ್ಯವಾಗದಿದ್ದರೆ, ಡಿಎನ್ಎ ಪರೀಕ್ಷೆಯನ್ನು ನಡೆಸಲಾಗುವುದು, ”ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ, ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಸಿಆರ್ಪಿಎಫ್ ಪೋಸ್ಟ್ ಮೇಲೆ ದಾಳಿ ಮಾಡಿದ ನಂತರ ಭದ್ರತಾ ಅಧಿಕಾರಿಗಳು 10 ಶಂಕಿತ ಉಗ್ರರನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಜಿರಿಬಾಮ್ ಗ್ರಾಮದಿಂದ ಇಬ್ಬರು ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ಗ್ರಾಮದ ಮೈತೇಯಿ ಕುಟುಂಬದ ಆರು ಸದಸ್ಯರು-ಮೂರು ಮಹಿಳೆಯರು ಮತ್ತು ಮೂವರು ಮಕ್ಕಳು-ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ, ಅವರು ಉಗ್ರಗಾಮಿಗಳಿಂದ ಅಪಹರಣಗೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ನನ್ನ ಹೆಂಡತಿ, ಇಬ್ಬರು ಮಕ್ಕಳು, ಅತ್ತೆ, ಅತ್ತಿಗೆ , ಮತ್ತು ಆಕೆಯ ಮಗುವನ್ನು ಮನೆಯಿಂದ ಅಪಹರಿಸಲಾಯಿತು. ಅವರನ್ನು ಉಗ್ರಗಾಮಿಗಳು ಕರೆದೊಯ್ಯುವಾಗ ನಾನು ಮನೆಯಲ್ಲಿದ್ದೆ. ದಯವಿಟ್ಟು ಮಧ್ಯಪ್ರವೇಶಿಸಿ ನನ್ನ ಕುಟುಂಬವನ್ನು ರಕ್ಷಿಸುವಂತೆ ನಾನು ನವದೆಹಲಿಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಜಿರ್ಬಾಮ್ ನಿವಾಸಿ ಲೈಶ್ರಾಮ್ ಹೆರೋಜಿತ್ ಬುಧವಾರ ಹೇಳಿದ್ದಾರೆ.