ಹಾಸನ : ಕಾವೇರಿಗ್ರಾಮೀಣ ಬ್ಯಾಂಕಿನಲ್ಲಿ ಸಾಲವನ್ನು ಪಡೆದ ಶಾಂತೇಗೌಡರು ನಂತರ ಮೃತರಾಗಿದ್ದು, ನಂತರಅವರ ಮಗನಾದಜಿ.ಎಸ್. ಶಿವಕುಮಾರ್ ರವರಿಗೆಓಟಿ.ಎಸ್. ಮುಖಾಂತರ ಮರುಪಾವತಿ ಮಾಡಲು ಅವಕಾಶ ಮಾಡಿಕೊಟ್ಟು ಹಾಗೂ ಜಮೀನನ್ನು ಹರಾಜು ಹಾಕದೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ನಗರದಕೆ.ಆರ್. ಪುರಂನಲ್ಲಿರುವಕಾವೇರಿಗ್ರಾಮೀಣ ಬ್ಯಾಂಕ್ ಮುಂದೆರೈತರು ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಿದರು.
ಇದೆ ವೇಳೆ ರೈತರ ಸಂಘದಜಿಲ್ಲಾಧ್ಯಕ್ಷ ಮೂರ್ತಿಕಣಾಗಲ್ ಮಾಧ್ಯಮದೊಂದಿಗೆ ಮಾತನಾಡಿ, ದಿವಂಗತ ಶಾಂತೇಗೌಡರವರು ಮಾಡಿದ್ದ ಸಾಲವನ್ನು ಅವರು ತೀರಿಹೋದ ನಂತರ ಅವರ ಮಗನಾದ ಜಿ.ಎಸ್.ಶಿವಕುಮಾರ ಕಟ್ಟಲು ಬದ್ದರಾಗಿದ್ದು, ಓ.ಟಿ.ಎಸ್. ಮಾಡಿಕೊಡಿಎಂದು 2025 ಜನವರಿ ತಿಂಗಳಲ್ಲಿ ಅಡಗೂರು ಶಾಖೆಗೆ ಹೋಗಿ ಕೇಳಿದಾಗ ಅವರು 13 ಲಕ್ಷ ಹಣವನ್ನುಕಟ್ಟಿಎಂದು ಹೇಳಿರುತ್ತಾರೆ. ಆಗ ಶಿವಕುಮಾರ್ 7 ಲಕ್ಷಕಟ್ಟುವುದಾಗಿ ಹೇಳಿರುತ್ತಾರೆ. ನಂತರಅವರು ಹಾಸನದ ಮುಖ್ಯಕಛೇರಿಗೆ ಹೋಗಿ ಎಂದು ಹೇಳಿದರು.
ಶಿವಕುಮಾರ್ ಮುಖ್ಯಕಛೇರಿಗೆ ಹೋದಾಗ ವ್ಯವಸ್ಥಾಪಕರುಕಛೇರಿಯಲ್ಲಿಇಲ್ಲಎಂದು ಹೇಳಿದರು. ಆಗ ಶಿವಕುಮಾರ್ ಪುನಃ ಹೋದಾಗ ಲೋನ್ ಸೆಕ್ಷನ್ ನವರು 20 ಲಕ್ಷರೂಕಟ್ಟಿಎಂದು ಹೇಳಿದರು. ಆಗ ಶಿವಕುಮಾರ್ ಪ್ರಾದೇಶಿಕ ವ್ಯವಸ್ಥಾಪಕರನ್ನು ಭೇಟಿ ಮಾಡುತ್ತೇನೆಎಂದು ಹೇಳಿದೆನು. ಅವರು ಸಿಗದ ಕಾರಣ ಮತ್ತೆ ಹೋದಾಗ ಪ್ರಾದೇಶಿಕ ವ್ಯವಸ್ಥಾಪಕರು ಸಿಗಲಿಲ್ಲ ಆದಕಾರಣಶಿವಕುಮಾರ್ ಓ.ಟಿ.ಎಸ್. ಮುಖಾಂತರ ಬಗೆಹರಿಸಲು ಬದ್ದನಿದ್ದರೂ ಸಹ ಹಣ ಕಟ್ಟಿಸಿಕೊಳ್ಳದೆ ಅವರತಂದೆಯವರ ಹೆಸರಿನಲ್ಲಿರುವಜಮೀನನ್ನು ಹರಾಜು ಹಾಕಲು ಬ್ಯಾಂಕಿನವರು ಹೊರಟಿದ್ದಾರೆ. ಆದ್ದರಿಂದ ತಾವುಗಳು ಜಮೀನನ್ನು ಹರಾಜು ಹಾಕದ ಹಾಗೆ ತಡೆಹಿಡಿದು ಇವರ ಕುಟುಂಬ ಬೀದಿಪಾಲು ಆಗದ ಹಾಗೆ ಮಾಡಿ ಸದರಿ ಶಿವಕುಮಾರ್ರವರಿಗೆ ನ್ಯಾಯಕೊಡಿಸಬೇಕಾಗಿಕೋರುತ್ತೇನೆಎಂದು ಮನವಿ ಮಾಡಿದರು. 2025 ಮೇ 5 ರಂದು ಸಂಘದ ವತಿಯಿಂದ ಬ್ಯಾಂಕಿನ ಮುಂಭಾಗಧರಣಿ ಮಾಡಿದ ಸಂದರ್ಭದಲ್ಲಿ ಸಹ ಓ.ಟಿ.ಎಸ್. ಮುಖಾಂತರ ಬಗೆಹರಿಸಿಕೊಡುವುದಾಗಿ ಹೇಳಿದ್ದರು. ಅವರೂ ಸಹ ಇದುವರೆಗೆಯಾವುದೇಓ.ಟಿ.ಎಸ್. ಕೊಡದೆಜಮೀನನ್ನುಇದೆ ತಿಂಗಳು 28 ರಂದು ಹರಾಜು ಹಾಕಲು ಹೊರಟಿದ್ದಾರೆ. ಪುನಃ ಶಿವಕುಮಾರ್ ದಿನಾಂಕ:10.05.2025ರಂದು ಪ್ರಾದೇಶಿಕ ಕಛೇರಿಗೆ ಹೋಗಿ ಈ ಬಗ್ಗೆ ಕೇಳಿದಾಗ ಅವರು 60 ಲಕ್ಷಕಟ್ಟಿಎಂದು ನೋಟೀಸು ನೀಡಿರುತ್ತಾರೆ. ಆದ್ದರಿಂದದಯಮಾಡಿ ಲೇಟ್ ಶಾಂತೇಗೌಡ ಬಿನ್ ಲೇಟ್ ಮಲ್ಲೇಗೌಡಇವರ ಜಮೀನು ಹರಾಜು ಹಾಕದಾಗೆ ತಡೆಹಿಡಿದು ಶಿವಕುಮಾರ್ ರವರಿಗೆ ಓಟಿ.ಎಸ್ ಮುಖಾಂತರ ಸಾಲ ತೀರುವಳಿ ಮಾಡಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಬಿಟ್ಟಗೌಡನಹಳ್ಳಿ ಮಂಜು, ಆಲದಹಳ್ಳಿ ಶಶಿಧರ್, ರಾಜಣ್ಣ, ಶಿವಕುಮಾರ್, ಶೋಮಶೇಖರ್, ಪಾಲಾಕ್ಷ, ಶಂಕ ಮಂಜಣ್ಣ, ಮನು ಇತರರು ಉಪಸ್ಥಿತರಿದ್ದರು.