ಕರ್ನಾಟಕದಲ್ಲಿ ಸೋಲಿಗೆ ಕಾರಣವಾಗಿ ಈಗ ತಮಿಳುನಾಡಿನಲ್ಲಿ ಬಿಜೆಪಿಗೆ ಬಿಸಿತುಪ್ಪವಾಗುತ್ತಿರುವ ಮಾಜಿ ಪೋಲಿಸಪ್ಪ ಅಣ್ಣಾಮಲೈ
AIADMK: ತಮಿಳುನಾಡಿನ AIADMK ಪಕ್ಷವು ಆಘಾತಕಾರಿ ನಿರ್ಧಾರ ಕೈಗೊಂಡಿದೆ. ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳುತ್ತಿರುವುದಾಗಿ ಘೋಷಿಸಿದ್ದಲ್ಲದೆ, ಎನ್ಡಿಎಯಿಂದ ಹಿಂದೆ ಸರಿಯುತ್ತಿರುವುದಾಗಿಯೂ ಘೋಷಿಸಿದ್ದಾರೆ.
ದಕ್ಷಿಣದಲ್ಲಿ ಬಿಜೆಪಿಯ ಮಿತ್ರಪಕ್ಷ ಹಾಗೂ NDA ಪಾಲುದಾರ ಪಕ್ಷವಾಗಿರುವ AIADMK ಮಹತ್ವದ ನಿರ್ಧಾರ ಕೈಗೊಂಡಿದೆ. ಇಷ್ಟು ವರ್ಷ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಘೋಷಿಸಿದೆ. ತಮಿಳುನಾಡು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ಉದ್ಯಮಿ ಸಿಎನ್ ಅಣ್ಣಾದೊರೈ ವಿರುದ್ಧ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ವಿವಾದಾತ್ಮಕ ಹೇಳಿಕೆಗಳು ಎರಡು ಪಕ್ಷಗಳ ನಡುವಿನ ಮೈತ್ರಿ ಮುರಿದು ಬೀಳಲು ಕಾರಣವಾಗಿದೆ.
1956ರಲ್ಲಿ ಮಧುರೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಣ್ಣಾದೊರೈ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಎಂಬ ಆರೋಪ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಅಣ್ಣಾಮಲೈ ಪಕ್ಷವು ಅಣ್ಣಾದೊರೈ ಅವರನ್ನು ಮರೆಮಾಚಿ, ಕ್ಷಮೆ ಕೇಳಿ ಪರಾರಿಯಾಗಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ದಿವಂಗತ ಮುಖ್ಯಮಂತ್ರಿಗೆ ಅವಮಾನ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು AIADMK ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ನಾಯಕರ ಟೀಕೆಗಳನ್ನು ನಾವೇಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡಿನಲ್ಲಿ BJP ಸ್ಥಾನ ಎಲ್ಲಿದೆಯೆನ್ನುವುದು ನಮಗೆ ಗೊತ್ತಿದೆ, ಅವರಿಂದ ನಮಗೆ ಆಗಬೇಕಿರುವುದು ಏನೂ ಇಲ್ಲ ಎಂದು ಅಲ್ಲಿನ ನಾಯಕರು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿನ ನಷ್ಟವನ್ನು ತಮಿಳುನಾಡಿಲ್ಲಿ AIADMK ಜೊತೆ ಚುನಾವಣೆ ಎದುರಿಸಿ ಒಂದಷ್ಟು ಸೀಟು ಗೆಲ್ಲುವ ಕನಸು ಕಾಣುತ್ತಿದ್ದ ಬಿಜೆಪಿಗೆ ಈಗ ದೊಡ್ಡ ಆಘಾತವೇ ಎದುರಾಗಿದೆ. ಅದಿನ್ನೂ ಕರ್ನಾಟಕದ ಸೋಲಿನ ಗಾಯವನ್ನು ನೆಕ್ಕಿ ವಾಸಿ ಮಾಡಿಕೊಳ್ಳುತ್ತಿರುವಾಗಲೇ ತಮಿಳುನಾಡಿನ ಪಕ್ಷ ಅದಕ್ಕೆ ಮರ್ಮಾಘಾತವನ್ನೇ ನೀಡಿದೆ.
ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣರಾದವರಲ್ಲಿ ಒಬ್ಬರಾದ ಮಾಜಿ ಪೊಲೀಸ್ ಅಣ್ಣಾಮಲೈ ತಮಿಳುನಾಡಿಲ್ಲೂ ಅದಕ್ಕೆ ಗುಂಡಿ ತೋಡಿರುವುದು ರಾಜಕೀಯ ಅಸಕ್ತರ ಹುಬ್ಬೇರಿಸಿದೆ.