Monday, June 24, 2024

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಹುದ್ದೆಗಾಗಿ INDIA ಬಣ ಸೇರಿಲ್ಲ: ಎಎಪಿ ನಾಯಕ ರಾಘವ್ ಚಡ್ಡಾ

ನವದೆಹಲಿ,ಅಗಸ್ಟ್.31: ಆಮ್‌ ಆದ್ಮಿ ಪಾರ್ಟಿ INDIA ಮೈತ್ರಿಕೂಟವನ್ನು ಸೇರಿರುವ ಹಿನ್ನಲೆಯಲ್ಲಿ ಪಕ್ಷದ ನಾಯಕ ರಾಘವ್‌ ಚಡ್ಡಾ ತಮ್ಮ ಪಕ್ಷ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟವನ್ನು ಸೇರಿರುವ ಉದ್ದೇಶವನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಳ್ಳುತ್ತಾ ಆಪ್‌ ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಂಬ ವಾದವನ್ನು ತಳ್ಳಿಹಾಕಿದ್ದಾರೆ. ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಬೇರೆ ಯಾವ ಪ್ರಧಾನಿಯಾಗಬಲ್ಲ ಮುಖಗಳು ಇಲ್ಲ ಎಂದು ಟೀಕಿಸಿದ್ದಾರೆ.

“ಎಎಪಿ ಪ್ರಧಾನಿ ಹುದ್ದೆಗಾಗಿ INDIA ಮೈತ್ರಿಕೂಟಕ್ಕೆ ಸೇರಿಲ್ಲ. ಅರವಿಂದ್ ಕೇಜ್ರಿವಾಲ್ (Arvind Kejriwal) ಪ್ರಧಾನಿಯಾಗುವ ರೇಸ್‌ನಲ್ಲಿಲ್ಲ. ಉತ್ತಮ ಭಾರತದ ನೀಲನಕ್ಷೆಯನ್ನು ಸಿದ್ಧಪಡಿಸಲು ನಾವು INDIA ಮೈತ್ರಿಕೂಟಕ್ಕೆ ಸೇರಿದ್ದೇವೆ.ಯಾವುದಾದರೂ ಪಕ್ಷ ಪ್ರಧಾನಿ ಹುದ್ದೆಗಾಗಿ ಎಎಪಿ INDIA ಬಣವನ್ನು ಸೇರಿದೆ ಎಂದು ಹೇಳಿದರೆ, ಇದರರ್ಥ ಪ್ರಧಾನಿ ಹುದ್ದೆಗೆ ನಮ್ಮಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ ಎಂದು. ಅನೇಕ ಪ್ರಮುಖ ನಾಯಕರು ಭಾರತದ ಮೈತ್ರಿಯ ಭಾಗವಾಗಿದ್ದಾರೆ. ಅವರು (BJP / NDA) ಪಿಎಂ ಮೋದಿಯವರನ್ನು (Narendra Modi) ಹೊರತುಪಡಿಸಿ ಅಂತಹ ಬೇರೆ ಮುಖಗಳನ್ನು ಹೊಂದಿದ್ದೀರಾ..? ಬಿಜೆಪಿಯಲ್ಲಿ ನಿತಿನ್ ಗಡ್ಕರಿ (Nitin Gadkari), ಯೋಗಿ ಆದಿತ್ಯನಾಥ್ (Yogi Adityanath) ಅಥವಾ ಚಿರಾಗ್ ಪಾಸ್ವಾನ್ (Chirag Paswan) ಅವರ ಪಕ್ಷದ ಯಾರನ್ನಾದರೂ ಮುಂದಿನ ಪ್ರಧಾನಿಯಾಗಲು ಬಯಸುವವರು ಯಾರಾದರೂ ಇದ್ದಾರೆಯೇ? ಆ ಪಕ್ಷದಲ್ಲಿ ಈ ರೀತಿ ಯೋಚಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ,” ಎಂದು ಎಎಪಿ ನಾಯಕ ರಾಘವ್ ಚಡ್ಡಾ (Raghav Chadha) ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು