Monday, June 17, 2024

ಸತ್ಯ | ನ್ಯಾಯ |ಧರ್ಮ

ಟೊಮ್ಯಾಟೊ ತಿನ್ನೋದನ್ನ ಬಿಡಿ ಬೆಲೆ ಕಮ್ಮಿ ಆಗುತ್ತೆ ಎಂದ ಸಚಿವೆ!!

ಕಳೆದ ಸಲ ಈರುಳ್ಳಿ ಬೆಲೆ ಜಾಸ್ರಿಯಾಗಿದ್ದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ʼನಾನು ಈರುಳ್ಳಿ ತಿನ್ನುವುದಿಲ್ಲ ಹೀಗಾಗಿ ಈರುಳ್ಳಿ ಬೆಲೆ ಜಾಸ್ತಿಯಾದರೆ ನನಗೆ ಏನೂ ಫರಕು ಬೀಳುವುದಿಲ್ಲʼ ಎಂದಿದ್ದರು. ಈಗ ಮತ್ತೊಮ್ಮೆ ಉತ್ತರ ಪ್ರದೇಶ ಸರಕಾರದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಪೋಷಣೆಯ ಸಚಿವೆ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದು ಟೊಮ್ಯಾಟೊ ಬೆಲೆ ಜಾಸ್ತಿಯಾಗಿದ್ದರೆ ಅದನ್ನು ತಿನ್ನುವುದನ್ನು ನಿಲ್ಲಿಸಿ ಎಂದಿದ್ದಾರೆ!

ಭಾರಿ ಮೇಲೆ ಏರಿಕೆ ಕಾರಣ ಟೊಮೆಟೊ ಖರೀದಿಸಲು ಜನಸಾಮಾನ್ಯರಿಗೆ ಹೊರೆಯಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಚಿವೆ ಪ್ರತಿಭಾ ಶುಕ್ಲಾ ಅವರು ಬೆಲೆ ಏರಿಕೆ ಎಂದು ಟೊಮೆಟೊ ಸೇವನೆ ತ್ಯಜಿಸಬಹುದು ಎಂದು ಹೇಳಿದ್ದಾರೆ.

ದುಬಾರಿ ವಸ್ತುಗಳ ಮೇಲೆ ಕಡಿವಾಣ ಹಾಕಿ. ಯಾರೂ ಖರೀದಿಸದ ಕಾರಣ ಬೆಲೆ ಕಡಿಮೆಯಾಗುತ್ತದೆ. ದುಬಾರಿ ವಸ್ತುಗಳ ಮೇಲೆ ಕಡಿವಾಣ ಹಾಕುವುದರಿಂದ ಸಹಜವಾಗಿಯೇ ಬೆಲೆಗಳು ಕಡಿಮೆಯಾಗುತ್ತವೆ. ಯಾರೂ ಅವುಗಳನ್ನು(ಟೊಮ್ಯಾಟೊ) ಖರೀದಿಸದಿದ್ದರೆ, ವ್ಯರ್ಥವಾಗುವುದನ್ನು ತಡೆಯಲು ವೆಚ್ಚದಲ್ಲಿ ಇಳಿಕೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಟೊಮೆಟೊ ದುಬಾರಿಯಾಗಿದ್ದು, ವಿಶೇಷವಾಗಿ ಈ ಋತುವಿನಲ್ಲಿ ಹಣದುಬ್ಬರ ತಡೆಗಟ್ಟಲು ಕುಂಡಗಳಲ್ಲಿ ಟೊಮೆಟೊ ಬೆಳೆಸಬೇಕು. ಇದನ್ನು ಸಂಭವನೀಯ ಪರಿಹಾರವಾಗಿ ಪರಿಗಣಿಸಬಹುದು. ದುಬಾರಿ ಟೊಮೆಟೊಗಳಿಗೆ ನಿಂಬೆಹಣ್ಣುಗಳು ಪರ್ಯಾಯವಾಗಬಹುದು ಎಂದು ಸಚಿವರು ಹೇಳಿದ್ದಾರೆ.

ವೆಚ್ಚ ಕಡಿಮೆ ಮಾಡಲು ಕುಂಡಗಳಲ್ಲಿ ಟೊಮೆಟೊಗಳನ್ನು ನೆಡುವುದನ್ನು ಪರಿಗಣಿಸಿ: ಹಳ್ಳಿಯೊಂದರಲ್ಲಿ ಪೌಷ್ಟಿಕಾಂಶದ ಉದ್ಯಾನ ನಿರ್ವಹಿಸುತ್ತಿದ್ದು, ಅಲ್ಲಿ ಮಹಿಳೆಯರು ಹಿತ್ತಲನ್ನು ಉದ್ಯಾನವನ್ನಾಗಿ ಪರಿವರ್ತಿಸುತ್ತಾರೆ. ತರಕಾರಿಗಳನ್ನು ಬೆಳೆಯುತ್ತಾರೆ. ಈಗ ಅವರು ಬೆಳೆದ ತರಕಾರಿ ಬಳಸುವುದರಿಂದ ಅವರು ಇನ್ನು ಮುಂದೆ ತರಕಾರಿ ಖರೀದಿಸುವ ಅಗತ್ಯವಿಲ್ಲ ಎಂದರು.

Related Articles

ಇತ್ತೀಚಿನ ಸುದ್ದಿಗಳು