ಧಾರ್ (ಮಧ್ಯಪ್ರದೇಶ): ಎರಡು ಬೈಕ್ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸ್ನೇಹಿತನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಮನನೊಂದು ಅಪಘಾತ ನಡೆದ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಧಾರ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಾಂತಿ (29) ಎಂದು ಗುರುತಿಸಲಾಗಿದೆ. ಇಂದೋರ್-ಅಹಮದಾಬಾದ್ ಹೆದ್ದಾರಿಯಲ್ಲಿ ಕಾಂತಿ ಹಾಗೂ ಆತನ ಸ್ನೇಹಿತ ನರ್ವೆ ಸಿಂಗ್ ಪ್ರಯಾಣಿಸುತ್ತಿದ್ದ ಬೈಕ್ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಸಿಂಗ್ ಮೃತಪಟ್ಟಿದ್ದರು. ಆದರೆ ಕಾಂತಿ ಬದುಕುಳಿದಿದ್ದರು.
ಆದರೆ, ಸ್ನೇಹಿತನ ಸಾವಿನಿಂದ ಮನನೊಂದ ಕಾಂತಿ, ಸ್ವಲ್ಪ ಹೊತ್ತು ದಿಕ್ಕಿಲ್ಲದವನಂತೆ ಅಲ್ಲೆ ಅಳ್ಳುತ್ತಾ ಕುಳಿತಿದ್ದ. ಕೊನೆಗೆ ಮೊಬೈಲ್ ತೆಗೆದುಕೊಂಡು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಸಿಂಗ್ ನನ್ನ ಒಳ್ಳೆಯ ಗೆಳೆಯನಾಗಿದ್ದ. ಅವನು ನಾನೂ ಯಾವಾಗಲೂ ಜೊತೆಗೆ ಇರುತ್ತಿದ್ದೇವು. ಅವನನ್ನು ಬಿಟ್ಟು ಬದುಕುವ ಶಕ್ತಿ ನನ್ನಲ್ಲಿಲ್ಲ. ಹೀಗಾಗಿ ನಾನು ಕೂಡ ಸಾಯುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ, ನಂತರ ಸ್ವಲ್ಪ ದೂರದಲ್ಲಿದ್ದ ಮರದ ಹತ್ತಿರಕ್ಕೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.