ಮಹಾ ಕುಂಭಮೇಳದ ದಾರಿಯಲ್ಲಿ ಮತ್ತೊಂದು ದುರಂತ; ಬಸ್-ಟ್ರಕ್ ಡಿಕ್ಕಿ, ಏಳು ಭಕ್ತರ ಸಾವು

ಮಹಾ ಕುಂಭಮೇಳದ ದಾರಿಯಲ್ಲಿ ಮತ್ತೊಂದು ದುರಂತ; ಬಸ್-ಟ್ರಕ್ ಡಿಕ್ಕಿ, ಏಳು ಭಕ್ತರ ಸಾವು

ಮಹಾ ಕುಂಭಮೇಳದ ಹಾದಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡಿ ಮಿನಿ ಬಸ್‌ನಲ್ಲಿ ಹಿಂತಿರುಗುತ್ತಿದ್ದ ಭಕ್ತರನ್ನು ಟ್ರಕ್ ರೂಪದಲ್ಲಿ ಸಾವು ಬೆನ್ನಟ್ಟಿದೆ.

ಮಧ್ಯಪ್ರದೇಶದ ಜಬಲ್ಪುರ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ಸೊಂದು ತುಂಡಾಗಿದೆ. ಈ ಅಪಘಾತದಲ್ಲಿ ಏಳು ಭಕ್ತರು ಪ್ರಾಣ ಕಳೆದುಕೊಂಡರು. ಅನೇಕ ಜನರು ಗಾಯಗೊಂಡಿರುವುದಾಗಿ ಸುದ್ದಿ ಬರುತ್ತಿದೆ. ಮಾಹಿತಿ ತಿಳಿದ ತಕ್ಷಣ ಜಬಲ್ಪುರ ಕಲೆಕ್ಟರ್ ಮತ್ತು ಎಸ್‌ಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಮಂಗಳವಾರ ಬೆಳಿಗ್ಗೆ 9:15 ಕ್ಕೆ ಮೊಹ್ಲಾ-ಬರ್ಗಿ ಬಳಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಬಸ್ ಆಂಧ್ರಪ್ರದೇಶಕ್ಕೆ ಸೇರಿದ್ದೆಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಪ್ರಯಾಗ್‌ರಾಜ್‌ಗೆ ಹೊರಟ ಭಕ್ತರಿಂದ ಎಲ್ಲಾ ರಸ್ತೆಗಳು ಈಗಾಗಲೇ ತುಂಬಿವೆ. ಇತ್ತೀಚಿನ ಅಪಘಾತದಿಂದಾಗಿ NH-30 ರಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಜಾಗೃತರಾದ ಪೊಲೀಸರು ಪ್ರದೇಶವನ್ನು ತೆರವುಗೊಳಿಸುತ್ತಿದ್ದಾರೆ.

ಏತನ್ಮಧ್ಯೆ, ಉತ್ತರ ಪ್ರದೇಶದ ಆಗ್ರಾದ ಚಿತ್ರಹತ್ ಪ್ರದೇಶದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಕುಂಭಮೇಳದಿಂದ ಹಿಂತಿರುಗುತ್ತಿದ್ದ ಕಾರು ಸಹಾಯಪುರ ಗ್ರಾಮದ ಬಳಿ ಟ್ರಕ್‌ಗೆ ಡಿಕ್ಕಿ ಹೊಡೆದು ದಂಪತಿಗಳು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಮಹೇಂದ್ರ ಪ್ರತಾಪ್ (50) ಮತ್ತು ಅವರ ಪತ್ನಿ ಭೂರಿ ದೇವಿ (48) ಎಂದು ಗುರುತಿಸಲಾಗಿದೆ. ಸೋಮವಾರ, ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಡಿಶಾದ ರೂರ್ಕೆಲಾದ 34 ವರ್ಷದ ಶಕ್ತಿಂ ಪೂಜಾರಿ ಸಾವನ್ನಪ್ಪಿದರು ಮತ್ತು ಇತರ ಆರು ಮಂದಿ ಗಾಯಗೊಂಡರು.
https://x.com/ians_india/status/1889179543262355852

Related Articles

ಇತ್ತೀಚಿನ ಸುದ್ದಿಗಳು