Wednesday, May 1, 2024

ಸತ್ಯ | ನ್ಯಾಯ |ಧರ್ಮ

ಅಕ್ರಮ ಗೋಮಾಂಸ ಸಾಗಣೆ : ಐವರ ಬಂಧನ

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು 3,10, 800 ರೂ ಮೌಲ್ಯದ 2,220 ಕೆಜಿ ಗೋಮಾಂಸವನ್ನು ಜಪ್ತಿ ಮಾಡಿದ್ದಾರೆ.

ಉತ್ತರ ಕನ್ನಡದಲ್ಲಿ ಐದು ಜನ ಸೇರಿ ಸುಮಾರು 3,10, 800 ರೂ ಮೌಲ್ಯದ 2,220 ಕೆಜಿ ಗೋಮಾಂಸವನ್ನು ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವೇಳೆ ಜೋಯಿಡಾ ತಾಲ್ಲೂಕಿನ ಅನಮೋಡ್ ಚೇಕ್ ಪೋಸ್ಟ್ ನ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಹೇಂದ್ರ ಪಿಕಪ್ ವಾಹನ ಸಮೇತ ಗೋಮಾಂಸವನ್ನು ವಶಕ್ಕೆ ಪಡೆದಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಜೋಯಿಡಾ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಳ್ನಾವರ ಮೂಲದ ಸಾದಿಕ್, ದಾವಲಮಲಿಕ್, ಖಾನಾಪುರ ಮೂಲದ ಶಾಹಿದ್, ಇಲಿಯಾಸ್ ಮತ್ತು ರಾಜಾಸಾಬ್ ಬಂಧಿತ ಆರೋಪಿಗಳಾಗಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ದೇಶ ವಿಭಜನೆಯಾಗಿದ್ದು ಗಾಂಧೀಜಿಯವರು ಮತ್ತು ನೆಹರು ರವರಿಂದ ಎಂಬ ಹಸಿ ಸುಳ್ಳನ್ನ ಹೊತ್ತು ಮೆರೆಸುತ್ತಿದ್ದಾರೆ

ದೇಶ ವಿಭಜನೆಯ ಹಿಂದಿನ ನೈಜ ಸತ್ಯವೇನು ಎಂಬುದನ್ನ ತಿಳಿಯಲು ಈ ವೀಡಿಯೋ ನೋಡಿ

peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ

https://fb.watch/fVbRq_9xvi/

Related Articles

ಇತ್ತೀಚಿನ ಸುದ್ದಿಗಳು