Saturday, June 21, 2025

ಸತ್ಯ | ನ್ಯಾಯ |ಧರ್ಮ

ಮೇ.20ರ ಕಾರ್ಮಿಕರ ಮುಷ್ಕರ ಯಶಸ್ವಿಯಾಗಲು ಕಾರ್ಮಿಕರು ರಸ್ತೆಗಿಳಿದು ಹೋರಾಟ : ಧರ್ಮೇಶ್ ಕರೆ

ಮೇ.20 ರಸ್ತೆ ಗಿಳಿದು ಹೋರಾಟದ ಮೂಲಕ ಬಂಧನಕ್ಕೆ ಒಳಗಾಗಲು
ಮೇ.1ರ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಧರ್ಮೆಶ್ ಕರೆ

ಹಾಸನ : ನಗರದ ಮಹಾವೀರ ವೃತ್ತದಲ್ಲಿ ಗುರುವಾರ ಅಂತರಾಷ್ಟಿಯ ಕಾರ್ಮಿಕ ಮೇ.1ರ ಕಾರ್ಮಿಕರ ದಿನದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕರ ಶ್ರಮ ಶಕ್ತಿ ಇಲ್ಲದೇ ಯಾವುದು ಉತ್ಪಾಧನೆ ಆಗುವುದಿಲ್ಲ. ಸಮಾಜದಲ್ಲಿ ನಿಜವಾದ ಉತ್ಪಾಧಕರು ಇದ್ದರೇ ಅವರೆ ಕಾರ್ಮಿಕರು, ಶ್ರಮಿಕರು ಮಾತ್ರ, ಯಾವುದೇ ಕಾರಣಕ್ಕೂ ಬಂಡವಾಳಗಾರರು ಅಲ್ಲ. ಭೂ ಮಾಲೀಕರಲ್ಲ. ಇವರು ಕೇವಲ ಬಂಡವಾಳ ಹೂಡುತ್ತಾರೆ ಹೊರತು ಭೂಮಿಗೆ ಬೆಲೆ ಬರಲು, ಉತ್ಪಾಧನೆ ಆಗುವುದು ಶ್ರಮಿಕರು ತಮ್ಮ ಶಕ್ತಿ ದಾರೆ ಎರೆದಾಗ ಮಾತ್ರ ಸಾಧ್ಯ. ಆದರೇ ಇಂತಹ ಶ್ರಮಿಕರ ಇಡೀ ಸಂಪತ್ತನ್ನು ಕೆಲವೇ ಜನರು ಹಿಡಿದು ಇಟ್ಟುಕೊಂಡಿದ್ದಾರೆ ಎಂದರು. ಇಡೀ ದೇಶದ ಶೇಕಡ 90 ರಷ್ಟು ಆಸ್ತಿ ಹತ್ತು ಜನರ ಕೈಲಿ ಸಿಕ್ಕಿಕೊಂಡಿದೆ. 70 ಗಂಟೆ, 90 ಗಂಟೆ ದುಡಿಯುವುದರಿಂದ ಕಾರ್ಮಿಕರು ಉದ್ಧಾರ ಆಗುವುದಿಲ್ಲ. ಮಾಲೀಕರು ಉದ್ಧಾರ ಆಗುತ್ತಾರೆ. ಸರಕಾರವು ಮಾಲೀಕರ ಪರವಾಗಿ ಕಾನೂನು ಮಾಡುತ್ತಿದೆ. ನಾಲ್ಕು ಕಾರ್ಮಿಕ ಸಮಿತಿಯನ್ನು ಸರಕಾರ ತರುತ್ತಿದ್ದು, ಇದರಿಂದ ಸಂಘ ಕಟ್ಟುವುದನ್ನು ನಿರಾಕರಿಸಲಾಗಿದೆ. ಮುಷ್ಕರ ಮಾಡಲು 90 ದಿನ ಮೊದಲೆ ತಿಳಿಸಬೇಕಾಗಿದೆ. ಬೀದಿ ಬದಿ ವ್ಯಾಪಾರರು ಸೇರಿದಂತೆ ಎಲ್ಲಾ ಕಾರ್ಮಿಕರು ಗಮನಹರಿಸಬೇಕಾಗಿದೆ. ಎಷ್ಟೆ ಶಕ್ತಿಯಿಂದ ದುಡಿದರು ಸರಿಯಾಘಿ ವೇತನ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸರಕಾರವು ಕನಿಷ್ಠ ವೇತನ ಕಾಯಿದೆಯನ್ನು ಬದಲಾವಣೆ ಮಾಡಿದೆ. ವೇತನ ಸಮಿತಿ ತಂದು ಅದರಲ್ಲಿ 175 ರೂ ನಿಗಧಿ ಮಾಡಿದೆ. ಇವತ್ತಿನ ಬೆಲೆ ಏರಿಕೆ ನೋಡಿದರೇ ಕನಿಷ್ಠ 35 ಸಾವಿರ ರೂ ಬೇಕಾಗಿದೆ ಎಂದು ಒತ್ತಾಯಿಸಿದರು. ದಿನದ 24 ಗಂಟೆ ದುಡಿದರೂ 35 ಸಾವಿರ ರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪೆಟ್ರೋಲ್, ಡಿಸೆಲ್, ಶಾಲೆಯ ಫೀಸ್ ಹೆಚ್ಚಾಗಿರುವುದರ ಜೊತೆಗೆ ದಿನನಿತ್ಯದ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೇ ಸಂಬಳ ಮಾತ್ರ ಅತೀ ಪಡಿಮೆ ಕೊಡಲಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಮೋದಿ ಸರಕಾರದ ಕಾರ್ಮಿಕ ವಿರೋಧಿ ನೀತಿ ವಾಪಸ್ ಮಾಡಬೇಕು. ಇಲ್ಲವಾದರೇ ಮುಂದೆ ಶ್ರಮಿಕರಿಗೆ ಉಳಿಗಾಲ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಶ್ರಮಿಕರು ಮತ್ತು ಬಡವರು ಉಳಿಯಬೇಕಾದರೇ ಮೇ.20ರ ಮುಷ್ಕರ ಯಶಸ್ವಿಯಾಗಬೇಕಾಗಿದೆ. ಮುಷ್ಕರದ ದಿನ ಯಾವುದೇ ಕಾರ್ಮಿಕರು ಕೆಲಸ ಮಾಡುವುದು ಬೇಡ. ಪ್ಯಾಕ್ಟರಿಗಳಲ್ಲಿ, ಕಛೇರಿಯಲ್ಲಿ ಸೇರಿದಂತೆ ಎಲ್ಲಾ ಕಡೆ ಕೆಲಸಗಳನ್ನು ಸ್ಥಗಿತಗೊಳಿಸಿ ಈ ಮುಷ್ಕರಕ್ಕೆ ಮುಂದಾಗಬೇಕು. ಸಾಮೂಹಿಕವಾಗಿ ರಸ್ತೆಗಿಳಿದು ಹೋರಾಟ ನಡೆಸಬೇಕಾಗಿದೆ.  ಮೇ. 20 ರಂದು ಸಾಮೂಹಿಕವಾಗಿ ರಸ್ತೆಗೆ ಇಳಿದು ಬಂಧನಕ್ಕೆ ಒಳಗಾಗಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದು ತಮ್ಮ ನಿರ್ಧಾರವನ್ನು ಇದೆ ವೇಳೆ ಬಹಿರಂಗಪಡಿಸಿದರು. 

ಕಾರ್ಮಿಕರು ಗುಲಾಮರಲ್ಲಾ, ಅವರು ಎಲ್ಲರಂತೆ ಮನುಷ್ಯರು, ಅವರಿಗೆ ದಿನದ 8 ಗಂಟೆ ಮಾತ್ರ ಕೆಲಸ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಮನರಂಜನೆ ಮತ್ತಿತರೆ ಚಟುವಟಿಕೆಗಳಿಗಾಗಿ ನಡೆದ ಐತಿಹಾಸಿಕ ಹೋರಾಟದ ನೆನಪಿನಲ್ಲಿ ಮೇ. 1ನ್ನು ಕಾರ್ಮಿಕರ ದಿನವನ್ನಾಗಿ ಜಗತ್ತೇ ಆಚರಿಸುತ್ತದೆ. 1886 ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಚಳುವಳಿಯಲ್ಲಿ ಪ್ರಾಣತೆತ್ತ ಹುತಾತ್ಮರ ನೆನಪಿನಲ್ಲಿ ಈ ದಿನವನ್ನ ಆಚರಿಸುತ್ತೇವೆ. ಇಂದಿನ ಕಾರ್ಮಿಕರನ್ನು ಆಳುವ ಸರ್ಕಾರಗಳು ಮತ್ತು ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಗುಲಾಮಗಿರಿಗೆ ತಳ್ಳುತ್ತಿದೆ. ಇದರ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಮೇ ದಿನಾಚರಣೆ ಬಹಳ ಮಹತ್ವವಾಗಿದೆ. ಕಾರ್ಮಿಕರ ಕೈಗೆ ವಿಮೋಚನೆಯ ಅಸ್ತçವನ್ನು ಕೊಟ್ಟ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹೀಗೆ ಹೇಳಿದ್ದಾರೆ. "ಜಗತ್ತಿನ ಕಾರ್ಮಿಕರೇ ಒಂದಾಗಿ, ಸಂಕೋಲೆಗಳಲ್ಲದೆ ಕಳೆದುಕೊಳ್ಳಲು ಶ್ರಮಜೀವಿಗಳಿಗೆ ಬೇರೇನಿಲ್ಲ, ಗೆಲ್ಲಲೊಂದು ಜಗತ್ತೇ ಇದೆ ಎಂದರು.

ಇದೆ ವೇಳೆ ಮೇ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಮಾದಿಗದಂಡೋರ ಹೋರಾಟ ಸಮಿತಿ ಅಧ್ಯಕ್ಷ ಟಿ.ಆರ್. ವಿಜಯಕುಮಾರ್, ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಷಿರ್ ಅಹಮದ್, ಸಂಚಾಲಕ ಸಯ್ಯಾದ್ ಅನ್ಸರ್, ಡಿ.ವೈ.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಸಂಚಾಲಕ ಅಯ್ಯಬ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page