Saturday, June 14, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಕಲಾ-ವಿಜ್ಞಾನ ಕಾಲೇಜಿಗೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸದಸ್ಯರ ಭೇಟಿ

ಹಾಸನ : ನಗರದ ಸರ್ಕಾರಿ ಕಲಾ ಕಾಲೇಜು ಹಾಗೂ ವಿಜ್ಞಾನ ಕಾಲೇಜಿಗೆ ಶುಕ್ರವಾರ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸದಸ್ಯರು ಭೇಟಿ ನೀಡಿದ ವೇಳೆ ವಿವಿಧ ದೇಶಗಳ ಉಡುಪುಗಳನ್ನು ತೊಟ್ಟ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಜೊತೆಗೆ ಭರತ ನಾಟ್ಯ ಪ್ರದರ್ಶನದ ಮೂಲಕ ಅದ್ಧೂರಿಯಾಗಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ನಂತರ ಕಾಲೇಜಿನ ಅಭಿವೃದ್ಧಿ ಕುರಿತು ಪ್ರೊಜೆಕ್ಟರ್ ಮೂಲಕ ಚಿತ್ರಣ ವೀಕ್ಷಣೆ ಮಾಡಿ ಸಂವಾದ ನಡೆಸಿದರು. ಇದೆ ವೇಳೆ ಸರಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಎಂಬಿ. ಇರ್ಷಾದ್ ಮಾಧ್ಯಮದೊಂದಿಗೆ ಮಾತನಾಡಿ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಯನ್ನು ಉನ್ನತ ಶಿಕ್ಷಣದಲ್ಲಿ ಮಾಡುತ್ತಾ ಬಂದಿದೆ. ಉನ್ನತ ಶಿಕ್ಷಣದ ಉದ್ದೇಶದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ. ಇತ್ತಿಚಿನ ದಿನಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆ ಇನ್ನಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುತ್ತಿದ್ದು, ಉನ್ನತ ಶಿಕ್ಷಣದ ಉದ್ದೇಶ ಕೇವಲ ಪದವಿಗಳನ್ನು ಕೊಟ್ಟು ವಿದ್ಯಾರ್ಥಿಗಳನ್ನು ಆಚೇಗೆ ಕಳುಹಿಸುವುದಲ್ಲ. ಉನ್ನತ ಶಿಕ್ಷಣದ ಪ್ರಮುಖ ಉದ್ದೇಶ ಪದವಿಯೊಂದಿಗೆ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅತ್ಯುತ್ತಮವಾದಂತಹ ಉದ್ಯೋಗವನ್ನು ಸೃಷ್ಠಿಸಿಕೊಳ್ಳುವುದಕ್ಕೆ ಪೂರಕವಾದ ಶಿಕ್ಷಣ ನೀಡುವುದು ಇಂದಿನ ಶಿಕ್ಷಣದ ಮೇಲಿರುವ ಮಹತ್ವದ ಜವಬ್ಧಾರಿ ಆಗಿದೆ ಎಂದರು. ಈ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಲವಾರು ಪ್ರಯತ್ನ ಮಾಡುತ್ತಾ ಬಂದಿದೆ. ಮೊದಲ ಪ್ರಯತ್ನ ಎಂದರೇ ಈ ಹಾಸನ ಜಿಲ್ಲೆಗೆ ಒಂದು ಸುಯೋಗ ಎನ್ನಬಹುದು. ಎಡಿಬಿ ಟೀಮ್ ಎನ್ನುವುದು ಎಂದರೇ ಏಷ್ಯನ್ ಬ್ಯಾಂಕ್ ಡೆವಲಪ್ ಟೀಂ ಎಂದರ್ಥ. ಈ ಟೀಮ್ ಎನ್ನುವುದು ಉನ್ನತ ಕಾಲೇಜನ್ನು ಉನ್ನತಿಕರಣಗೊಳಿಸುವುದು. ಅವುಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವುದು, ನಿರ್ವಹಣೆ ಮಾಡುವುದು, ವಿದ್ಯಾರ್ಥಿಗಳಿಗೆ ಸ್ಕಿಲ್ ಗೆ ಸಂಭಂಧಿಸಿದ ಶಿಕ್ಷಣ ನೀಡುವ ಉದ್ದೇಶದಿಂದ ಒಂದು ವಿಶೇಷವಾದಂತಹ ಕಾರ್ಯಕ್ರಮ ಆಯೋಜಿಸಿಕೊಂಡಿದೆ. ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ಂಆಃ) ನಡುವೆ ಆಗಿರುವ ಒಡಂಬಡಿಕೆಯ ಭಾಗವಾಗಿ ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.


ಹಳೆಯ ವಿದ್ಯಾರ್ಥಿ ಸಂಘದ ಪರವಾಗಿ ಮಾತನಾಡಿದ ಡಾ. ಡಿ.ಜಿ. ಕೃಷ್ಣೇಗೌಡ ಅವರು, ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಅವಶ್ಯಕವಾದ ಹಣಕಾಸಿನ ನೆರವನ್ನು ನೀಡಬೇಕೆಂದು ಎಡಿಬಿ ತಜ್ಞರ ಸಮಿತಿಗೆ ಮನವರಿಗೆ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಚೀನಾ, ಹಾಂಕ್ ಕಾಂಗ್, ಮಲೇಷ್ಯಾ, ಜಪಾನ್ ಎಡಿಬಿ ಸದಸ್ಯರುಗಳಾದ ಫೂಕ್ ಎನ್ ಚಾಂಗ್, ಮೊಹಮ್ಮದ್ ಫೈಜ್ ಶೌಲ್ ಹಮೀದ್, ನಹ್ಯೂಮ್ ಕಿಮ್, ಪೂನಂ ಶರ್ಮಾ ಬಾಂಬ್ರಿ, ಶೌನ್ ಎಂ ವೆಲ್ ಬೌರ್ನ್ ವುಡ್, ಯಶಪಾಲ್ ಮಲ್ಲಿಕ್, ಸ್ಯಾಮ್ಯೂಯಲ್ ಕೆ ಯಂಗ್, ಡೇವಿಡ್ ಮತ್ತು ಲೇಹ್ ಮ್ಯಾಕ್ ಮ್ಯಾನಸ್ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಶೋಭ ಜಿ, ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಚಂದ್ರಶೇಖರ್ ಬಿ,ಶೈಕ್ಷಣಿಕ ಡೀನ್ ಡಿ.ಎಸ್. ರಾಜು, ಪರೀಕ್ಷಾ ನಿಯಂತ್ರಕ ಕೆ.ಡಿ.ಮುರಳೀಧರ್, ಪತ್ರಾಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ. ಕೆ.ವಿ. ಪಾರ್ಥೇಶ್, ಉಪನ್ಯಾಸಕರು, ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಅಧ್ಯಾಪಕ ವೃಂದದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page