Home ಬ್ರೇಕಿಂಗ್ ಸುದ್ದಿ ಹಾಸನ ಸರಕಾರಿ ಶಾಲೆ ಉಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ

ಸರಕಾರಿ ಶಾಲೆ ಉಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ


ಹಾಸನ : ರಾಜ್ಯದ ಹಲವು ಭಾಗಗಳಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ತೋಟದ ಶಾಲೆಗಳು ಮುಚ್ಚುತ್ತಿರುವುದು ಶೋಚನೀಯ ಸಂಗತಿ. ಸರಕಾರಿ ಶಾಲೆಗೂ ಮೂಲಭೂತ ಸೌಕರ್ಯ, ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಇಲ್ಲದಿರುವವರಿಗೂ ಕಟ್ಟಡ ಸುರಕ್ಷತೆಗೆ ಅಗ್ನಿ ಸುರಕ್ಷತೆ ಇತರೆ ಸೌಕರ್ಯ ನೀಡುವಂಗತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಕೃಷ್ಣಗೌಡರ ಜನ್ಮದಿನದ ಪ್ರಯುಕ್ತ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿಯಾನ ಮತ್ತು ಹೋರಾಟವಾಗಿದ್ದು, ಗ್ರಾಮಗಳಲ್ಲಿ ನರೇಗಾ ದುರ್ಬಳಕೆ ಆಗುತ್ತಿದ್ದು, ಔಷಧ ಮಳಿಗೆಗಳಲ್ಲಿ ಸಂಬಂಧಿಸಿದ ವಿದ್ಯೆಯ ಪ್ರಮಾಣ ಪತ್ರ ಇಲ್ಲದವರು ಅನಧಿಕೃತ ಔಷದ ಮಾತ್ರೆಗಳನ್ನು ಸಾರ್ವಜನಿಕರಿಗೆ ಕೊಡುವುದನ್ನು ಖಂಡಿಸಿ ಮತ್ತು ದಿನಸಿ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟವಾಗಿದೆ ಎಂದರು.

ಕಾವೇರಿ ತುಂಗಭದ್ರಾ ಕೃಷ್ಣ ಮಹದಾಯಿ ಭೀಮಾ ನದಿಯ ನೀರು ಕನ್ನಡ ನಾಡಿನ ರೈತರಿಗೆ ಮೀಸಲಿರಿಸುವ ಕುರಿತು ಶಾಶ್ವತ ಪರಿಹಾರ ಕೊಡಬೇಕು ಹಾಗೂ ದಿನನಿತ್ಯದ ನಕಲಿ ದಿನಸಿ ವಸ್ತುಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ವಿರೋಧಿಸುವುದಾಗಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ತೋಟದ ಶಾಲೆಗಳು ಮುಚ್ಚುತ್ತಿರುವುದು ಶೋಚನೀಯ ಸಂಗತಿ ಗ್ರಾಮೀಣ ಭಾಗದ ಬಡ, ರೈತ, ಶೋಷಿತ ಕೂಲಿ ಕಾರ್ಮಿಕರ, ಮಕ್ಕಳು ಸರಕಾರಿ ಶಾಲೆಗಳು ತುಂಬಾ ಅನುಕೂಲವಾಗಿದ್ದು ಈ ವರ್ಷ ಅಂದರೆ 2024- 25ರಲ್ಲಿ ಇಡೀ ರಾಜ್ಯದಲ್ಲಿ ಖಾಸಗಿ ಶಾಲೆಗಳ ಪರವಾನಿಗೆ ವ್ಯಾಪಾರಿಕರಣ ನಡೆದಿದೆ ರಾಜ್ಯದಲ್ಲಿ 475 ಹೆಚ್ಚು ಹೊಸ ಶಾಲೆಗಳಿಗೆ ಪರವಾನಿಗೆ ಕೊಟ್ಟರೆ ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 125 ಶಾಲೆಗಳಿಗೂ ಅಧಿಕ ಪರವಾನಿಗೆ ಶಿಕ್ಷಣ ಇಲಾಖೆ ನೀಡಿದೆ. ನೂತನ ಶಾಲೆಗಳಿಗೆ ಪರವಾನಿಗೆ ನೀಡಬೇಕಾದರೆ ಅದರದ್ದೆ ಆದ ನಿಯಮಾನುಸಾರಗಳಿವೆ ಅದನ್ನು ಮೀರಿ ಬೇಕಾಬಿಟ್ಟಿಯಾಗಿ ವ್ಯಾಪಾರಿಕರಣ ನಡೆಸಿ ಶಾಲಾ ಕಟ್ಟಡ ಇಲ್ಲದಿರುವವರಿಗು, ಮಕ್ಕಳಿಗೆ ಶಾಲಾ ಮೂಲಭೂತ ಸೌಕರ್ಯ ಇಲ್ಲದಿರುವವರಿಗೂ, ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಇಲ್ಲದಿರುವವರಿಗೂ, ಕಟ್ಟಡ ಸುರಕ್ಷತೆ ಇಲ್ಲದಿರುವವರಿಗೆ, ಅಗ್ನಿ ಸುರಕ್ಷತೆ ನೀಡಬೇಕು ಎಂದು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹೆಚ್.ಎಂ. ರಾಘವೇಂದ್ರ, ಉಪಾಧ್ಯಕ್ಷ ಮನುಗೌಡ, ರಘು, ಸಂತೋಷ್, ಹರೀಶ್, ಕಿರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version