Tuesday, July 1, 2025

ಸತ್ಯ | ನ್ಯಾಯ |ಧರ್ಮ

ಸುಧಾಮೂರ್ತಿ | ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ: ನಟ ಚೇತನ್

ಬೆಂಗಳೂರು: ವಿದೇಶಗಳಲ್ಲಿ ಮಾಂಸಾಹಾರಿ ಅಡುಗೆ ಮತ್ತು ಸಸ್ಯಾಹಾರಿ ಅಡುಗೆಗಳಿಗೆ ಒಂದೇ ಚಮಚ ಬಳಸಿದ್ದರೆ ನನಗೆ ಹೇಗೆ ಗೊತ್ತಾಗುತ್ತದೆ? ಹೀಗಾಗಿ ತಾನು ವಿದೇಶಗಳಿಗೆ ಹೋಗುವಾಗ ಮನೆಯ ಆಹಾರವನ್ನೇ ಕೊಂಡೊಯ್ಯುತ್ತೇನೆ ಎನ್ನುವ ಮೂಲಕ ಮೊನ್ನೆಯಿಂದ ಸುದ್ದಿಯ ಮೂಲವಾಗಿರುವ ಸುಧಾಮೂರ್ತಿಯವರು ಈಗ ಸೋಷಿಯಲ್‌ ಮೀಡಿಯಾ ತುಂಬಾ ತಮ್ಮ ಹೇಳಿಕೆಯಿಂದಾಗಿ ಟ್ರೋಲ್‌ ಆಗುತ್ತಿದ್ದಾರೆ.

ಈ ಕುರಿತು ಕನ್ನಡ ಚಿತ್ರನಟ ಹಾಗೂ ಚಿಂತಕ ಚೇತನ್‌ ಹೇಳಿಕೆ ನೀಡಿದ್ದು, “

ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ

ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು …

ಅವರ ಆಸ್ತಿ ಜಗದಗಲ — ತಿಳುವಳಿಕೆ ಚಮಚದಗಲ” ಎಂದು ಟೀಕಿಸಿದ್ದಾರೆ.

https://www.facebook.com/plugins/post.php?href=https%3A%2F%2Fwww.facebook.com%2Fchetanahimsa%2Fposts%2Fpfbid0GYcX2AJan3Wehuhk7vWhjuUtruD7HrNxBSU5yvgJpPJYwx34zS8UZ1it8kzsqHkil&show_text=true&width=500

ಆಹಾರ ಶ್ರೇಷ್ಟತೆಯ ಕುರಿತಾದ ಚರ್ಚೆಗಳು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತವೆ. ಸುಧಾ ಮೂರ್ತಿ ತಮ್ಮ ಆಹಾರ ಶ್ರೇಷ್ಟತೆಯನ್ನು ತೋರಿಸಿಕೊಳ್ಳುವ ಭರದಲ್ಲಿ ತಾನು ಎಷ್ಟು ಶ್ರೇಷ್ಠ ಸಸ್ಯಾಹಾರಿಯೆನ್ನುವುದನ್ನು ಪ್ರೂವ್‌ ಮಾಡಲು ಹೇಳಿಕೆ ಕೊಟ್ಟು ಈಗ ನಗೆ ಪಾಟಲಿಗೀಡಾಗಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page