Wednesday, June 18, 2025

ಸತ್ಯ | ನ್ಯಾಯ |ಧರ್ಮ

ಮೂವರು ಗ್ರಾಮಸ್ಥರನ್ನು ಕತ್ತು ಹಿಸುಕಿ ಕೊಂದು, ಏಳು ಜನರನ್ನು ಅಪಹರಿಸಿದ ನಕ್ಸಲರು

ಮಂಗಳವಾರ ಸಂಜೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮೂವರು ಗ್ರಾಮಸ್ಥರನ್ನು ಕೊಂದರು. ಪೆದ್ದಕೋರ್ಮಾ (ನಯಪಾರ) ಗ್ರಾಮದ ಮೂವರು ಸಂತ್ರಸ್ತರನ್ನು ಹಗ್ಗಗಳಿಂದ ಕ್ರೂರವಾಗಿ ಕತ್ತು ಹಿಸುಕಿ ಕೊಂದಿದ್ದಾರೆ. ಇನ್ನೂ ಏಳು ಜನರನ್ನು ಅಪಹರಿಸಿರುವುದಾಗಿಯೂ ವರದಿಗಳಿವೆ. ಇವರಲ್ಲಿ ಕೆಲವರು ಇತ್ತೀಚೆಗೆ ಪೊಲೀಸರಿಗೆ ಶರಣಾದ ನಕ್ಷಲ್‌ ನಾಯಕರ ಕುಟುಂಬದವರು ಎಂದೂ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಯು ಸ್ಥಳೀಯರಲ್ಲಿ ಭಯವನ್ನು ಹರಡಲು ನಕ್ಸಲರು ಮಾಡಿದ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಪ್ರಸ್ತುತ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎಡಪಂಥೀಯ ಉಗ್ರವಾದದ ಕೇಂದ್ರವಾಗಿರುವ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ಚಳುವಳಿಯನ್ನು ನಿರ್ಮೂಲನೆ ಮಾಡುವಲ್ಲಿ ಭದ್ರತಾ ಪಡೆಗಳು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿವೆ. ಈ ಹಂತದಲ್ಲಿ ಇಂತಹ ದಾಳಿ ನಡೆದಿರುವುದು ಗಮನಾರ್ಹ.

“ಮಾವೋವಾದಿ ಚಳುವಳಿ ಕೊನೆಯ ಕ್ಷಣಗಳಲ್ಲಿದೆ. ಅವರ ನಾಯಕತ್ವವು ಛಿದ್ರಗೊಂಡಿದ್ದು ನಕ್ಷಲರು ಹತಾಶರಾಗಿದ್ದಾರೆ. ದಂಡಕಾರಣ್ಯಂ ವಲಯದಲ್ಲಿ ಕೇವಲ 300 ಸಶಸ್ತ್ರ ಕಾರ್ಯಕರ್ತರು ಮಾತ್ರ ಉಳಿದಿದ್ದಾರೆ. ಅವರು ಶರಣಾಗಬೇಕು ಅಥವಾ ನಿರ್ಣಾಯಕ ಯುದ್ಧಕ್ಕೆ ಸಿದ್ಧರಾಗಿರಬೇಕು ” ಎಂದು ಬಸ್ತಾರ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಹೇಳಿದರು.

ಈ ತಿಂಗಳ ಆರಂಭದಲ್ಲಿ ಬಿಜಾಪುರ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಕೇಂದ್ರ ಸಮಿತಿ ಸದಸ್ಯ ಸುಧಾಕರ್ ಅವರನ್ನು ಕೊಂದಿವೆ.

ಸುಧಾಕರ್ ಮೇಲೆ ಈಗಾಗಲೇ 40 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಅಬುಜ್‌ಮದ್‌ನ ದಟ್ಟ ಕಾಡುಗಳಲ್ಲಿ ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅವರನ್ನು ಕೊಂದ ನಂತರ ಸುಧಾಕರ್ ಅವರನ್ನು ಸಹ ಕೊಲ್ಲಲಾಯಿತು. 1970 ರಿಂದ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಕೇಶವ ರಾವ್ ವಿರುದ್ಧ 1.5 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page