Wednesday, June 25, 2025

ಸತ್ಯ | ನ್ಯಾಯ |ಧರ್ಮ

ಪ್ರಿಯಾಂಕ ಖರ್ಗೆ ಅಮೇರಿಕಾ ಪ್ರವಾಸಕ್ಕೆ ನಿರಾಕರಣೆ, ಇದು ದಲಿತ ವಿರೋಧಿ ನೀತಿ – DSS

ಹಾಸನ : ಇಲಾಖೆವತಿಯಿಂದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಅಮೇರಿಕಾ ಪ್ರವಾಸಕ್ಕೆ ಹೊರಟಿರುವುದಕ್ಕೆ ಬಿಜೆಪಿ ಮತ್ತು ಕೇಂದ್ರ ಸರಕಾರದವರು ಅನುಮತಿ ನಿರಾಕರಿಸಿರುವುದನ್ನು ಖಂಡಿಸುವುದಾಗಿ ವಕೀಲರಾದ ಬಿ.ಸಿ. ರಾಜೇಶ್ ಸಿಡಿಮಿಡಿಗೊಂಡರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮೇರಿಕಾದಲ್ಲಿ ನಡೆಯುವ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವುದರ ಮೂಲಕ ಈ ರಾಜ್ಯಕ್ಕೆ ಬಂಡವಾಳವನ್ನು ಆಕರ್ಷಣೆ ಮಾಡುವ ಉದ್ದೇಶದಲ್ಲಿ ಈರಾಜ್ಯಕ್ಕೆ ಉದ್ಯೋಗ ಸೃಷ್ಠಿ ಮಾಡುವ ನಿಟ್ಟಿನಲ್ಲಿ ಇಲಾಖೆವತಿಯಿಂದ ಸಚಿವೆ ಪ್ರಿಯಾಂಕ ಖರ್ಗೆ ಅವರು ಅಮೇರಿಕ ಪ್ರವಾಸ ಕೈಗೊಳ್ಳುತ್ತಾರೆ. ಅವರು ಮೋಜು, ಮಸ್ತಿ ಮಾಡಲು ಹೊರಟವರಲ್ಲ. ಆದರೇ ಈ ಒಂದು ಕಾರ್ಯ ವೈಖರಿ ಕಂಡು ಬಿಜೆಪಿಯವರು ಈ ಪ್ರವಾಸ ತಪ್ಪಿಸುವ ಏಕ ಉದ್ದೇಶದಲ್ಲಿ ಅವರಿಗೆ ಪ್ರವಾಸದ ಅನುಮತಿ ನಿರಾಕರಿಸಿದ್ದಾರೆ ಎಂದರು. ರಾಜ್ಯದ ಒಳಿತಿಗಾಗಿ ಅಮೆರಿಕಕ್ಕೆ ತೆರಳುತ್ತಿದ್ದರೆ ಹೊರತು ಮಜಾ ಮಾಡಲು ಅಲ್ಲ. ಬಂಡವಾಳ ಹೂಡಿಕೆ ಉದ್ದೇಶದಿಂದ ಸಚಿವರು ಅಲ್ಲಿಗೆ ತೆರಳುತ್ತಿದ್ದರು. ದಲಿತರು ಬೆಳೆಯಬಾರದು ಎನ್ನುವುದೇ ಬಿಜೆಪಿ ಉದ್ದೇಶವಾಗಿದೆ. ಇದರಿಂದ ರಾಜ್ಯದಲ್ಲಿ ಉದ್ಯೋಗ ಸೃಷ್ಠಿ ನಿಂತು ಹೋಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಇದರ ಲಾಸನ್ನು ತಂದು ಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು. ಇದು ರಾಜ್ಯಕ್ಕೆ ಮಾಡಿರುವ ಅನ್ಯಾಯ. ಮೋದಿ ಒಬ್ಬರೇ ವಿದೇಶ ಪ್ರವಾಸ ಮಾಡಬೇಕಾ. ಹಿಂದುಳಿದ ವರ್ಗದ ಯಾರೂ ತಮ್ಮ ಪಾಂಡಿತ್ಯ ಪ್ರದರ್ಶಿಸಬಾರದಾ? ತಾವು ಮಾತ್ರ ಶ್ರೇಷ್ಠ ಎಂಬ ಭಾವನೆ ಬಿಜೆಪಿ ಅವರಿಗಿದೆ ಎಂದು ಹೇಳಿದರು.


ದಲಿತ ಹಿರಿಯ ಮುಖಂಡರಾದ ಎಚ್.ಕೆ. ಸಂದೇಶ್ ಮಾತನಾಡುತ್ತಾ, ಮಲ್ಲಿಕಾರ್ಜುನವರು ಎಂದು ಕಪ್ಪು ಕಲೆ ಇಟ್ಟಿಕೊಳ್ಳದೇ ರಾಜ್ಯ ಸಭೆಯ ಬಗ್ಗೆ ಚರ್ಚೆಯನ್ನು ಗಂಬೀರವಾಗಿ ಮಾಡುತ್ತಿದ್ದಾರೆ. ಅವರ ಮಗ ಪ್ರಿಯಾಂಕ ಖರ್ಗೆ ಅವರನ್ನು ಈರೀತಿ ಪ್ರವಾಸ ತಡೆಯುವುದು ಸರಿಯಲ್ಲ. ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಅಮೇರಿಕಾ ಪ್ರವಾಸ ನಿಕಾರಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ. ಈ ದೇಶದಲ್ಲಿ ದಲಿತರು ವಿದೇಶ ಪ್ರವಾಸ ಮಾಡಬಾರದು ಎಂಬ ಕಾನೂನು ಇದೆಯಾ? ಪ್ರಧಾನಿ ಮೋದಿ ಅವರು ಮಾತ್ರ ಲಕ್ಷಾಂತರ ಬೆಲೆ ಬಾಳುವ ಶೂಟು ಬೂಟು ಧರಿಸಿ ವಿದೇಶ ಪ್ರವಾಸ ಮಾಡುತ್ತಾರೆ.ಅದೇ ಒಬ್ಬ ದಲಿತ ಸಚಿವ ವಿದೇಶ ಪ್ರವಾಸಕ್ಕೆ ಅನುಮತಿ ಕಳಿದರೆ ನಿರಾಕರಣೆ ಮಾಡಿದ್ದಾರೆ ಎಂದು ದೂರಿದರು. ಯಾವುದೇ ಕಾರಣವಿಲ್ಲದೇ ಈ ರೀತಿ ಅವಮಾನ ಮಾಡಿರುವುದು ಭಾರತ ದೇಶಕ್ಕೆ ಮಾಡಿರುವ ಅಪಮಾನ ಎಂದು ಕಿಡಿಕಾರಿದರು. ಜಯಾಶಂಕರ್ ಮತ್ತು ಅಲ್ಲಿನ ಕಾರ್ಯದರ್ಶಿ ವಿರುದ್ಧ ಕೇಸನ್ನು ದಾಖಲು ಮಾಡುವಂತೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ದೇವರಾಜ್, ಪರಮೇಶ್, ಪುಟ್ಟಯ್ಯ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page