ಚೆನ್ನೈ: ಹಿರಿಯ ನಟ ಹಾಗೂ ಡಿಎಂಡಿಕೆ ನಾಯಕ ವಿಜಯಕಾಂತ್ ಅವರು ಗುರುವಾರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರು ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಇಂದು ಬೆಳಿಗ್ಗೆಯಿಂದ ವೆಂಟಿಲೇಟರ್ ಬೆಂಬಲದೊಂದಿಗೆ ಸಾವಿನ ವಿರುದ್ಧ ಹೋರಾಡುತ್ತಿದ್ದರು.
ಡಿಎಂಡಿಕೆ ಸಂಸ್ಥಾಪಕ ನಾಯಕ ಮತ್ತು ಮಾಜಿ ಶಾಸಕ ಮಂಗಳವಾರ ನ್ಯುಮೋನಿಯಾಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ನಂತರ ವೆಂಟಿಲೇಟರಿ ಬೆಂಬಲದಲ್ಲಿದ್ದರು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು 28 ಡಿಸೆಂಬರ್ 2023 ರ ಬೆಳಿಗ್ಗೆ ನಿಧನರಾದರು.

ತಮಿಳುನಾಡಿನಾದ್ಯಂತ ಅವರ ಅಭಿಮಾನಿಗಳ ದುಃಖ ಮುಗಿಲು ಮುಟ್ಟಿದ್ದು, ಹಲವಾರು ಅಭಿಮಾನಿಗಳು ಚೆನ್ನೈ ಕಡೆ ಧಾವಿಸುತ್ತಿದ್ದಾರೆ. ರಾಜಕೀಯವಾಗಿಯೂ ಸಕ್ರಿಯರಾಗಿದ್ದ ವಿಜಯಕಾಂತ್ ತಮಿಳುನಾಡಿನಲ್ಲಿ ತಮ್ಮದೇ ಆದ ಚಾಪನ್ನು ಒತ್ತಿದ್ದು, ಅವರ ಸಾಧನೆಯ ಪಟ್ಟಿಯಲ್ಲಿ ಹಲವು ತಮಿಳು ಚಲನಚಿತ್ರಗಳೂ ಸೇರಿವೆ.