Home ದೇಶ ಇಲಿಗೆಂದು ಇಟ್ಟಿದ್ದ ವಿಷ ತಿಂದು 50 ನವಿಲುಗಳು ಸಾವು; ರೈತನ ಬಂಧನ

ಇಲಿಗೆಂದು ಇಟ್ಟಿದ್ದ ವಿಷ ತಿಂದು 50 ನವಿಲುಗಳು ಸಾವು; ರೈತನ ಬಂಧನ

0

ತಮಿಳುನಾಡಿನ ತೆನ್‌ಕಾಶೀ ಜಿಲ್ಲೆಯ ಮೀನಾಕ್ಷಿಪುರಂ ಗ್ರಾಮದಲ್ಲಿ ಒಂದು ದುರಂತ ಘಟನೆ ನಡೆದಿದೆ. ಇಲಿಗಳಿಗೆ ಇಡಲಾಗಿದ್ದ ವಿಷವನ್ನು ಸೇವಿಸಿದ ಕಾರಣದಿಂದಾಗಿ ಸುಮಾರು 50 ನವಿಲುಗಳು ಮೃತಪಟ್ಟಿವೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೈತನನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಮೀನಾಕ್ಷಿಪುರಂ ಗ್ರಾಮದ ಜಾನ್ಸನ್ ಎಂಬ ರೈತನು ತನ್ನ ಒಂದು ಎಕರೆ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆದಿದ್ದನು. ಬೆಳೆ ಕೊಯ್ಲಿಗೆ ಬರುವ ಸಮಯ ಸಮೀಪಿಸುತ್ತಿದ್ದಂತೆ, ಪಕ್ಷಿಗಳು ಮತ್ತು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು, ಜಾನ್ಸನ್ ತನ್ನ ಜಮೀನಿನ ಸುತ್ತಲೂ ಇಲಿ ವಿಷವನ್ನು ಬೆರೆಸಿದ ಆಹಾರ ಪದಾರ್ಥಗಳನ್ನು ಇಟ್ಟಿದ್ದನು. ಮೆಕ್ಕೆಜೋಳದ ಗದ್ದೆಯ ಬಳಿಗೆ ಬಂದ ನವಿಲುಗಳು ಈ ವಿಷ ಬೆರೆಸಿದ ಆಹಾರವನ್ನು ಸೇವಿಸಿ, ಸ್ವಲ್ಪ ಸಮಯದ ನಂತರ ಸ್ಥಳದಲ್ಲೇ ಸಾವಿಗೀಡಾಗಿವೆ.

ಈ ಬಗ್ಗೆ ಮಾಹಿತಿ ತಿಳಿದು ಬಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಜಾನ್ಸನ್ ಅವರ ಜಮೀನಿಗೆ ಭೇಟಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆಯಲ್ಲಿ ಸುಮಾರು 50 ನವಿಲುಗಳು ಮೃತಪಟ್ಟಿರುವುದು ದೃಢಪಟ್ಟಿದೆ. ಅಧಿಕಾರಿಗಳು ಮೃತ ನವಿಲುಗಳ ಕಳೇಬರಗಳನ್ನು ವಶಪಡಿಸಿಕೊಂಡಿದ್ದು, ಬಳಿಕ ರೈತ ಜಾನ್ಸನ್‌ನನ್ನು ಬಂಧಿಸಿದ್ದಾರೆ. ಭಾರತದಲ್ಲಿ ನವಿಲುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಪ್ರಾಣಿಗಳಾಗಿವೆ.

You cannot copy content of this page

Exit mobile version