Saturday, May 17, 2025

ಸತ್ಯ | ನ್ಯಾಯ |ಧರ್ಮ

ವಾಂಖೆಡೆ ಕ್ರೀಡಾಂಗಣ: ಭಾವುಕರಾದ ರೋಹಿತ್ ಶರ್ಮಾ ಕುಟುಂಬ ಸದಸ್ಯರು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಆಶ್ರಯದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಹಿಟ್‌ಮ್ಯಾನ್‌ನ ಕುಟುಂಬ ಸದಸ್ಯರು ಭಾವುಕರಾಗಿದ್ದರು. ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ವೇದಿಕೆಯಲ್ಲಿ ಮಾತನಾಡುವಾಗ ರೋಹಿತ್ ಶರ್ಮಾ ಕೂಡ ಕೆಲವು ಕ್ಷಣ ಕಣ್ಣೀರು ಹಾಕುತ್ತಾ ಕಾಣಿಸಿಕೊಂಡರು. ಅವರು ತನ್ನ ಹೆತ್ತವರು, ಹೆಂಡತಿ ಮತ್ತು ಸಹೋದರನಿಗೆ ಧನ್ಯವಾದ ಹೇಳಿದರು.

“ಇಂದು ನನ್ನ ಕುಟುಂಬ – ನನ್ನ ಹೆತ್ತವರು, ಹೆಂಡತಿ ಮತ್ತು ಸಹೋದರ – ಇಲ್ಲಿರುವುದು ನನ್ನ ಪಾಲಿಗೆ ಈ ದಿನವನ್ನು ಇನ್ನಷ್ಟು ವಿಶೇಷವಾಗಿಸಿದೆ. ಅವರು ನನಗಾಗಿ ಮಾಡಿದ ತ್ಯಾಗಗಳಿಗೆ ನಾನು ಕೃತಜ್ಞ. ಇಂದು ನಾನು ಏನಾಗಿದ್ದೇನೆಯೋ ಅದನ್ನು ಸಾಧಿಸುತ್ತೇನೆ ಎಂದು ಊಹಿಸಿರಲಿಲ್ಲ. ಬಾಲ್ಯದಲ್ಲಿ ಮುಂಬೈ ಮತ್ತು ಟೀಮ್ ಇಂಡಿಯಾ ಪರ ಆಡುವ ಕನಸು ಕಂಡಿದ್ದೆ.

ಇವತ್ತು ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಗೊಂಡಿದ್ದಕ್ಕೆ ನನಗಾಗಿರುವ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾನು ಇನ್ನೂ ಆಡುತ್ತಿರುವುದೇ ನನ್ನ ಪಾಲಿಗೆ ವಿಶೇಷ. ನಾನು ಕ್ರಿಕೆಟ್ಟಿನ ಎರಡು ಸ್ವರೂಪಗಳಿಂದ ಮಾತ್ರ ನಿವೃತ್ತಿ ಹೊಂದಿದ್ದೇನೆ. ಇನ್ನೂ ಒಂದು ಸ್ವರೂಪದಲ್ಲಿ ಆಡುತ್ತಿದ್ದೇನೆ. ವಾಂಖೆಡೆ ಅದ್ಭುತ ಕ್ರೀಡಾಂಗಣ. “ನನಗೆ ಇದರ ಮೇಲೆ ತುಂಬಾ ಪ್ರೀತಿ ಇದೆ” ಎಂದು ರೋಹಿತ್ ಶರ್ಮಾ ಹೇಳಿದರು.

ಈ ಸಂದರ್ಭದಲ್ಲಿ ಅವರು ಭಾರತದ ಮಾಜಿ ನಾಯಕ ಅಜಿತ್ ವಾಡೇಕರ್ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಧನ್ಯವಾದ ಅರ್ಪಿಸಿದರು. ನಂತರ, ಹಿಟ್‌ಮ್ಯಾನ್‌ನ ಪೋಷಕರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ರೋಹಿತ್ ಶರ್ಮಾ ಅವರ ಹೆಸರಿನ ಸ್ಟ್ಯಾಂಡನ್ನು ಲೋಕಾರ್ಪಣೆ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page