Wednesday, June 25, 2025

ಸತ್ಯ | ನ್ಯಾಯ |ಧರ್ಮ

ಮೋದಿ ಸಂಪುಟದಲ್ಲಿ ಹೌದಪ್ಪಗಳೇ ತುಂಬಿಕೊಂಡಿದ್ದಾರೆ!: ಸುಬ್ರಹ್ಮಣ್ಯ ಸ್ವಾಮಿ

ಹೊಸದಿಲ್ಲಿ, ಮೇ 6: ಲೋಕಸಭೆ ಚುನಾವಣೆ ನಿರ್ಣಾಯಕ ಹಂತ ತಲುಪಿರುವಂತೆಯೇ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಮೋದಿ ಸರಕಾರದ ವಿರುದ್ಧ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ಮೋದಿ ಸಂಪುಟದಲ್ಲಿ ಇಬ್ಬರನ್ನು (ರಾಜನಾಥ್ ಮತ್ತು ಗಡ್ಕರಿ) ಹೊರತುಪಡಿಸಿ ಉಳಿದವರೆಲ್ಲ ‘ಹೌದಪ್ಪಗಳು’ ಎಂದು ಅವರು ಟೀಕಿಸಿದ್ದಾರೆ. ಜೊತೆಗೆ ಲಡಾಖ್‌ ವಿಷಯದಲ್ಲಿ ಕೇಂದ್ರವು ಪ್ರಾಮಾಣಿಕವಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ಚುನಾವಣಾ ಬಾಂಡ್ ಯೋಜನೆ ಅತ್ಯಂತ ದೊಡ್ಡ ಹಗರಣವಾಗಿದ್ದು, ಪ್ರಧಾನಿ ಮೋದಿ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಸುಬ್ರಹ್ಮಣ್ಯ ಸ್ವಾಮಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

ಮೋದಿ ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳ ಬಗ್ಗೆ ಮಾತನಾಡುತ್ತಾ, ಅವರ್ಯಾರೂ ಮಂತ್ರಿಯಾಗಲು ಅರ್ಹರಲ್ಲ. ರಾಜನಾಥ್ ಮತ್ತು ಗಡ್ಕರಿ ಅವರನ್ನು ಹೊರತುಪಡಿಸಿ ಸಚಿವ ಸಂಪುಟದಲ್ಲಿ ಉಳಿದವರೆಲ್ಲರೂ ಬೆನ್ನುಮೂಳೆಯಿಲ್ಲದವರು. ಅಂತಹವರನ್ನು ಮೋದಿ ಆಯ್ಕೆ ಮಾಡಿದ್ದಾರೆ’ ಎಂದು ಸ್ವಾಮಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page